ಆ್ಯಪ್ನಗರ

ಕ್ಷೇತ್ರದ ಜನರ ಕಷ್ಟಕ್ಕೆಸಿದ್ದರಾಮಯ್ಯ ನಿರ್ಲಕ್ಷ

ಬಾದಾಮಿ ಶಾಸಕ ಸಿದ್ದರಾಮಯ್ಯನವರು ಕೊರೊನಾ ಸಂಕಷ್ಟದಲ್ಲಿಕ್ಷೇತ್ರದಲ್ಲಿರದೇ ನಿರ್ಲಕ್ಷಿಸಿದ್ದಾರೆ. ಕೇವಲ ವಿಡಿಯೋ, ಫೋನ್‌ ಮುಖಾಂತರ ಜಿಲ್ಲಾಡಳಿತ, ತಾಲೂಕಾಡಳಿತದಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆಯೇ ಹೊರತು ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲಎಂದು ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ದೂರಿದರು.

Vijaya Karnataka Web 9 May 2020, 5:00 am
ಗುಳೇದಗುಡ್ಡ: ಬಾದಾಮಿ ಶಾಸಕ ಸಿದ್ದರಾಮಯ್ಯನವರು ಕೊರೊನಾ ಸಂಕಷ್ಟದಲ್ಲಿಕ್ಷೇತ್ರದಲ್ಲಿರದೇ ನಿರ್ಲಕ್ಷಿಸಿದ್ದಾರೆ. ಕೇವಲ ವಿಡಿಯೋ, ಫೋನ್‌ ಮುಖಾಂತರ ಜಿಲ್ಲಾಡಳಿತ, ತಾಲೂಕಾಡಳಿತದಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆಯೇ ಹೊರತು ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲಎಂದು ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ದೂರಿದರು.
Vijaya Karnataka Web siddramaya-1


ಸುದ್ದಿಗೋಷ್ಠಿಯಲ್ಲಿಮಾತನಾಡಿ, ಕೆಲ ದಿನಗಳಿಂದ ತಾಲೂಕಿನಲ್ಲಿಕೊರೊನಾ ತಾಲೂಕಿಗೆ ಕಾಲಿಟ್ಟಿದ್ದು, 14 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಆದರೆ, ಜನರ ಕಷ್ಟಗಳನ್ನು ಕೇಳಲು ನಮ್ಮ ಶಾಸಕರು ಕ್ಷೇತ್ರಕ್ಕೆ ಬಂದಿಲ್ಲಎಂದು ಆರೋಪಿಸಿದರು.

ಸಮೀಪದ ಚಿಕ್ಕಮುಚ್ಚಳಗುಡ್ಡ ಗ್ರಾಮದ ಶಾಲೆಯೊಂದರಲ್ಲಿಎಲ್ಲರನ್ನು ಒಂದೇಡೆ ಕ್ವಾರಂಟೈನ್‌ನಲ್ಲಿಇಟ್ಟು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಅಧಿಕಾರಿಗಳು ತಾಲೂಕಿನಲ್ಲಿಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಆಗ್ರಹಿಸಿದರು.

ಚಂದ್ರಕಾಂತ ಶೇಖಾ, ಮಹೇಶ ಬಿಜಾಪೂರ, ಅನ್ವರಖಾನ ಪಠಾಣ, ಸಂಗಪ್ಪ ಚಟ್ಟೇರ, ರಾಘು ಗೋವಿನಕೊಪ್ಪ, ರಾಘು ಪತ್ತಾರ, ಬಸವರಾಜ ಗೌಡರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ