ಆ್ಯಪ್ನಗರ

ತಲೆಯಲ್ಲಿ ಕಾಯಿ ಒಡೆದ ದೇವಸ್ಥಾನದ ಪೂಜಾರಿ

ನಗರದಲ್ಲಿ ಮಂಗಳವಾರ ನಡೆದ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ಪೂಜಾರಿ (ಅರ್ಚಕ) ತಲೆಗೆ ತೆಂಗಿನಕಾಯಿ ಒಡೆದು ಭಕ್ತಿ ಮೆರೆದರು.

Vijaya Karnataka Web 19 Jun 2018, 6:06 pm
Vijaya Karnataka Web Priest-1
ಬಾಗಲಕೋಟ: ನಗರದಲ್ಲಿ ಮಂಗಳವಾರ ನಡೆದ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ಪೂಜಾರಿ (ಅರ್ಚಕ) ತಲೆಗೆ ತೆಂಗಿನಕಾಯಿ ಒಡೆದು ಭಕ್ತಿ ಮೆರೆದರು.

ನೂರಾರು ವರ್ಷಗಳ ಇತಿಹಾಸದ ಜಾತ್ರೆಯಲ್ಲಿ ಪೂಜಾರಿ ತಲೆಗೆ ತೆಂಗಿನಕಾಯಿ ಒಡೆಯುವ ದೃಶ್ಯ ನೋಡಲು ಜನ ನೆರೆದಿರುತ್ತಾರೆ.

ಕಾಯಿಗಳನ್ನು ಮೇಲಕ್ಕೆ ತೂರಿದ ಪೂಜಾರಿ ಮಾನಪ್ಪ ಚವ್ಹಾಣ ಅವುಗಳು ಕೆಳಗೆ ಬೀಳುತ್ತಿದ್ದಂತೆಯೇ ತಲೆಯೊಡ್ಡಿ ಕಾಯಿಗಳನ್ನು ಒಡೆದರು. 10 ಕ್ಕೂ ಹೆಚ್ಚು ಕಾಯಿಗಳನ್ನು ಅವರು ಒಡೆದರು. ದೇವಸ್ಥಾನದ ಪೂಜಾರಿ ತಲೆಯಿಂದ ತೆಂಗಿನಕಾಯಿ ಒಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ