ಆ್ಯಪ್ನಗರ

ಸಿದ್ದರಾಮಯ್ಯ ಅಭಿಮಾನಿಗಳಿಂದ ಸರಕಾರಕ್ಕೆ ಶೆಡ್‌ ಸೆಡ್ಡು

ವಿಕ ವಿಶೇಷ ಬಾಗಲಕೋಟೆ ನೆರೆಪೀಡಿತವಾಗಿರುವ ಬಾದಾಮಿ ತಾಲೂಕಿನ ಬೀರನೂರ ಗ್ರಾಮದ ಸಂತ್ರಸ್ತರಿಗೆ ಶೆಡ್‌ ನಿರ್ಮಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಸರಕಾರಕ್ಕೆ ಸೆಡ್ಡು ಹೊಡೆಯಲಿದ್ದಾರೆ.

Vijaya Karnataka 14 Sep 2019, 5:00 am
ವಿಕ ವಿಶೇಷ ಬಾಗಲಕೋಟೆ
Vijaya Karnataka Web siddaramaiah fans shed the government
ಸಿದ್ದರಾಮಯ್ಯ ಅಭಿಮಾನಿಗಳಿಂದ ಸರಕಾರಕ್ಕೆ ಶೆಡ್‌ ಸೆಡ್ಡು


ನೆರೆಪೀಡಿತವಾಗಿರುವ ಬಾದಾಮಿ ತಾಲೂಕಿನ ಬೀರನೂರ ಗ್ರಾಮದ ಸಂತ್ರಸ್ತರಿಗೆ ಶೆಡ್‌ ನಿರ್ಮಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಸರಕಾರಕ್ಕೆ ಸೆಡ್ಡು ಹೊಡೆಯಲಿದ್ದಾರೆ.

ನೆರೆ ಆವರಿಸಿದ್ದರಿಂದ ಮಲಪ್ರಭಾ ನದಿ ಪಾತ್ರದ ಬೀರನೂರ ಗ್ರಾಮದ 48 ಕುಟುಂಬಗಳು ಕಾಳಜಿ ಕೇಂದ್ರದ ಬದಲು ರಸ್ತೆ ಬದಿಯಲ್ಲಿಟೆಂಟ್‌ಗಳಲ್ಲಿವಾಸಿಸುತ್ತಿವೆ. ಈ ಪೈಕಿ 24 ಕುಟುಂಬಗಳಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಲು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ. ಬೆಂಗಳೂರು ಹಾಗೂ ಬಾದಾಮಿಯ ಅಭಿಮಾನಿಗಳು ಸೆ.14 ರಿಂದ ಶೆಡ್‌ ನಿರ್ಮಿಸಲಿದ್ದಾರೆ.

ಏನಿದು ಸಮಸ್ಯೆ


ಬೀರನೂರ ಗ್ರಾಮದ ಬಳಿ ರಸ್ತೆ ಬದಿಯಲ್ಲಿಸದ್ಯ ಸರಕಾರಿ ಲೆಕ್ಕದ ಪ್ರಕಾರ 9 ಕುಟುಂಬಗಳು ಟೆಂಟ್‌ನಲ್ಲಿವಾಸ ಹೂಡಿವೆ. 2009ರಲ್ಲಿನೆರೆ ಪೀಡಿತವಾಗಿದ್ದ ಗ್ರಾಮದ 91 ಮನೆಗಳನ್ನು ಆಸರೆ ಯೋಜನೆಯಡಿ ಮನೆ ನಿರ್ಮಿಸಿ ಸ್ಥಳಾಂತರಿಸಲಾಗಿತ್ತು. ಆದರೆ ಹಲವಾರು ಜನರು ನೆರೆಪೀಡಿತವಾದ ಗ್ರಾಮಗಳಲ್ಲಿಯೇ ವಾಸವಾಗಿದ್ದರು. ಆಗಸ್ಟ್‌ನಲ್ಲಿಮಲಪ್ರಭಾ ನದಿಗೆ ಮಹಾಪೂರ ಬಂದಿದ್ದರಿಂದ ಇವರು ಮತ್ತೆ ಸಂತ್ರಸ್ತರಾದರು. ಇವರಿಗೆ ಮನೆಗಳು ಇದ್ದ ಕಾರಣ ಕಾಳಜಿ ಕೇಂದ್ರ ಆರಂಭಿಸಿರಲಿಲ್ಲ. ಹಲವು ಕುಟುಂಬಗಳು ಆಸರೆ ಮನೆಗಳಿಗೆ ವಾಪಸ್ಸಾಗಿದ್ದರೆ, 24 ಕುಟುಂಬಗಳು ರಸ್ತೆ ಬದಿ ವಾಸ್ತವ್ಯ ಕಂಡುಕೊಂಡಿದ್ದವು. ಇದೀಗ ಸರಕಾರಿ ಮಾಹಿತಿ ಪ್ರಕಾರ 9 ಕುಟುಂಬಗಳು ರಸ್ತೆ ಬದಿ ವಾಸಿಸುತ್ತಿವೆ. ರಸ್ತೆ ಬದಿ ವಾಸ್ತವ್ಯ ಹೂಡಿದ್ದ 35 ಕುಟುಂಬಗಳಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿ ಕೊಡಲಾಗಿದೆ.

ಇಂದಿನಿಂದ ಕಾಮಗಾರಿ

ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದ ಪ್ರಕಾರ 'ಮನೆ ಕಳೆದುಕೊಂಡು 48 ಕುಟುಂಬಗಳು ರಸ್ತೆ ಬದಿ ವಾಸವಾಗಿದ್ದವು. ಸರಕಾರ 24 ಕುಟುಂಬಗಳಿಗೆ ಮಾತ್ರ ಶೆಡ್‌ ನಿರ್ಮಿಸಿದೆ. ಇನ್ನುಳಿದ 24 ಕುಟುಂಬಗಳಿಗಾಗಿ ಶೆಡ್‌ ನಿರ್ಮಿಸಿಕೊಡಲಾಗುತ್ತದೆ. ಶನಿವಾರದಿಂದ ಕಾಮಗಾರಿ ಆರಂಭಿಸಲಾಗುತ್ತದೆ' ಎಂದು ಹೇಳಲಾಗುತ್ತಿದೆ. ಹಾನಿಗೊಳಗಾದ ಮನೆಗಳ ಸಮೀಕ್ಷೆ ಸರಿಯಾಗಿ ನಡೆದಿಲ್ಲಎಂಬ ಆರೋಪದ ಹಿನ್ನೆಲೆಯಲ್ಲಿಶಾಸಕ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಸಮೀಕ್ಷೆ ನಡೆಸಲು ಸೂಚಿಸಿದ್ದರು.

ಇದರೊಂದಿಗೆ ಸರಕಾರಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯ ಅಭಿಮಾನಿಗಳೇ ಶೆಡ್‌ ನಿರ್ಮಿಸಿ ಕೊಡುತ್ತಿದ್ದಾರೆ. ಜಿಲ್ಲಾಡಳಿತದ ಸಮೀಕ್ಷೆ ಸಮರ್ಪಕವಾಗಿರದ ಕಾರಣ ಹಲವು ಸಂತ್ರಸ್ತರು ಬೀದಿಯಲ್ಲಿದ್ದಾರೆ ಎಂಬುದು ಸಿದ್ದರಾಮಯ್ಯ ಅಭಿಮಾನಿ ಬಳಗದ ಆರೋಪ. ಶೆಡ್‌ಗಳ ನಿರ್ಮಾಣ ಸರಕಾರ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

ಜಿಲ್ಲಾಡಳಿತದ ಸಮೀಕ್ಷೆ ಪ್ರಕಾರ 24 ಕುಟುಂಬಗಳಿಗೆ ಮಾತ್ರ ಶೆಡ್‌ ನಿರ್ಮಿಸಲಾಗುತ್ತಿದೆ. ಶೇ.75ಕ್ಕಿಂತ ಹೆಚ್ಚಿನ ಹಾನಿಗೊಳಗಾದ 48 ಕುಟುಂಬಗಳಿವೆ. ಹೀಗಾಗಿ ಇನ್ನುಳಿದ ಕುಟುಂಬಗಳಿಗೆ ಅಭಿಮಾನಿಗಳು ಶೆಡ್‌ ನಿರ್ಮಿಸಲಿದ್ದಾರೆ.

ಹೊಳೆಬಸು ಶೆಟ್ಟರ, ಕಾಂಗ್ರೆಸ್‌ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ