ಆ್ಯಪ್ನಗರ

ಸಿದ್ದರಾಮಯ್ಯ ಮಾತು ಕೇಳಿದರೆ ಮನೆಗೆ ಹೋಗ್ತೀರಿ: ತನ್ನ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಸೋಮಣ್ಣ

ಟಿಪ್ಪು ಜಯಂತಿ ವಿಚಾರವಾಗಿ ಸಿದ್ದರಾಮಯ್ಯ ಹೇಳಿದಂತೆ ಕೇಳಬೇಡಿ. ಸರಕಾರದ ಆದೇಶ ಪಾಲಿಸಿ ಎಂದು ಸಚಿವ ಸೋಮಣ್ಣ ಅಧಿಕಾರಿಗಳ ಎದುರು ಗರಂ ಆಗಿದ್ದರು. ತಮ್ಮ ಈ ಹೇಳಿಕೆಯನ್ನು ಸಚಿವರು ಬಾಗಲಕೋಟೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

Vijaya Karnataka Web 6 Nov 2019, 4:49 pm
ಬಾಗಲಕೋಟೆ: ಟಿಪ್ಪು ಜಯಂತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸರಕಾರದ ಆದೇಶ ಏನಿದೆಯೋ ಅದನ್ನು ಸೀರಿಯಸ್ ಆಗಿ ಫಾಲೋ ಮಾಡಿ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದನ್ನು ವಸತಿ ಸಚಿವ ವಿ ಸೋಮಣ್ಣ ಬಾಗಲಕೋಟೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web somanna


ಸಿದ್ದರಾಮಯ್ಯ ಮಾತು ಕೇಳಿದರೆ ಮನೆಗೆ ಹೋಗ್ತೀರಿ: ಅಧಿಕಾರಿಗಳಿಗೆ ಸೋಮಣ್ಣ ವಾರ್ನಿಂಗ್‌

ಮೈಸೂರಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಅಧಿಕಾರಿಗಳಿಗೆ ಸರಕಾರಿ ಆದೇಶ ಪಾಲಿಸಿ ಎಂದಿದ್ದೇನೆ. ಯಾರು ಹೇಳಿದ್ರೂ ಮಾಡೋಕೆ ಹೋಗ್ಬೇಡಿ ಎಂದಿದ್ದೇನೆ. ಇದರಲ್ಲಿ ತಪ್ಪೇನಿದೆ. ಇದರಲ್ಲಿ ಒತ್ತಡದ ಪ್ರಶ್ನೆ ಬರಲ್ಲ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದನ್ನು ಸಚಿವ ಸೋಮಣ್ಣ ಸಮರ್ಥಿಸಿಕೊಂಡಿದ್ದಾರೆ.

ಬಿಎಸ್‌ವೈ-ಎಚ್‌ಡಿಕೆ ಸಂಬಂಧಕ್ಕೆ ಉಪ್ಪು ಕಾರ ಹಾಕುವಂತಹದ್ದೇನು ಬೇಡ: ವಿ ಸೋಮಣ್ಣ

ಅಲ್ಲದೆ, ಯಾವ ಸರಕಾರ ಇರುತ್ತೋ ಆ ಸರಕಾರದ ಆದೇಶ ಪಾಲಿಸ್ಬೇಕು. ಸಿದ್ದರಾಮಯ್ಯ ಮೈಸೂರಿನ ಪ್ರಭಾವಿ ನಾಯಕ. ಅವ್ರು ಹೇಳಿದ್ರು ಕೇಳ್ಬೇಡಿ,ನಾನು ಹೇಳಿದ್ರು ಕೇಳ್ಬೇಡಿ. ಸರಕಾರದ ಆದೇಶ ಪಾಲಿಸಿ ಎಂದು ಮಾಧ್ಯಮದವರಿದ್ದಾಗಲೇ ಹೇಳಿದ್ದೇನೆ ಎಂದೂ ಸೋಮಣ್ಣ ಹೇಳಿಕೊಂಡಿದ್ದಾರೆ.

ಟಿಪ್ಪು ಅಭಿಮಾನದಲ್ಲಿ ಸಿದ್ಧರಾಮಯ್ಯ ಕುರುಡಾಗಿದ್ದಾರೆ: ಆರ್‌. ಅಶೋಕ್‌

ಜತೆಗೆ, ನನಗೆ ಭಯ ಇಲ್ಲ. ಸರಕಾರದ ಸೂಚನೆ ಪಾಲಿಸಿ ಎಂದಿದ್ದೇನೆ. ಪ್ರವಾಹ ಸಂದರ್ಭದಲ್ಲಿ ಜಯಂತಿ ಬೇಕಾ? ಟಿಪ್ಪು ಜಯಂತಿ ಮಾಡಿ ಎಂದು ಯಾರೂ ಅರ್ಜಿ ಹಾಕಿರಲಿಲ್ಲ. ಸಮಾಜದವರೂ ಹೇಳಿರಲಿಲ್ಲ‌‌. ವೋಟ್ ತೀಟೆಗೋಸ್ಕರ ಮಾಡಿದ್ರು ಎಂದು ಟಿಪ್ಪು ಜಯಂತಿ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ್ದಾರೆ.

ಇನ್ನೊಂದೆಡೆ, ನಾನು ಮೈಸೂರಿನಲ್ಲಿ ಹಿಂದೆ ಇದ್ದ ಅಧಿಕಾರಿಗಳೇ ಇದ್ದಾರೆ. ಯಾರನ್ನೂ ವರ್ಗಾವಣೆ ಮಾಡೋಕೆ ಹೋಗ್ಲಿಲ್ಲ. ಯಾರೊಂದಿಗೂ ಒಳ ಒಪ್ಪಂದ ನನ್ನದಿಲ್ಲ. ಸರಕಾರ ಹರಿಯೋ ನೀರು ಇದ್ದ ಹಾಗೆ ಎಂದು ವಸತಿ ಸಚಿವ ಸೋಮಣ್ಣ ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ