ಆ್ಯಪ್ನಗರ

ವಿಕೃತ ಮನಸ್ಸು ಕ್ಷಮಿಸುತ್ತೇವೆ: ಎಂ.ಬಿ.ಪಾಟೀಲ

ಬಾಗಲಕೋಟ: 'ಮಾತೆ ಮಹಾದೇವಿಯವರ ನಿಧನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದ ಮನಸ್ಸುಗಳನ್ನು ನಾವು ಕ್ಷಮಿಸುತ್ತೇವೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

Vijaya Karnataka 17 Mar 2019, 5:00 am
ಬಾಗಲಕೋಟ: 'ಮಾತೆ ಮಹಾದೇವಿಯವರ ನಿಧನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದ ಮನಸ್ಸುಗಳನ್ನು ನಾವು ಕ್ಷಮಿಸುತ್ತೇವೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
Vijaya Karnataka Web sorry for the distorted mind mb patil
ವಿಕೃತ ಮನಸ್ಸು ಕ್ಷಮಿಸುತ್ತೇವೆ: ಎಂ.ಬಿ.ಪಾಟೀಲ


ಜಿಲ್ಲೆಯ ಕೂಡಲಸಂಗಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕೆಲವರು ಸಾಮಾಜಿಕ ತಾಣಗಳಲ್ಲಿ ವಿಕೃತಿ ಮೆರೆದಿರುವುದು ಗಮನಕ್ಕೆ ಬಂದಿದೆ, ಇಂತಹ ಮನಸ್ಸುಳ್ಳವರಿಗೆ ಏನೂ ಹೇಳುವಂತಿಲ್ಲ. ಬಸವಣ್ಣ, ಯೇಸು ಹಾಗೂ ಗೌತಮ ಬುದ್ಧರಂತಹವರನ್ನೂ ಇವರು ಬಿಟ್ಟಿಲ್ಲ. ಬಸವ ಧರ್ಮದಲ್ಲಿ ಇಂತಹ ವಿಕೃತ ಕೃತ್ಯಕ್ಕೆ ಕ್ಷಮೆಯಿರಲಿ ಎಂದು ಹೇಳಲಾಗಿದೆ, ಹೀಗಾಗಿ ನಾವು ಇಂತಹವರನ್ನು ಕ್ಷಮಿಸುತ್ತೇವೆ'ಎಂದು ತಿಳಿಸಿದರು.

'ಐದು ದಶಕಗಳ ಕಾಲ ಬಸವ ಧರ್ಮಕ್ಕೆ ವಿಶಿಷ್ಟವಾದ ಕೊಡುಗೆಯನ್ನು ಮಾತಾಜಿ ನೀಡಿದ್ದಾರೆ. ಕೂಡಲಸಂಗಮದ ಉಳಿವು, ಅಭಿವೃದ್ಧಿ ಹಾಗೂ ಜಗತ್ತಿನಾದ್ಯಂತ ಕೂಡಲಸಂಗಮ ಪ್ರಚಾರಗೊಳ್ಳಲು ಮಾತಾಜಿ ಕಾರಣರಾಗಿದ್ದಾರೆ. ಬಸವಣ್ಣನವರ ವಚನಗಳನ್ನು ಜನಸಾಮಾನ್ಯರಿಗೆ ಮಾತಾಜಿ ತಲುಪಿಸಿದ್ದಾರೆ. ಬಸವ ಧರ್ಮ ಹಾಗೂ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ಬೆಳಗಬೇಕು ಎಂಬುದು ಅವರ ಆಸೆಯಾಗಿತ್ತು. ಅವರು ಲಿಂಗೈಕ್ಯರಾಗಿದ್ದರೂ ಸದಾ ನಮ್ಮೊಂದಿಗಿರುತ್ತಾರೆ' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ