ಆ್ಯಪ್ನಗರ

ಮೂವರು ಆರೋಪಿಗಳ ಬಂಧನ

ಮುಧೋಳ: ಮುಧೋಳ ಹಾಗೂ ಜಮಖಂಡಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಬೀಗ ಹಾಕಿದ ಮನೆಗಳಲಿದ್ದ 806 ಗ್ರಾಂ. ಚಿನ್ನ, 2 ಕೆಜಿ ಬೆಳ್ಳಿ ಹಾಗೂ 10 ಸಾವಿರ ರೂ. ಸೇರಿದಂತೆ ಒಟ್ಟು 26 ಲಕ್ಷ ರೂ.ಮೌಲ್ಯದ ಸಾಮಾನುಗಳನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿವೈಎಸ್ಪಿ ರಾಮನಗೌಡ ಹಟ್ಟಿ ತಿಳಿಸಿದ್ದಾರೆ.

Vijaya Karnataka 15 Sep 2018, 5:00 am
ಮುಧೋಳ: ಮುಧೋಳ ಹಾಗೂ ಜಮಖಂಡಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಬೀಗ ಹಾಕಿದ ಮನೆಗಳಲಿದ್ದ 806 ಗ್ರಾಂ. ಚಿನ್ನ, 2 ಕೆಜಿ ಬೆಳ್ಳಿ ಹಾಗೂ 10 ಸಾವಿರ ರೂ. ಸೇರಿದಂತೆ ಒಟ್ಟು 26 ಲಕ್ಷ ರೂ.ಮೌಲ್ಯದ ಸಾಮಾನುಗಳನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿವೈಎಸ್ಪಿ ರಾಮನಗೌಡ ಹಟ್ಟಿ ತಿಳಿಸಿದ್ದಾರೆ.
Vijaya Karnataka Web the arrest of three accused
ಮೂವರು ಆರೋಪಿಗಳ ಬಂಧನ


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ಗದಗ ಜಿಲ್ಲೆಯ ಗಂಗಿಮಡ್ಡಿಯ ಮಹ್ಮದ್‌ ಸಮಾಜೆ, ಸೈಯದ್‌ಅಲಿ ಮಾಲದಾರ ಹಾಗೂ ಹುಬ್ಬಳ್ಳಿಯ ಮೂರುಸಾವಿರ ಮಠದ ಗಲ್ಲಿಯ ನಿವಾಸಿ ಕುಮಾರಸ್ವಾಮಿ ಹಿರೇಮಠ ಚಿನ್ನಾಭರಣ, ಬೆಳ್ಳಿ ಹಾಗೂ ಹಣ ದೋಚಿಕೊಂಡು ಪರಾರಿಯಾಗುತ್ತಿದ್ದರು. ನಗರದ ಸಾಯಿನಗರದ ನಿವಾಸಿಯೊಬ್ಬರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬೀಗ ಮುರಿದು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಕಳ್ಳತನ ಮಾಡಲಾಗಿದೆ ಎಂದು ಶಂಕರ ಕರೆಹೊನ್ನ ನೀಡಿದ ದೂರಿನ್ವಯ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಉಪವಿಭಾಗದ ವ್ಯಾಪ್ತಿಯಲ್ಲಿ ಕ್ರೈಂ ತಂಡ ರಚನೆ ಮಾಡಲಾಗಿತ್ತು ಎಂದು ಹೇಳಿದರು.

ಕ್ರೈಂ ತಂಡ ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಬಂಧಿತರು 13 ಪ್ರಕರಣಗಳಲ್ಲಿ ಭಾಗಿಯಾಗುವುದು ತನಿಖೆಯಿಂದ ಬಹಿರಂಗಗೊಂಡಿದೆ. ತೇರದಾಳ, ಜಮಖಂಡಿ, ಹಿರೇಪಡಸಲಗಿ ಹಾಗೂ ಮುಧೋಳ, ಲೋಕಾಪುರ ಭಾಗದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನದಲ್ಲಿ ಭಾಗಿಯಾಗುವುದು ಒಪ್ಪಿಕೊಂಡಿದ್ದಾರೆ ಎಂದು ಹಟ್ಟಿ ತಿಳಿಸಿದ್ದಾರೆ.

ಎಸ್ಪಿ ರಿಷ್ಯಂತ್‌ ಮಾರ್ಗದರ್ಶನದಲ್ಲಿ ಸಿಪಿಐ ಕರಿಯಪ್ಪ ಬನ್ನಿ, ಎಸೈ ಶ್ರೀಶೈಲ ಬ್ಯಾಕೂಡ್‌, ದಿನೇಶ ಜವಳಿಕರ, ತಂಡದ ಪ್ರಮುಖರಾದ ವಿ.ವಿ.ಸಾಲಗುಂದಿ, ಆರ್‌.ಜಿ.ಕಟಗೇರಿ, ಸದಾಶಿವ ಬಡಿಗೇರ, ಎಸ್‌.ಬಿ.ಹನಗಂಡಿ, ಕೆ.ಎಂ.ತೇಲಿ, ಪಿ.ಎ.ಇನಾಂದಾರ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಸಿಪಿಐ ಕರಿಯಪ್ಪ ಬನ್ನಿ, ಎಸೈ ಶ್ರೀಶೈಲ ಬ್ಯಾಕೂಡ್‌, ಕೆ.ಎಚ್‌.ದೊಡಮನಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ