ಆ್ಯಪ್ನಗರ

ಬಿಜೆಪಿಯವರದ್ದು ಬರೀ ಹುಸಿಬಾಂಬ್‌ ಸಮ್ಮಿಶ್ರ ಸರಕಾರ ಸ್ಥಿರ : ಬಂಡೆಪ್ಪ ಕಾಶೆಂಪುರ

ವಿಜಯಪುರ: ಸಮ್ಮಿಶ್ರ ಸರಕಾರ ಸ್ಥಿರವಾಗಿ ನಡೆಯುತ್ತಿರುವುದು ಖಚಿತವಾಗಿದ್ದರಿಂದ ಬಿಜೆಪಿ ಶಾಸಕರೇ ನಮ್ಮ ಕಡೆಗೆ ಬರುತ್ತಾರೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ರಾಜಕಾರಣದ ಹೊಸ ಬಾಂಬ್‌ ಸಿಡಿಸಿದ್ದಾರೆ.

Vijaya Karnataka 15 Jan 2019, 5:00 am
ವಿಜಯಪುರ: ಸಮ್ಮಿಶ್ರ ಸರಕಾರ ಸ್ಥಿರವಾಗಿ ನಡೆಯುತ್ತಿರುವುದು ಖಚಿತವಾಗಿದ್ದರಿಂದ ಬಿಜೆಪಿ ಶಾಸಕರೇ ನಮ್ಮ ಕಡೆಗೆ ಬರುತ್ತಾರೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ರಾಜಕಾರಣದ ಹೊಸ ಬಾಂಬ್‌ ಸಿಡಿಸಿದ್ದಾರೆ.
Vijaya Karnataka Web the bjp is the only hosiobb coalition government stable bandepa kashmepura
ಬಿಜೆಪಿಯವರದ್ದು ಬರೀ ಹುಸಿಬಾಂಬ್‌ ಸಮ್ಮಿಶ್ರ ಸರಕಾರ ಸ್ಥಿರ : ಬಂಡೆಪ್ಪ ಕಾಶೆಂಪುರ


ಸೋಮವಾರ ತಿಂಥಣಿ ಕ್ಷೇತ್ರಕ್ಕೆ ತೆರಳುವ ಮುನ್ನ ಮುದ್ದೇಬಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಸ್ಥಿರವಾಗಿ ನಡೆಯುತ್ತಿದೆ ಎಂದು ಕನ್ಫರ್ಮ್‌ ಆದ ಮೇಲೆ ಬಿಜೆಪಿ ಶಾಸಕರು ನಮ್ಮ ಕಡೆಗೆ ಒಲವು ತೋರಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರದ್ದು ಹುಸಿಬಾಂಬ್‌:

ಸರಕಾರ ಫಸ್ಟ್‌ಕ್ಲಾಸ್‌ ಆಗಿ ನಡೆಯುತ್ತಿದೆ. ಕಾಂಗ್ರೆಸ್‌ ಅಥವಾ ಜೆಡಿಎಸ್‌ನ ಯಾವ ಒಬ್ಬ ಶಾಸಕ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಯವರು ಸುಮ್ಮನೆ ಹುಸಿಬಾಂಬ್‌ ಸಿಡಿಸುತ್ತಿದ್ದಾರಷ್ಟೇ ಎಂದು ವ್ಯಂಗವಾಡಿದರು. ಕಳೆದ 7 ತಿಂಗಳಿನಿಂದ ಬಿಜೆಪಿಯವರು ಹಾಕುತ್ತಿರುವ ಎಲ್ಲ ಬಾಂಬ್‌ಗಳು ಠುಸ್‌ ಆಗಿವೆ. ಅವರಿಗೆ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಹೀಗಾಗಿ ಇಲ್ಲ, ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ನೋಟಿಸ್‌ ನೀಡಿಲ್ಲ:

ಸಮ್ಮಿಶ್ರ ಸರಕಾರದಲ್ಲಿ ಸ್ವಲ್ಪ ಹೊಂದಾಣಿಕೆ ಕೊರತೆ ಇದೆ. ಅದನ್ನು ಸರಿಪಡಿಸಿಕೊಳ್ಳಲಾಗುತ್ತದೆ. ಮುಂಬರುವ ಬಜೆಟ್‌ನಲ್ಲಿ ಸಿಎಂ ಕುಮಾರಸ್ವಾಮಿ ಅವರು ದಾಖಲೆ ಪ್ರಮಾಣದ ಕೊಡುಗೆ ನೀಡಲಿದ್ದಾರೆ. ಸಾಲಮನ್ನಾ ವಿಷಯದಲ್ಲಿ ಯಾವ ರೈತರಿಗೂ ನೋಟಿಸ್‌ ನೀಡಿಲ್ಲ. ಅನರ್ಹರಿಗೆ ಯೋಜನೆ ಲಾಭವಾಗಬಾರದು ಎನ್ನುವ ಉದ್ದೇಶದಿಂದ ರೈತರಿಂದ ದಾಖಲೆ ಸಂಗ್ರಹ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸಚಿವ ಎಂ.ಬಿ.ಪಾಟೀಲ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಹಿರಿಯರು. ಇಬ್ಬರೂ ಗೌಡರು. ದೊಡ್ಡವರ ಬಗ್ಗೆ ನಾನೇನು ಮಾತನಾಡಲ್ಲ.
ಬಂಡೆಪ್ಪ ಕಾಶೆಂಪುರ, ಸಹಕಾರಿ ಸಚಿವ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ