ಆ್ಯಪ್ನಗರ

ಮಹಾ ನೀರು ಬರಲಿಲ್ಲ, ನಷ್ಟ ತುಂಬೋರು ಯಾರು?

ಮುಧೋಳ: ಯಾರು ಎಷ್ಟೇ ಗೋಗರೆದರೂ ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ ನೀರು ಬಿಡಲಿಲ್ಲ. ಉಪರಾಷ್ಟ್ರಪತಿ ಅವರು ಬೆಳಗಾವಿಯಿಂದ ಮಹಾಮುಖ್ಯಮಂತ್ರಿ ಅವರಿಗೆ ಫೋನ್‌ ಮಾಡಿ ನೀರು ಬಿಡಲು ಸೂಚಿಸಿದರು. ಉಪರಾಷ್ಟ್ರಪತಿ ಸೂಚನೆಗೂ ಮಹಾರಾಷ್ಟ್ರ ಸರಕಾರ ಕಿವಿಗೊಡಲಿಲ್ಲ ಎಂದು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಹಾಗೂ ಉದ್ಯಮಿ ಸಂಗಮೇಶ ನಿರಾಣಿ ಆರೋಪಿಸಿದ್ದಾರೆ.

Vijaya Karnataka 17 Jun 2019, 5:00 am
ಮುಧೋಳ: ಯಾರು ಎಷ್ಟೇ ಗೋಗರೆದರೂ ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ ನೀರು ಬಿಡಲಿಲ್ಲ. ಉಪರಾಷ್ಟ್ರಪತಿ ಅವರು ಬೆಳಗಾವಿಯಿಂದ ಮಹಾಮುಖ್ಯಮಂತ್ರಿ ಅವರಿಗೆ ಫೋನ್‌ ಮಾಡಿ ನೀರು ಬಿಡಲು ಸೂಚಿಸಿದರು. ಉಪರಾಷ್ಟ್ರಪತಿ ಸೂಚನೆಗೂ ಮಹಾರಾಷ್ಟ್ರ ಸರಕಾರ ಕಿವಿಗೊಡಲಿಲ್ಲ ಎಂದು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಹಾಗೂ ಉದ್ಯಮಿ ಸಂಗಮೇಶ ನಿರಾಣಿ ಆರೋಪಿಸಿದ್ದಾರೆ.
Vijaya Karnataka Web the great waters have not come and who loses it
ಮಹಾ ನೀರು ಬರಲಿಲ್ಲ, ನಷ್ಟ ತುಂಬೋರು ಯಾರು?


ಸೆಂಟ್ರಲ್‌ ವಾಟರ್‌ ಮತ್ತು ಪಾವರ್‌ ಕಮೀಶನ್‌ ಸಂಸ್ಥೆ ನಿಯಮ ಮಾಡಿದೆ. ನದಿಗಳಲ್ಲಿ ಸದಾ ನೀರು ಹರಿಯುವ ವ್ಯವಸ್ಥೆ ಇರಬೇಕು. ನೀರು ನದಿಯಲ್ಲಿ ಬತ್ತದಂತೆ ಸರಕಾರಗಳು ಕಾಳಜಿ ವಹಿಸಬೇಕು. ಅಂತರರಾಜ್ಯಗಳು ಕೂಡ ಈ ವಿಷಯದಲ್ಲಿ ತ್ವರಿತವಾಗಿ ಸಹಾಯ ನೀಡಬೇಕು ಎಂಬ ನಿಯಮವಿದೆ. ಇದನ್ನು ಮಹಾರಾಷ್ಟ್ರ ಸರಕಾರ ಉಲ್ಲಂಘಿಸಿದೆ.ಒಂದು ತಿಂಗಳ ಹಿಂದೆ ನೀರಾವರಿ ಸಚಿವ ಶಿವಕುಮಾರ ಅವರ ಅಧ್ಯಕ್ಷ ತೆಯಲ್ಲಿ ಬೆಳಗಾವಿ ಬಾಗಲಕೋಟ, ವಿಜಯಪುರ ಜಿಲ್ಲೆಗಳ ಶಾಸಕರ ಸಂಸದರ ಸಭೆ ಬೆಳಗಾವಿಯಲ್ಲಿ ನಡೆಯಿತು. ಕೋಯ್ನಾ ಜಲಾಶಯದಿಂದ ಕೃಷ್ಣ ನದಿಗೆ ಬಿಡುವ ನೀರಿಗೆ ಸಮನಾಗಿ ಆಲಮಟ್ಟಿ ಜಲಾಶಯದಿಂದ ನೀರು ಮಹಾರಾಷ್ಟ್ರದ ಜತ್ತ ಭಾಗಕ್ಕೆ ಬಿಡಲು ಮಹಾರಾಷ್ಟ್ರ ಸರಕಾರ ಕರಾರು ವಿಧಿಸಿದೆ. ಆದರೆ ಕರ್ನಾಟಕ ಸರಕಾರ ಸಿದ್ದಪಡಿಸಿದ ಈ ಒಪ್ಪಂದ ಪತ್ರ ಮಹಾರಾಷ್ಟ್ರ ಸರಕಾರಕ್ಕೆ ತಲುಪಲಿಲ್ಲ. ರಾಜ್ಯ ಸರಕಾರವೂ ಇಲ್ಲಿ ವಿಳಂಬ ನೀತಿ ಅನುಸರಿಸಿತ್ತು. ಕರ್ನಾಟಕ ಸರಕಾರ ಸಕಾಲಕ್ಕೆ ತಲುಪಿಸಿಲ್ಲ ಎಂದು ಮಹಾರಾಷ್ಟ್ರ ಸರಕಾರ ಇದನ್ನೆ ನೆಪÜ ಮಾಡಿ ದಿನ ದೂಡುತ್ತಿದೆ ಎಂದು ಅವರು ಹೇಳಿದ್ದಾರೆ.

ಬೆಳೆಹಾನಿ 470ಕೋಟಿ

ಕೃಷ್ಣಾ ನದಿಗೆ ಕೋಯ್ನಾದಿಂದ ನೀರು ಬಿಟ್ಟಿದ್ದರೆ ಜನ ಜಾನುವಾರಿಗೆ ಅನುಕೂಲದೊಂದಿಗೆ ಸುತ್ತಮುತ್ತಲಿನ ಬಾವಿ, ಕೃಷಿ ಹೊಂಡ, ಕೆರೆ ಚಿಕ್ಕ ಡ್ಯಾಮಗಳಿಗೆ ನೀರು ಅಂತರ ಜಲಮೂಲಕ ಬರುತ್ತಿತ್ತು. ಈ ನೀರು ಬಳಸಿಕೊಂಡು ರೈತರು ಕೃಷಿ ಮಾಡುತ್ತಿದ್ದರು. ನೀರು ಬಿಡದ್ದಕ್ಕೆ ಬಾವಿ ಕೃಷಿ ಹೊಂಡಗಳು ಬತ್ತಿಹೋಗಿವೆ. ಇದರಿಂದಾಗಿ ಮುಖ್ಯ ಆರ್ಥಿಕ ಬೆಳೆಯಾದ ಕಬ್ಬು ಸೇರಿದಂತೆ ಅಂದಾಜು ರೂ.470 ಕೋಟಿ ರೂ ಬೆಳೆಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಅರಿಸಿಣ ಬೆಳೆಯುವದನ್ನು ಬಹಳಷ್ಟು ರೈತರು ಈ ಬಾರಿ ಕೈ ಬಿಟ್ಟಿದ್ದಾರೆ. ಸಮೀಪದ ಅರಣ್ಯ ಪ್ರದೇಶಗಳಲ್ಲಿಯೂ ನೀರಿನ ಕೊರತೆಯಿಂದ ಮೇವು ಬೆಳೆದಿಲ್ಲ. ಇದರಿಂದ ಜಾನುವಾರುಗಳಿಗೆ ಬಹಳ ತೊಂದರೆಯಾಗಿದೆ ಎಂದು ದೂರಿದ್ದಾರೆ.

ಬೆಳೆ ಹಾನಿ ವಿವರ :

ನಿರಾಣಿ ಉದ್ಯಮ ಸಮೂಹದ ಕೃಷಿ ವಿಭಾಗದ ಸಿಬ್ಬಂದಿ ಹಾಗೂ ಕೆಲವು ಪರಿಣಿತರ ನೆರವು ಪಡೆದು ಹಾನಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಮಹಾರಾಷ್ಟ್ರ ಎರಡು ಟಿ.ಎಂ.ಸಿ ನೀರು ಬೇಸಿಗೆಯಲ್ಲಿ ಬಿಟ್ಟಿದ್ದರೆ ನದಿ ದಂಡೆಯ ಜನರ ಬದಕು ತೊಂದರೆಗೆ ಈಡಾಗುತ್ತಿರಲಿಲ್ಲ. ಅಥಣಿ, ಜಮಖಂಡಿ ಮತ್ತು ಬೀಳಗಿ ಭಾಗದ 103 ಹಳ್ಳಿಗಳ ರೈತರ ಬೆಳೆ ಒಣಗಿದ ಬಗ್ಗೆ ಅಂದಾಜು ಮಾಡಲಾಗಿದೆ. ಈ ಭಾಗದಲ್ಲಿ ಶೇ.22 ರಷ್ಟು ಕಬ್ಬು ಹಾನಿಯಾಗಿದೆ. 32,000 ಎಕರೆ ಪ್ರದೇಶದ ಕಬ್ಬು ಒಣಗಿದೆ. ಈ ಹಾನಿಯಿಂದ ರೈತರು ಹೊರಬರಬೇಕಾದರೆ 3 ವರ್ಷ ಕಾಲಾವಕಾಶ ಬೇಕು. ರೈತರಿಗೆ ಆದ ಹಾನಿ ಯಾರು ತುಂಬಿಕೊಡುತ್ತಾರೆ ? ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ಧಾರೆ.

ದೇವೆಂದ್ರ ಫಡ್ನವೀಸ್‌ ಅವರು ನೀರು ಬಿಡುವುದಾಗಿ ಹೇಳಲೇ ಇಲ್ಲ. ಪರಿಶೀಲಿಸುವೆ ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದು ಡಿಪೊ್ಲೕಮೇಟಿಕ್‌ ಉತ್ತರ ನೀಡುತ್ತ ದಿನ ದೂಡಿದರು.
ಸಂಗಮೇಶ ನಿರಾಣಿ, ಹೋರಾಟ ಸಮಿತಿ ಸಂಚಾಲಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ