ಆ್ಯಪ್ನಗರ

ಮದುವೆ ಮಂಟಪದಲ್ಲಿಚಿನ್ನಾಭರಣ ಕಳ್ಳತನ

ಬಾಗಲಕೋಟೆ: ಮದುವೆ ಮಂಟಪದಲ್ಲಿಮಹಿಳೆಯೊಬ್ಬರ ಚಿನ್ನಾಭರಣ ದೋಚಿದ ಘಟನೆ ನಗರದಲ್ಲಿಭಾನುವಾರ ನಡೆದಿದೆ.

Vijaya Karnataka 17 Feb 2020, 5:00 am
ಬಾಗಲಕೋಟೆ: ಮದುವೆ ಮಂಟಪದಲ್ಲಿಮಹಿಳೆಯೊಬ್ಬರ ಚಿನ್ನಾಭರಣ ದೋಚಿದ ಘಟನೆ ನಗರದಲ್ಲಿಭಾನುವಾರ ನಡೆದಿದೆ.
Vijaya Karnataka Web small jewelry theft in a wedding hall
ಮದುವೆ ಮಂಟಪದಲ್ಲಿಚಿನ್ನಾಭರಣ ಕಳ್ಳತನ


ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿನಡೆದ ಬೀಳಗಿ ಮೂಲದ ಕುಟುಂಬದ ಮದುವೆ ಸಮಾರಂಭದಲ್ಲಿಚಿನ್ನ ದೋಚಲಾಗಿದೆ. ಮದುವೆಗೆ ಆಗಮಿಸಿದ್ದ ಬೆಂಗಳೂರಿನ ದಾನೇಶ್ವರಿ ಅಣ್ಣಪ್ಪನವರ ಅವರ ಬ್ಯಾಗ್‌ನಲ್ಲಿದ್ದ ಅಂದಾಜು 8 ಲಕ್ಷ ರೂ. ಮೌಲ್ಯದ 15 ತೊಲ ಚಿನ್ನ ದೋಚಲಾಗಿದೆ.

ತಮ್ಮ ಸಂಬಂಧಿಕರ ಮದುವೆಗಾಗಿ ದಾನೇಶ್ವರಿ ಅವರು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಎಲ್ಲರೂ ಮೆರವಣಿಗೆ, ಮದುವೆ ಕಾರ್ಯಕ್ರಮಗಳಲ್ಲಿಪಾಲ್ಗೊಂಡಿದ್ದರು. ಕೋಣೆಯೊಂದರಲ್ಲಿಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ. ಬ್ಯಾಗ್‌ ಇದ್ದ ಕೋಣೆಗೆ ಬಂದು ಹೋದ ಆಗಂತುಕರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ದಾನೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದು, ಸಿಪಿಐ ಐ.ಆರ್‌.ಪಟ್ಟಣಶೆಟ್ಟಿ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ