ಆ್ಯಪ್ನಗರ

ಸಮಾಜ ಗುರು, ಹಿರಿಯರನ್ನು ಗೌರವಿಸಿ

ಜಮಖಂಡಿ: ಸಮಾಜ ನನಗೆ ಏನು ಕೊಟ್ಟಿದೆ ಎಂಬುವುದಕ್ಕಿಂತ ಸಮಾಜಕ್ಕೆ ನಾನೂ ಏನು ನೀಡಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ತಮ್ಮನ್ನು ಬೆಳೆಸಿರುವ ಸಮಾಜದ ಗುರು-ಹಿರಿಯರನ್ನು, ಹೆತ್ತವರನ್ನು ಗೌರವದಿಂದ ಕಾಣಬೇಕು. ತಾವು ಅಲಂಕರಿಸಿದ ಹುದ್ದೆಗೆ ಗೌರವ ಬರುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

Vijaya Karnataka 10 Jun 2019, 5:00 am
ಜಮಖಂಡಿ: ಸಮಾಜ ನನಗೆ ಏನು ಕೊಟ್ಟಿದೆ ಎಂಬುವುದಕ್ಕಿಂತ ಸಮಾಜಕ್ಕೆ ನಾನೂ ಏನು ನೀಡಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ತಮ್ಮನ್ನು ಬೆಳೆಸಿರುವ ಸಮಾಜದ ಗುರು-ಹಿರಿಯರನ್ನು, ಹೆತ್ತವರನ್ನು ಗೌರವದಿಂದ ಕಾಣಬೇಕು. ತಾವು ಅಲಂಕರಿಸಿದ ಹುದ್ದೆಗೆ ಗೌರವ ಬರುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
Vijaya Karnataka Web social guru respect the elderly
ಸಮಾಜ ಗುರು, ಹಿರಿಯರನ್ನು ಗೌರವಿಸಿ


ನಗರದ ಕಾಡಸಿದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ತಾಲೂಕು ಗಾಣಿಗ ಸಮಾಜ ಹಾಗೂ ಗಾಣಿಗ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜಕ್ಕೆ ಸ್ಥಳದ ಕೊರತೆ ಇದ್ದು ಅದಕ್ಕೆ ನ್ಯಾಮಗೌಡ ಕುಟುಂಬದಿಂದ ವೈಯಕ್ತಿಕವಾಗಿ 25 ಲಕ್ಷ ರೂ., ಮತ್ತು ಸರಕಾರದಿಂದ ಹೆಚ್ಚಿನ ಅನುದಾನ ತರಲು ಕೆಲಸ ಮಾಡುತ್ತೇನೆ ಹಾಗೂ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ನಮ್ಮ ತಾಯಿಯವರ ಹೆಸರಿನಲ್ಲಿ ಜ್ಯೋತಿ ಬ್ಯಾಂಕ್‌ನಲ್ಲಿ 2 ಲಕ್ಷ ರೂ., ಡಿಪಾಸಿಟ್‌ ಹಣದಿಂದ ಬರುವ ಬಡ್ಡಿ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷ ಣ ಮುಂದುವರಿಸಲು ಮೀಸಲು ಇಡುತ್ತೇವೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ ಮಾತನಾಡಿ, ಹೆತ್ತವರನ್ನು, ವಿದ್ಯೆ ಕಲಿಸಿರುವ ಗುರುಗಳನ್ನು, ನೆಲ, ಜಲ, ಭಾಷೆ, ಸಮಾಜವನ್ನು ಹೃದಯವಂತಿಕೆಯಿಂದ ಪ್ರೀತಿಸಬೇಕು. ಸಮಾಜಕ್ಕೆ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತಮಗೆ ಆಗುವಂತಹ ಸಹಾಯವನ್ನು ಮಾಡಬೇಕು ಎಂದರು.

ಗಾಣಿಗ ಸಮಾಜದ ಅಧ್ಯಕ್ಷ ಕೆ.ಕೆ.ತುಪ್ಪದ ಮಾತನಾಡಿದರು. ಸಿದ್ಧಮುತ್ಯಾ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗಿರಮಲ್ಲೇಶ್ವರ ಆಶ್ರಮದ ಗುರುಸಿದ್ಧ ಮಹಾರಾಜರು, ಉಪಾಧ್ಯಕ್ಷ ನಾಗಪ್ಪ ಮುತ್ತಕ್ಕನವರ, ನಂದೆಪ್ಪ ತುಪ್ಪದ, ದುಂಡಪ್ಪ ಹಿಪ್ಪರಗಿ, ಹಣಮಂತ ಮರನೂರ, ಸುಖನ್ಯಾ ಜಂಬಗಿ, ವೀರೇಂದ್ರ ಕಲೂತಿ, ರಾಜೇಶ್ವರಿ ನ್ಯಾಮಗೌಡ ಇದ್ದರು. ಸಂಗಮೇಶ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ