ಆ್ಯಪ್ನಗರ

ಬೆಂಗಳೂರಿಗೆ ತೆರಳಿದ ಕಬ್ಬು ಬೆಳೆಗಾರರು

ಮುಧೋಳ: ಕಬ್ಬಿಗೆ ಬೆಲೆ ಹಾಗೂ ಬಾಕಿ ಸಮಸ್ಯೆ ಕುರಿತು ರೈತರ ಜತೆ ಚರ್ಚಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರಿಗೆ ರೈತರನ್ನು ಆಹ್ವಾನಿಸಿದ್ದಾರೆ. ನ.20ರಂದು ಮಧ್ಯಾಹ್ನ 3ಕ್ಕೆ ಮಹತ್ವದ ಸಭೆಯ ನಡೆಯಲಿದೆ.

Vijaya Karnataka 20 Nov 2018, 5:00 am
ಮುಧೋಳ: ಕಬ್ಬಿಗೆ ಬೆಲೆ ಹಾಗೂ ಬಾಕಿ ಸಮಸ್ಯೆ ಕುರಿತು ರೈತರ ಜತೆ ಚರ್ಚಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರಿಗೆ ರೈತರನ್ನು ಆಹ್ವಾನಿಸಿದ್ದಾರೆ. ನ.20ರಂದು ಮಧ್ಯಾಹ್ನ 3ಕ್ಕೆ ಮಹತ್ವದ ಸಭೆಯ ನಡೆಯಲಿದೆ.
Vijaya Karnataka Web sugarcane growers who went to bangalore
ಬೆಂಗಳೂರಿಗೆ ತೆರಳಿದ ಕಬ್ಬು ಬೆಳೆಗಾರರು


ಜಿಲ್ಲೆಯ ನಾನಾ ಭಾಗದಿಂದ 15 ರೈತರನ್ನು ಮುಖ್ಯಮಂತ್ರಿ ಅವರು ಆಹ್ವಾನ ನೀಡಿರುವುದು ಮಹತ್ವ ಪಡೆದಿದೆ. ವಿಧಾನಸೌಧ 3ನೇ ಮಹಡಿಯ ಕೊಠಡಿಯಲ್ಲಿ ಸಮ್ಮೇಳನದ ಸಭಾಭವನದಲ್ಲಿ ರೈತರ ಜತೆ ಸಮಾಲೋಚನೆ ನಡೆಸಲಿದ್ದಾರೆ.

ರೈತ ಪ್ರಮುಖರಾದ ರಂಗನಗೌಡ ಪಾಟೀಲ, ಕೆ.ಟಿ.ಪಾಟೀಲ, ರಾಮನಗೌಡ ಪಾಟೀಲ, ವಿಶ್ವನಾಥ ಉದಗಟ್ಟಿ, ಬುಜಬುಲಿ ಕೆಂಗಾಲಿ, ಉದಯ ಸಾರವಾಡ, ಬಸವಂತಪ್ಪ ಕಾಂಬಳೆ, ಸುಭಾಶ ಶಿರಬೂರ, ಗೋವಿಂದಪ್ಪ ಗುಜ್ಜನ್ನವರ, ಮುತ್ತಪ್ಪ ಕೋಮಾರ, ದುಂಡಪ್ಪ ಯರಗಟ್ಟಿ, ಗಂಗಾಧರ ಮೇಟಿ, ಸದಾಶಿವ ಇಟಕನ್ನವರ, ರಾಮಕೃಷ್ಣ ಬುದ್ನಿ ಇತರರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ಒದಗಿಸಿದೆ.

ನೂರಾರು ರೈತರು
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸಿಎಂ ಈಡೇರಿಸಬೇಕೆಂದು ಖಾಸಗಿಯಾಗಿ ನೂರಾರು ರೈತರು, ರೈಲ್ವೆ ಹಾಗೂ ಖಾಸಗಿ, ಸರಕಾರಿ ಬಸ್‌ಗಳ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ