ಆ್ಯಪ್ನಗರ

ಸೈನಿಕ, ಶಿಕ್ಷ ಕ, ಕೃಷಿಕ ಕಾರ್ಯ ಸಾರ್ಥಕ

ಬೀಳಗಿ : ಪುಲ್ವಾಮಾ ದಾಳಿ ಹೇಡಿಗಳ ದುಷ್ಕಾರ್ಯವಾಗಿದೆ. ದೇಶದ 44 ಸೈನಿಕರು ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ರಣಹೇಡಿಗಳ ಕೆಲಸ ಬಿಟ್ಟು ಧೈರ್ಯವಿದ್ದರೆ ಎದುರಿಗೆ ಬಂದು ಹೋರಾಡಲಿ ಎಂದು ಭಯೋತ್ಪಾದಕರ ಹೇಡಿತನವನ್ನು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಖಂಡಿಸಿದರು.

Vijaya Karnataka 15 Mar 2019, 5:00 am
ಬೀಳಗಿ : ಪುಲ್ವಾಮಾ ದಾಳಿ ಹೇಡಿಗಳ ದುಷ್ಕಾರ್ಯವಾಗಿದೆ. ದೇಶದ 44 ಸೈನಿಕರು ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ರಣಹೇಡಿಗಳ ಕೆಲಸ ಬಿಟ್ಟು ಧೈರ್ಯವಿದ್ದರೆ ಎದುರಿಗೆ ಬಂದು ಹೋರಾಡಲಿ ಎಂದು ಭಯೋತ್ಪಾದಕರ ಹೇಡಿತನವನ್ನು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಖಂಡಿಸಿದರು.
Vijaya Karnataka Web soldier teacher and agriculturalist is best worker
ಸೈನಿಕ, ಶಿಕ್ಷ ಕ, ಕೃಷಿಕ ಕಾರ್ಯ ಸಾರ್ಥಕ


ತಾಲೂಕಿನ ಗಿರಿಸಾಗರ ಗ್ರಾಮದ ಕಲ್ಯಾಣ ಹಿರೇಮಠದ ಲಿಂ.ಮುಕ್ತಿನಾಥ ಶಿವಾಚಾರ್ಯರ ಪುಣ್ಯಾರಾಧನೆ ಹಾಗೂ ಸಂಗನಬಸವ ಶಿವಾಚಾರ್ಯ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀೕರಯೋಧರ ಸ್ಮರಣಾರ್ಥ ಸೈನಿಕ, ಶಿಕ್ಷ ಕ, ಕೃಷಿಕ ಸಾಧಕರಿಗೆ ಗೌರವ ಸನ್ಮಾನ ಸಮಾರಂಭಧ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಲಿಂ.ಮುಕ್ತಿನಾಥ ಶಿವಾಚಾರ್ಯರು ಭಕ್ತರಿಗೆ ಧರ್ಮಸಂದೇಶ ನೀಡುವುದರ ಜೊತೆಗೆ ಸಂಸ್ಕಾರ, ಸಂಸ್ಕೃತಿ ಅರಹುವ ಕೆಲಸ ಮಾಡಿದ ಮಹಾನ ಶ್ರೇಷ್ಠ ಸದ್ಗುರುವಾಗಿದ್ದರು ಎಂದು ಬಣ್ಣಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರಶಿಕ್ಷ ಣಾಧಿಕಾರಿ ಎಚ್‌.ಜಿ.ಮಿರ್ಜಿ ಮಾತನಾಡಿ ತಮಗಾಗಿ ದುಡಿಯದೇ ಮತ್ತೊಬ್ಬರಿಗಾಗಿ ದುಡಿಯುವ ಸೈನಿಕರು, ಶಿಕ್ಷ ಕರು, ಕೃಷಿಕರ ಬದುಕು ಸಾರ್ಥಕ ಬದುಕಾಗಿದೆ ಎಂದರು.

ಸನ್ಮಾನಿತರು:

ಸಿದ್ದಯ್ಯ ಚೌಕಿಮಠ, ಧರಿಯಪ್ಪ ಹೊನ್ಯಾಳ, ದುಂಡಪ್ಪ ಸಂಧಿಮನಿ, ಶ್ರೀಶೈಲ ಪಸಾರ, ಶಂಕ್ರೆಪ್ಪ ಪರಗೊಂಡ ಸೇರಿದಂತೆ 22 ಜನ ನಿವೃತ್ತ ಯೋಧರು, ಆದರ್ಶ ಶಿಕ್ಷ ಕರಾದ ಗುರುರಾಜ ಲೂತಿ, ಸೋಮಲಿಂಗ ಬೇಡರ, ಎಚ್‌. ಬಿ. ಅರಷಣಗಿ, ಡಿ. ಎಸ್‌. ಕಂಬಾರ, ಎನ್‌. ಎಸ್‌. ದಳವಾು, ಎಸ್‌. ಬಿ. ಪಾಟೀಲ, ಪ್ರಗತಿಪರ ರೈತರಾದ ದುಂಡಪ್ಪ ಹಳ್ಳಿ, ಸಂಗಯ್ಯ ಹಿರೇಮಠ, ಯಮನಪ್ಪ ಮೇಟಿ, ಫಕೀರಸಾಬ ನದಾಫ, ರ್ಟ್ರಾೕಯ ಮಾಧ್ಯಮ ಲೋಕ ಪ್ರಸಸ್ತಿ ಪುರಷ್ಕೃತ ಪತ್ರಕರ್ತ ಡಿ.ಎಂ.ಸಾಹುಕಾರ, ಪ್ರಕಾಶ ಸುಣಗಾರ.

ಮುದ್ದಪ್ಪಗೌಡ ಪಾಟೀಲ ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪುಲ್ವಾಮಾ ದಾಳಿಯಲ್ಲಿ ಮಡಿದ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ಮೌನಾಚರಣೆ ಮಾಡಲಾಯಿತು. ಲಿಂ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಮತ್ತು ಮಹಾಪ್ರಸಾದ ಜರುಗಿತು.

ಚಿಮ್ಮಲಗಿಯ ನೀಲಕಂಠ ಶಿವಾಚಾರ್ಯಶ್ರೀಗಳು, ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯರು, ಬಿಲ್‌ ಕೆರೂರದ ಸಿದ್ಧಲಿಂಗ ಶಿವಾಚಾರ್ಯರು, ಬೀಳಗಿ ಬ್ರಹನ್ಮಠದ ಶಿವಾನಂದ ದೇವರು ಸಾನ್ನಿಧ್ಯ ವಹಿಸಿದ್ದರು. ವರ್ತಕ ಕುಮಾರ ಯಳ್ಳಿಗುತ್ತಿ ಅಧ್ಯಕ್ಷ ತೆ ವಹಿಸಿದ್ದರು. ಅತಿಥಿಗಳಾಗಿ ಎಂ.ಬಿ.ಕುಬಕಡ್ಡಿ, ಎಸ್‌.ಆರ್‌.ಹೂಗಾರ, ಬಿ.ಆರ್‌.ರಾಠೋಡ ಸೇರಿದಂತೆ ಮತ್ತಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ