ಅಮೀನಗಡ: ಶಾಲೆ ಕೋಣೆ ನಿರ್ಮಾಣಕ್ಕೆ ತೋಡಿದ ತಗ್ಗು ಗುಂಡಿಯಲ್ಲಿ ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ಬಿದ್ದು ಸಾವನ್ನಪ್ಪಿದ ಘಟನೆ ಸಮೀಪದ ಸೂಳೆಬಾವಿಯಲ್ಲಿ ನಡೆದಿದೆ.
ಗಣೇಶ ಸಂಗಪ್ಪ ನಡಕಟ್ಟಿ (8) ಮೃತ ವಿದ್ಯಾರ್ಥಿ. ಸ್ಥಳೀಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಈತ ಶಾಲೆಯ ರಜೆ ಅವಧಿಯಲ್ಲಿ ಶನಿವಾರ ಬೆಳಗ್ಗೆ ಆಟವಾಡಲು ತೆರಳಿದಾಗ ಈ ದುರ್ಘಟನೆ ನಡೆದಿದೆ.
ಶಾಲೆಯ ಕೋಣೆ ನಿರ್ಮಾಣಕ್ಕೆಂದು ದೊಡ್ಡ ದೊಡ್ಡ ಗುಂಡಿ ತೋಡಲಾಗಿದ್ದು. ಒಂದು ತಿಂಗಳಿನಿಂದ ಹಾಗೆಯೇ ಬಿಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿತ್ತು. ಈಗಾಗಲೇ ಹಲವು ವಿದ್ಯಾರ್ಥಿಗಳು ಗುಂಡಿಯಲ್ಲಿ ಬಿದ್ದಿದ್ದರು, ಆದರೆ ಪ್ರಾಣಾಪಾಯದಿಂದ ಪಾರಾಗಿದ್ದರು. ಪದೇ ಪದೇ ವಿದ್ಯಾರ್ಥಿಗಳು ಗುಂಡಿಗೆ ಬಿದ್ದ ಪ್ರಕರಣ ವರದಿಯಾದರೂ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ ವಹಿಸಿತ್ತು.
ಮತ್ತೀಗ ಈ ನಿರ್ಲಕ್ಷದಿಂದಾಗಿಯೇ ಬಾಲಕ ಸಾವನ್ನಪ್ಪಿದ್ದಾನೆ.
ಗಣೇಶ್ ಸಾವಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಂಬಂದಿಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗಣೇಶ ಸಂಗಪ್ಪ ನಡಕಟ್ಟಿ (8) ಮೃತ ವಿದ್ಯಾರ್ಥಿ. ಸ್ಥಳೀಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಈತ ಶಾಲೆಯ ರಜೆ ಅವಧಿಯಲ್ಲಿ ಶನಿವಾರ ಬೆಳಗ್ಗೆ ಆಟವಾಡಲು ತೆರಳಿದಾಗ ಈ ದುರ್ಘಟನೆ ನಡೆದಿದೆ.
ಶಾಲೆಯ ಕೋಣೆ ನಿರ್ಮಾಣಕ್ಕೆಂದು ದೊಡ್ಡ ದೊಡ್ಡ ಗುಂಡಿ ತೋಡಲಾಗಿದ್ದು. ಒಂದು ತಿಂಗಳಿನಿಂದ ಹಾಗೆಯೇ ಬಿಡಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿತ್ತು. ಈಗಾಗಲೇ ಹಲವು ವಿದ್ಯಾರ್ಥಿಗಳು ಗುಂಡಿಯಲ್ಲಿ ಬಿದ್ದಿದ್ದರು, ಆದರೆ ಪ್ರಾಣಾಪಾಯದಿಂದ ಪಾರಾಗಿದ್ದರು. ಪದೇ ಪದೇ ವಿದ್ಯಾರ್ಥಿಗಳು ಗುಂಡಿಗೆ ಬಿದ್ದ ಪ್ರಕರಣ ವರದಿಯಾದರೂ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ ವಹಿಸಿತ್ತು.
ಮತ್ತೀಗ ಈ ನಿರ್ಲಕ್ಷದಿಂದಾಗಿಯೇ ಬಾಲಕ ಸಾವನ್ನಪ್ಪಿದ್ದಾನೆ.
ಗಣೇಶ್ ಸಾವಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಂಬಂದಿಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.