ಆ್ಯಪ್ನಗರ

ಶಿಕ್ಷ ಕರ ಅರ್ಹತಾ ಪರೀಕ್ಷೆ ಸುಸೂತ್ರ

ಬಾಗಲಕೋಟ: ಪ್ರಾಥಮಿಕ ಶಾಲೆ ಶಿಕ್ಷ ಕರ ನೇಮಕಾತಿಗಾಗಿ ಶಿಕ್ಷ ಕರ ಅರ್ಹತಾ ಪರೀಕ್ಷೆ (ಟಿಇಟಿ) ನಗರದ 20 ಕೇಂದ್ರಗಳಲ್ಲಿ ಭಾನುವಾರ ನಡೆದವು.

Vijaya Karnataka 4 Feb 2019, 5:00 am
ಬಾಗಲಕೋಟ: ಪ್ರಾಥಮಿಕ ಶಾಲೆ ಶಿಕ್ಷ ಕರ ನೇಮಕಾತಿಗಾಗಿ ಶಿಕ್ಷ ಕರ ಅರ್ಹತಾ ಪರೀಕ್ಷೆ (ಟಿಇಟಿ) ನಗರದ 20 ಕೇಂದ್ರಗಳಲ್ಲಿ ಭಾನುವಾರ ನಡೆದವು.
Vijaya Karnataka Web teacher karate qualification exam is good
ಶಿಕ್ಷ ಕರ ಅರ್ಹತಾ ಪರೀಕ್ಷೆ ಸುಸೂತ್ರ


ಜಿಲ್ಲೆಯಲ್ಲಿ ನಡೆದ ಶಿಕ್ಷ ಕರ ಅರ್ಹತಾ ಪರೀಕ್ಷೆಗೆ ನೋಂದಣಿ ಮಾಡಿಕೊಂಡ 9,376 ಅಭ್ಯರ್ಥಿಗಳ ಪೈಕಿ 679 ಅಭ್ಯರ್ಥಿಗಳು ಗೈರಾಗಿದ್ದು 8,697 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ನಗರದ ಬವಿವ ಸಂಘ ನಾನಾ ಶಾಲೆ-ಕಾಲೇಜ್‌, ಬಾಲಕಿಯರ ಸರಕಾರಿ ಪಪೂ ಕಾಲೇಜ್‌, ಅಂಜುಮನ್‌ ಬಾಲಕರ ಪ್ರೌಢಶಾಲೆ, ಶಂಕ್ರಪ್ಪ ಸಕ್ರಿ ಪಪೂ ಕಾಲೇಜ್‌, ಅಕ್ಕಮಹಾದೇವಿ ಮಹಿಳಾ ಕಾಲೇಜ್‌, ಕಾಳಿದಾಸ ಕಾಲೇಜ್‌, ಸರಕಾರಿ ಪದವಿ ಕಾಲೇಜ್‌, ಸರಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ ಸೇರಿದಂತೆ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷ ಕರ ಅರ್ಹತೆಗಾಗಿ ಪರಿಕ್ಷೆಗಳು ಜರುಗಿದವು.

ಬೆಳಗ್ಗೆ 9 ರಿಂದ 12ರ ವರೆಗೆ ಮೊದಲ ಅವಧಿಯ ಪರೀಕ್ಷೆಗಳು 10 ಪರೀಕ್ಷೆ ಕೇಂದ್ರದಲ್ಲಿ ಜರುಗಿದರೆ ಮಧ್ಯಾಹ್ನ 2 ರಿಂದ 4.30ರ ವರೆಗೆ 20 ಪರೀಕ್ಷೆ ಕೇಂದ್ರದಲ್ಲಿ ಜರುಗಿದವು. ಪ್ರತಿಯೊಂದು ಪರೀಕ್ಷೆ ಕೇಂದ್ರಕ್ಕೆ ಜಾಗೃತದಳ, ಪರೀಕ್ಷೆ ವೀಕ್ಷ ಕರು, ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿತ್ತು. ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವ ಕುರಿತಂತೆ ಎಡಿಸಿ ಅಧ್ಯಕ್ಷ ತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಮಾರ್ಗಾಕಾರಿಗಳು ಪ್ರಶ್ನೆ ಪತ್ರಿಕೆ ಪಡೆಯುವಾಗ, ನೀಡುವಾಗ ಜಿಲ್ಲಾ ಉಪನಿರ್ದೇಶಕರೊಂದಿಗೆ ಜಿಲ್ಲಾ ಖಜಾನೆಯಲ್ಲಿ ಖುದ್ದಾಗಿ ಹಾಜರಿದ್ದು, ಉಪನಿರ್ದೇಶಕರು ಹಾಗೂ ನೋಡಲ್‌ ಅಧಿಕಾರಿ ಸಮಕ್ಷ ಮದಲ್ಲಿ ತೆಗೆದುಕೊಂಡು ಸರಿಯಾದ ಸಮಯದಲ್ಲಿ ವಿತರಿಸುವ ಕಾರ್ಯವಾಗಬೇಕು. ಪ್ರತಿ ಅವಧಿ ಪ್ರಾರಂಭವಾಗುವ 1 ಗಂಟೆ ಮುಂಚಿತ ಪ್ರಶ್ನೆಪತ್ರಿಕೆ ಪಡೆದು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಸೂಚನೆ ನೀಡಲಾಗಿತ್ತು.

ಪರೀಕ್ಷಾ ವೀಕ್ಷ ಕರಾಗಿ ಹಾವೇರಿ ಡೈಟ್‌ ಪ್ರಾಚಾರ್ಯ ಆಗಮಿಸಿದ್ದರು. ಪರೀಕ್ಷೆ ಕೇಂದ್ರಗಳಿಗೆ ಎಡಿಸಿ ದುರಗೇಶ ರುದ್ರಾಕ್ಷಿ, ಶಿಕ್ಷ ಣ ಇಲಾಖೆ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಡಿಡಿಪಿಐ ಎಂ.ಆರ್‌.ಕಾಮಾಕ್ಷಿ ಭೇಟಿ ನೀಡಿ ಮಾಹಿತಿ ಪಡೆದರು. ಪರೀಕ್ಷಾ ನೋಡಲ್‌ ಅಧಿಕಾರಿ ಅಶೋಕ ಬಸಣ್ಣವರ ಕಾರ್ಯ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ