ಆ್ಯಪ್ನಗರ

ಮತ್ತೆ ಬಂತು ಪ್ರವಾಹ

ಮುಧೋಳ: ಬೆಳಗಾವಿ ಜಿಲ್ಲೆಯ ಜಲಾವೃತ ಪ್ರದೇಶಗಳಿಂದ ಅಪಾರ ಪ್ರಮಾಣದಲ್ಲಿನೀರು ಹರಿದು ಬರುತ್ತಿದೆ. ಇತ್ತ ಕೃಷ್ಣಾ ನದಿ ಹಿನ್ನೀರು ಪರಿಣಾಮ ನದಿ ತೀರದ ಕೆಲವು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ.

Vijaya Karnataka 10 Sep 2019, 5:00 am
ಮುಧೋಳ: ಬೆಳಗಾವಿ ಜಿಲ್ಲೆಯ ಜಲಾವೃತ ಪ್ರದೇಶಗಳಿಂದ ಅಪಾರ ಪ್ರಮಾಣದಲ್ಲಿನೀರು ಹರಿದು ಬರುತ್ತಿದೆ. ಇತ್ತ ಕೃಷ್ಣಾ ನದಿ ಹಿನ್ನೀರು ಪರಿಣಾಮ ನದಿ ತೀರದ ಕೆಲವು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ.
Vijaya Karnataka Web the flood that came again
ಮತ್ತೆ ಬಂತು ಪ್ರವಾಹ


ಮಾಚಕನೂರ ಹೊಳೆಬಸವೇಶ್ವರ ದೇವಸ್ಥಾನ ಭಾಗಶ ಜಲಾವೃತಗೊಂಡ ಹಿನ್ನಲೆಯಲ್ಲಿದೂರದಿಂದಲೇ ದರ್ಶನ ಪಡೆಯುವಂತಾಗಿದೆ. ನಗರದ ಹೊರಮಾಡು ರೂಗಿ ಕ್ರಾಸ್‌ ಬಳಿ ಪ್ರವಾಹಕ್ಕೆ ಕತ್ತರಿಸಿ ಹೋಗಿರುವ ರಸ್ತೆ ಕೆಳಗಡೆ ಉತ್ತೂರ, ಯಾದವಾಡ, ಜಾಲಿಬೇರಿ ಗ್ರಾಮದ ಬೈಕ್‌ ಸವಾರರು ಹರಸಾಹಸಪಟ್ಟು ಹೊರ ಬರುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಕಂಡುಬರುತ್ತಿದೆ.

ಸಂಚಾರ ಸ್ಥಗಿತ

ಆಲಮಟ್ಟಿ ಜಲಾಶಯದ ಹಿನ್ನಿರು 524.19 ರಷ್ಟು ಎತ್ತರದ ವ್ಯಾಪ್ತಿಯ ಮಾಚಕನೂರ ಸೇತುವೆ ಮೇಲೆ ನೀರು ಆವರಿಸಿದೆ. ಯಾವುದೇ ಸಂದರ್ಭದಲ್ಲಿಯೂ ಮಾಚಕನೂರದಿಂದ ತೆರಳುವ ಚಿಕ್ಕೂರ, ಆಲಗುಂಡಿ ಬಿ.ಕೆ., ಬುದ್ನಿ ಬಿ.ಕೆ. ಹಾಗೂ ಕೆ.ಡಿ.ಬುದ್ನಿ ಸಂಚಾರ ಸ್ಥಗಿತಗೊಳ್ಳಬಹದು. ಆಲಗುಂಡಿ ಬಿ.ಕೆ.ಸೇತುವೆ ಮೇಲೆ ನೀರು ಹರಿಯುತ್ತಿದೆ. ಜುನ್ನೂರ,ಕಲಾದಗಿ ಸಂಪರ್ಕವೂ ಕಡಿತಗೊಂಡಿದೆ. ಮುಧೋಳ ನಗರದ ನದಿ ತೀರದ ಬಳಿ ಇರುವ ಮುಕ್ತಿ ಘಾಟ್‌ ಜಲಾವೃತಗೊಂಡಿದೆ. ಅಲ್ಲಿಯ ಹಿನ್ನೀರು ಪ್ರದೇಶಗಳಲ್ಲಿಬಟ್ಟೆ, ಬೈಕ್‌ ತೊಳೆಯಲಾಗುತ್ತಿದೆ. ಪಂಪಸೆಟ್‌ಗಳನ್ನು ಹೊರಗಡೆ ಇಡಲಾಗುತ್ತಿದೆ.

ಭೀತಿಯಲ್ಲಿರುವ ಗ್ರಾಮ:

ನದಿ ತೀರದ ಮಿರ್ಜಿ, ಒಂಟಗೋಡಿ, ರಂಜಣಗಿ, ಉತ್ತೂರ, ರೂಗಿ, ಗುಲಗಾಲಜಂಬಗಿ, ನಗರದ ಝಂಜರಕೊಪ್ಪ, ಜಾಲಿಬೇರಿ, ಮಾಚಕನೂರ, ಆಲಗುಂಡಿ ಬಿ.ಕೆ., ಕೆ.ಡಿ.ಬುದ್ನಿ, ಜುನ್ನೂರ, ಬುದ್ನಿ ಬಿ.ಕೆ.ಗ್ರಾಮಗಳು ಜಲಾವೃತಗೊಳ್ಳುವ ಭೀತಿ ಇದೆ ಎಂದು ಕಂದಾಯ ಮೂಲ ತಿಳಿಸಿವೆ.

ಜಿಲ್ಲಾಡಳಿತ ಸೂಚನೆ ಅನ್ವಯ ಎಲ್ಲೆಡೆ ಕಾಳಜಿ ಕೇಂದ್ರಕ್ಕೆ ಸಿದ್ಧತೆ ನಡೆದಿವೆ. ರೇಷನ್‌ ಸಂಗ್ರಹ ಮಾಡಿಕೊಳ್ಳಲಾಗಿದೆ. ಎನ್‌ಡಿಆರ್‌ಎಫ್‌ ತಂಡ ಕರೆಸುವುದು, ನುರಿತ ಈಜುಗಾರರು, ಬೋಟ್‌ ವ್ಯವಸ್ಥೆ ಕಾರ್ಯ ನಡೆದಿವೆ. ಎಲ್ಲನೊಡೆಲ್‌ ಅಧಿಕಾರಿಗಳ ಮೂಲಕ ಸ್ಥಾನಿಕ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

ಹೊರಮಾಡುಗೆ ಪ್ರವಾಹ ಬಂದರೆ ತತಕ್ಷಣವೇ ರೂಗಿ ಗ್ರಾಮಕ್ಕೆ ನೀರು ನುಗ್ಗಲಿದೆ. ಎಲ್ಲಸಿದ್ದತೆ ಹಂತದಲ್ಲಿದ್ದೇವೆ. ನೀರಿನ ಮಹಿಮೆ ಹೇಳದಂತಾಗಿದೆ. ಮೊನ್ನೆ ನಡೆದ ಪ್ರವಾಹ ನಮ್ಮ ಗ್ರಾಮದಲ್ಲಿಸಾಕಷ್ಟು ಹಾನಿ ಮಾಡಿದೆ ಆಗಿಂದಲೇ ತೊಂದರೆಯಾಗಿದೆ.
ತಿಮ್ಮಣ್ಣ ಬಟಕುರ್ಕಿ, ಅಧ್ಯಕ್ಷರು, ತಾಪಂ ಮುಧೋಳ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ