ಆ್ಯಪ್ನಗರ

ನೆರೆ ಸಂತ್ರಸ್ತರ ಪರ ಮಠಾಧೀಶರ ಹೋರಾಟಕ್ಕೆ ಬೆಂಬಲ

ಮುಧೋಳ: ನೆರೆ ಸಂತ್ರಸ್ತರ ಪರ ಹೋರಾಟ ಮಾಡುತ್ತಿರುವ ಮಠಾಧೀಶರಿಗೆ ಬೆಂಬಲ ನೀಡುವ ಉದ್ದೇಶದಿಂದ ಅ.2ರಿಂದ ಜಿಲ್ಲೆಯ ಎಲ್ಲಾತಾಲೂಕು ಕೇಂದ್ರಗಳಲ್ಲಿಅನಿರ್ದಿಷ್ಟಕಾಲ ಉಪವಾಸ ಸತ್ಯಾಗ್ರಹ ಮಾಡಲು ನಾನಾ ಸಂಘಟನೆಗಳು, ಮುಖಂಡರು ನಿರ್ಧರಿಸಿರುವುದಾಗಿ ಸಾಮಾಜಿಕ ಹೋರಾಟಗಾರ ನಾಗರಾಜ್‌ ಹೊಂಗಲ್‌ ಹಾಗೂ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ತಿಳಿಸಿದ್ದಾರೆ.

Vijaya Karnataka 29 Sep 2019, 5:00 am
ಮುಧೋಳ: ನೆರೆ ಸಂತ್ರಸ್ತರ ಪರ ಹೋರಾಟ ಮಾಡುತ್ತಿರುವ ಮಠಾಧೀಶರಿಗೆ ಬೆಂಬಲ ನೀಡುವ ಉದ್ದೇಶದಿಂದ ಅ.2ರಿಂದ ಜಿಲ್ಲೆಯ ಎಲ್ಲಾತಾಲೂಕು ಕೇಂದ್ರಗಳಲ್ಲಿಅನಿರ್ದಿಷ್ಟಕಾಲ ಉಪವಾಸ ಸತ್ಯಾಗ್ರಹ ಮಾಡಲು ನಾನಾ ಸಂಘಟನೆಗಳು, ಮುಖಂಡರು ನಿರ್ಧರಿಸಿರುವುದಾಗಿ ಸಾಮಾಜಿಕ ಹೋರಾಟಗಾರ ನಾಗರಾಜ್‌ ಹೊಂಗಲ್‌ ಹಾಗೂ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ತಿಳಿಸಿದ್ದಾರೆ.
Vijaya Karnataka Web support the pontificate on behalf of neighboring victims
ನೆರೆ ಸಂತ್ರಸ್ತರ ಪರ ಮಠಾಧೀಶರ ಹೋರಾಟಕ್ಕೆ ಬೆಂಬಲ


ನಗರದಲ್ಲಿನಾನಾ ಸಂಘಟನೆಗಳ ಮುಖಂಡರು ಸಭೆ ನಡೆಸಿದ ನಂತರ ಮಾತನಾಡಿದ ಅವರು ನೆರೆ ಸಂತ್ರಸ್ತರಿಗೆ ನ್ಯಾಯ ಸಮ್ಮತ ಪರಿಹಾರಕ್ಕೆ ಆಗ್ರಹಿಸಿ ಬಾಗಲಕೋಟೆಯಲ್ಲಿನಾನಾ ಮಠಾಧೀಶರು ಆರಂಭಗೊಂಡಿರುವ ಹೋರಾಟಕ್ಕೆ ಬೆಂಬಲ ನೀಡುವುದು, ಸಕ್ರಿಯವಾಗಿ ಪಾಲ್ಗೊಳ್ಳುವುದು. ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಧೋರಣೆ ಖಂಡಿಸಿ ನಾನಾ ರೂಪದ ಸರಣಿ ಪ್ರತಿಭಟನೆಗೆ ನಿರ್ಧಾರ, ನೆರೆ ಸಂತ್ರಸ್ತರಿಗೆ ಯಾವುದೇ ತಾರತಮ್ಯವಿಲ್ಲದೇ ನ್ಯಾಯ ಸಮ್ಮತ ಪರಿಹಾರ ಸಿಗುವರೆಗೂ ನಿರಂತರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ, ಜನಜಾಗೃತಿ, ಭಾರತೀಯ ಕಿಸಾನ್‌ ಘಟಕ, ಟಿಪ್ಪುಸುಲ್ತಾನ ಸಂಘಟನೆ ಹಾಗೂ ರೈತ ಸಂಘಟನೆ ನಾನಾ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಜಿಲ್ಲಾಕರವೇ ಅಧ್ಯಕ್ಷ ರಮೇಶ ಬದ್ನೂರ್‌, ರೈತ ಸಂಘದ ಪ್ರಮುಖ ಶ್ರೀಶೈಲ್‌ ನಾಯಕ, ಕರವೇ ಪ್ರಕಾರ್ಯದರ್ಶಿ ಡಿ.ಎಂ.ನದಾಫ್‌, ಮಲ್ಲಪ್ಪ ಗಾಣಿಗೇರ, ಎಸ್‌.ಎಸ್‌.ಅಕ್ಕಿಮರಡಿ, ಕರವೇ ತಾಲೂಕು ಅಧ್ಯಕ್ಷ ಗಣಪತಿ ಭೋವಿ, ವಿಠ್ಠಲ ಜಕರಡ್ಡಿ, ಸಿದ್ದನಗೌಡಪಾಟೀಲ, ಶಫೀಕ್‌ ಬೇಪಾರಿ, ತಿಮ್ಮಣ್ಣ ಹಿಪ್ಪಲಿ, ಬಸವರಾಜ ಧರ್ಮತಿ, ಶ್ರೀಮಂತ ಹೊಸಕೋಟಿ, ಮಲ್ಲುಕಟ್ಟಿಮನಿ, ಅಲ್ಲಾಭಕ್ಷ ಪಠಾಣ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ