ಆ್ಯಪ್ನಗರ

ಚಾಲುಕ್ಯರ ಬೀಡಲ್ಲಿ ಶಿಲಾಯುಗದ ಆಯುಧ?: ಬಾದಾಮಿ ಸಮೀಪ ಗ್ರಾಮಗಳ ಗುಡ್ಡಗಳಲ್ಲಿ ಪತ್ತೆ?

ಚೊಳಚಗುಡ್ಡದ ಗುಡ್ಡದಿಂದ ಲಖಮಾಪೂರವರೆಗಿನ ಅಂದಾಜು 10 ಕಿಮೀ ಉದ್ದದ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿ ತಮಿನಾಳ ಮತ್ತು ಕಾತರಕಿ ಗುಡ್ಡಗಾಡು ಪ್ರದೇಶದಲ್ಲಿ ಶಿಲಾಯುಧಗಳು ಲಭ್ಯವಾಗುತ್ತಿವೆ. ಕೈಗೊಡಲಿ, ಬ್ಯೂರಿನ್‌, ಕೀಮ್‌, ಚಾಪರ್‌, ಸ್ಕ್ರೀಪರ್‌ ಆಯುಧಗಳಿವೆ.

Vijaya Karnataka Web 21 Jan 2021, 2:55 pm
ಬಾದಾಮಿ (ಬಾಗಲಕೋಟೆ): ತಾಲೂಕಿನ ತಮಿನಾಳ, ಕಾತರಕಿ ಗ್ರಾಮಗಳ ರಂಗನಾಥ ಗುಡ್ಡದಲ್ಲಿ ಶಿಲಾಯುಗದ ಪಳಿಯುಳಿಕೆಗಳು ಕಂಡುಬಂದಿವೆ ಎಂದು ಅಭಿಪ್ರಾಯಪಟ್ಟಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಾಗಪುರ ತಂಡ, ಈ ಪ್ರದೇಶದ ಸಂರಕ್ಷಣೆ ಮಾಡಲು ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಗೆ ಒತ್ತಾಯಿಸಿದೆ.
Vijaya Karnataka Web ಪುರಾತತ್ವ ಇಲಾಖೆಯ ಸಿಬ್ಬಂದಿ ಪರಿಶೀಲನೆ
ಪುರಾತತ್ವ ಇಲಾಖೆಯ ಸಿಬ್ಬಂದಿ ಪರಿಶೀಲನೆ


ನಾಗಪುರ ಶಾಖೆಯ ಮುಖ್ಯಸ್ಥ ರಮೇಶ ಮೂಲಿಮನಿ, ತಂಡದ ಸದಸ್ಯರಾದ ಡಾ. ಗಜಾನನ ಕತಾಡೆ, ಡಾ.ನರ್ಸಿಲಾಲ್‌, ಡಾ.ದೇವೇಂದ್ರ ಸೇರಿದಂತೆ ಪುರಾತತ್ವ ಇಲಾಖೆಯ ಸಿಬ್ಬಂದಿ ಜತೆಗೆ ಈ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ಚೊಳಚಗುಡ್ಡದ ಗುಡ್ಡದಿಂದ ಲಖಮಾಪೂರವರೆಗಿನ ಅಂದಾಜು 10 ಕಿಮೀ ಉದ್ದದ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿ ತಮಿನಾಳ ಮತ್ತು ಕಾತರಕಿ ಗುಡ್ಡಗಾಡು ಪ್ರದೇಶದಲ್ಲಿ ಶಿಲಾಯುಧಗಳು ಲಭ್ಯವಾಗುತ್ತಿವೆ. ಕೈಗೊಡಲಿ, ಬ್ಯೂರಿನ್‌, ಕೀಮ್‌, ಚಾಪರ್‌, ಸ್ಕ್ರೀಪರ್‌ ಆಯುಧಗಳಿವೆ. ಇವೆಲ್ಲಾ ಹಳೆಯ ಶಿಲಾಯುಗಕ್ಕೆ ಸೇರಿದ್ದು ಎಂದು ಅಭಿಪ್ರಾಯಪಟ್ಟರು.

ಖ್ಯಾಡ ಪರಿಸರ ಶಿಲಾಯುಗದ ಮಹತ್ವದ ನೆಲೆಯಾಗಿದೆ. ಇಲ್ಲಿ ಹಲವಾರು ಶಿಲಾಯುಧಗಳು ಹೇರಳವಾಗಿ ಲಭಿಸಲಿವೆ. ಈ ಶೋಧಿತ ಸ್ಥಳವೇ ಕಾತರಕಿ, ತಮಿನಾಳ ಮಧ್ಯದ ರಂಗನಾಥ ಬೆಟ್ಟದ ಪ್ರದೇಶವಾಗಿದೆ. ಚಾಲುಕ್ಯರ ಕಾಲಕ್ಕೂ ಮೊದಲಿನ ಈ ಶಿಲಾಯುಧಗಳು ಮುಂದಿನ ಪೀಳಿಗೆಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿಪ್ರತಿಯೊಬ್ಬ ನಾಗರಿಕರು ಗುಡ್ಡದ ಕಲ್ಲುಗಳು ಹೊರ ಹೋಗದಂತೆ ಜವಾಬ್ದಾರಿ ತೋರಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ