ಆ್ಯಪ್ನಗರ

ಬುದ್ಧಿವಾದ ಹೇಳಿದ್ದಕ್ಕೆ ಗುದ್ದಿದ ಚಾಲಕರು: ತಹಸೀಲ್ದಾರ್‌ ಮೇಲೆಯೇ ಹಲ್ಲೆ!

ವಾಹನಗಳಿಗೆ ಹೋಗಲು ದಾರಿ ಬಿಟ್ಟು ಗಾಡಿ ನಿಲ್ಲಿಸಿ ಎಂದು ತಿಳಿಸಿದ್ದಾರೆ. ಆದರೆ ವಾಹನ ಚಾಲಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಹಸೀಲ್ದಾರ್‌ ಎಡ ಕಣ್ಣಿಗೆ ಗುದ್ದಿ ಗಾಯಗೊಳಿಸಿದ್ದಾರೆ. ಅಲ್ಲದೇ ಗ್ರಾಮಲೆಕ್ಕಾಧಿರಿ ಕೊರಳು ಪಟ್ಟಿ ಹಿಡಿದು ಎಳೆದಾಡಿದ್ದಾರೆ.

Vijaya Karnataka Web 9 Sep 2020, 11:06 pm
ಕೆರೂರ ( ಬಾಗಲಕೋಟೆ): ಸಂಚಾರಕ್ಕೆ ಅಡಚಣೆಯಾಗದಂತೆ ಲಾರಿ ನಿಲ್ಲಿಸಲು ಬುದ್ಧಿ ಹೇಳಿದ ತಹಸೀಲ್ದಾರ್‌ಗೆ ಚಾಲಕರು ಗುದ್ದಿ ಗಾಯಗೊಳಿಸಿದಲ್ಲದೇ ಗ್ರಾಮ ಲೆಕ್ಕಾಧಿಕಾರಿ ಕೊರಳು ಪಟ್ಟಿ ಹಿಡಿದು ಎಳೆದಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಬಾದಾಮಿ ತಹಸೀಲ್ದಾರ್‌ ಸುಹಾಸ ಇಂಗಳೆ ಹಾಗೂ ಅವರ ಜತೆಯಲ್ಲಿದ್ದ ಹಲಕುರ್ಕಿ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ತೋಟಗೇರ ಹಲ್ಲೆಗೊಳಗಾದವರು.

ನೀರಬೂದಿಹಾಳ ಗ್ರಾಮದ ಲಾರಿ ಚಾಲಕಾರದ ನಾಗಪ್ಪ ಜಾನಮಟ್ಟಿ ಹಾಗೂ ಶಿವಾನಂದ ಜಾನಮಟ್ಟಿ ಅವರನ್ನು ಹಲ್ಲೆಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ತಹಸೀಲ್ದಾರ್‌ ದೂರಿನನ್ವಯ ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?:

ತಾಲೂಕಿನಲ್ಲಿ ನೆರೆ ಹಾಗೂ ಮಳೆಯಿಂದ ಹಾನಿಯಾದ ಅಧ್ಯಯನಕ್ಕೆ ಮಂಗಳವಾರ ಕೇಂದ್ರ ಅಧ್ಯಯನ ತಂಡ ಆಗಮಿಸಿತ್ತು. ಬಾದಾಮಿ ತಾಲೂಕು ವ್ಯಾಪ್ತಿಯಲ್ಲಿಅಧ್ಯಯನ ಮುಗಿಸಿ ಹೊರಟ ಕೇಂದ್ರ ತಂಡವನ್ನು ಲೋಕಾಪೂರದವರೆಗೆ ಬಿಟ್ಟು ನೀರಬೂದಿಹಾಳ ಮಾರ್ಗವಾಗಿ ಬಾದಾಮಿಗೆ ತೆರಳುತ್ತಿದ್ದ ತಹಸೀಲ್ದಾರ್‌ ಹಾಗೂ ಗ್ರಾಮ ಲೆಕ್ಕಾಧಿಕಾರಿ ಆ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಇಕ್ಕಟ್ಟಾದ ರಸ್ತೆ ಮೇಲೆ ಲಾರಿ ಅಡ್ಡಲಾಗಿ ನಿಲ್ಲಿಸಿದ್ದನ್ನು ಗಮನಿಸಿದ್ದಾರೆ.

ವಾಹನಗಳಿಗೆ ಹೋಗಲು ದಾರಿ ಬಿಟ್ಟು ಗಾಡಿ ನಿಲ್ಲಿಸಿ ಎಂದು ತಿಳಿಸಿದ್ದಾರೆ. ಆದರೆ ವಾಹನ ಚಾಲಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಹಸೀಲ್ದಾರ್‌ ಎಡ ಕಣ್ಣಿಗೆ ಗುದ್ದಿ ಗಾಯಗೊಳಿಸಿದ್ದಾರೆ. ಅಲ್ಲದೇ ಗ್ರಾಮಲೆಕ್ಕಾಧಿರಿ ಕೊರಳು ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಈ ಕುರಿತು ತಹಸೀಲ್ದಾರ್‌ ಕೆರೂರ ಠಾಣೆಯಗೆ ದೂರು ನಿಡಿದ್ದರಿಂದ ಕಾರ್ಯಾಚರಣೆಗಿಳಿದ ಪೊಲೀಸರು ಹಲ್ಲೆನಡೆಸಿದವರನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ