ಆ್ಯಪ್ನಗರ

ಕಬ್ಬು ಹಣ ಪಾವತಿಸದ ಸಕ್ಕರೆ ಕಾರ್ಖಾನೆ ಬಳಿ ರೈತ ಆತ್ಮಹತ್ಯೆ

200 ಟನ್‌ ಕಬ್ಬು ಖರೀದಿಸಿ ಹಣ ಪಾವತಿಸದ ತೇರದಾಳದ ಸಾವರಿನ್ ಶುಗರ್ಸ್ ಬಳಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka Web 20 Jul 2018, 11:05 am
ತೇರದಾಳ: 200 ಟನ್‌ ಕಬ್ಬು ಖರೀದಿಸಿ ಹಣ ಪಾವತಿಸದ ತೇರದಾಳದ ಸಾವರಿನ್ ಶುಗರ್ಸ್ ಬಳಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web hanging jpge


ಬೆಳಗಾವಿ ಜಿಲ್ಲೆಯ ಶೇಗುಣಸಿ ಗ್ರಾಮದ ರೈತ ಹನಮಂತ ಕಾಡಪ್ಪನವರ (47) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಇವರು ಜಿ.ಪಂ ಮಾಜಿ ಅಧ್ಯಕ್ಷ ಶಿವಕುಮಾರ್ ಮಲಘಾಣ ಅವರ ಮಾಲೀಕತ್ವದ ಸಾವರಿನ್ ಶುಗರ್ಸ್‌ಗೆ 200 ಟನ್ ಕಬ್ಬು ಕಳುಹಿಸಿದ್ದರು. ಆದರೆ ಈವರೆಗೆ ಕಾರ್ಖಾನೆ ಬಿಲ್ ಪಾವತಿಸಿಲ್ಲ. ಕಾರ್ಖಾನೆಗೆ ಅಲೆದಾಡಿ ಬೇಸತ್ತು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ಯಾಂಕ್‌ ಸಾಲದ ಜತೆ ಕಾರ್ಖಾನೆಗೆ ಪೂರೈಸಿದ್ದ ಕಬ್ಬಿನ ಹಣವೂ ಸಿಗದೆ ಅವರು ಬಹಳಷ್ಟು ತೊಂದರೆಗೆ ಒಳಗಾಗಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ