ಮಳೆಯಿಂದ ಕೆರೆ ಭರ್ತಿ, ನೀರು ಹೆಚ್ಚಿ ಜವುಳು ಈ ಸರ್ತಿ
ಹನಮಂತ ಬುರ್ಲಿ, ಗಲಗಲಿ ; ಕಳೆದ ಹತ್ತು ವರ್ಷಗಳಿಂದ ಬರಗಾಲದಿಂದ ತತ್ತರಿಸಿದ ಬೀಳಗಿ ತಾಲೂಕಿನ ಬಿಸನಾಳ, ತೆಗ್ಗಿ, ಸಿದ್ದಾಪೂರ, ನಾಗರಾಳ ಸೇರಿದಂತೆ ನಾನಾ ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿಈಗ ಮುಂಗಾರು ಮಳೆಗಳು ಉತ್ತಮವಾಗಿದ್ದರಿಂದ ಹಳ್ಳ ಕೊಳ್ಳಗಳಲ್ಲಿನೀರು ಹರಿದಿದೆ. ಬಾವಿ ಬೋರ್ವೆಲ್ಗಳಲ್ಲಿನೀರಿನ ಸಂಗ್ರಹ ಹೆಚ್ಚಾಗಿದೆ. ಈ ಸಾರಿ ಹರಿದ ಜಿಎಲ್ಬಿ ಸಿ ನೀರಿನಿಂದ ಬಿಸನಾಳದ ಐತಿಹಾಸಿಕ ಕೆರೆ ಸಂಪೂರ್ಣ ಭರ್ತಿಯಾಗಿದ್ದರಿಂದ ರೈತರಲ್ಲಿಹರ್ಷದ ಹೊನಲು ಹರಿದಿದೆ.
Vijaya Karnataka 17 Oct 2019, 5:00 am
ಹನಮಂತ ಬುರ್ಲಿ, ಗಲಗಲಿ ;
ಕಳೆದ ಹತ್ತು ವರ್ಷಗಳಿಂದ ಬರಗಾಲದಿಂದ ತತ್ತರಿಸಿದ ಬೀಳಗಿ ತಾಲೂಕಿನ ಬಿಸನಾಳ, ತೆಗ್ಗಿ, ಸಿದ್ದಾಪೂರ, ನಾಗರಾಳ ಸೇರಿದಂತೆ ನಾನಾ ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿಈಗ ಮುಂಗಾರು ಮಳೆಗಳು ಉತ್ತಮವಾಗಿದ್ದರಿಂದ ಹಳ್ಳ ಕೊಳ್ಳಗಳಲ್ಲಿನೀರು ಹರಿದಿದೆ. ಬಾವಿ ಬೋರ್ವೆಲ್ಗಳಲ್ಲಿನೀರಿನ ಸಂಗ್ರಹ ಹೆಚ್ಚಾಗಿದೆ. ಈ ಸಾರಿ ಹರಿದ ಜಿಎಲ್ಬಿ ಸಿ ನೀರಿನಿಂದ ಬಿಸನಾಳದ ಐತಿಹಾಸಿಕ ಕೆರೆ ಸಂಪೂರ್ಣ ಭರ್ತಿಯಾಗಿದ್ದರಿಂದ ರೈತರಲ್ಲಿಹರ್ಷದ ಹೊನಲು ಹರಿದಿದೆ.
ಮೈದುಂಬಿದ ಕೆರೆ:
ಕೃಷ್ಣಾ ಹಾಗೂ ಘಟಪ್ರಭಾ ಜಲಾನಯನದ ಪ್ರದೇಶದಲ್ಲಿಬಿದ್ದ ಮಳೆಯಿಂದ ಹಾಗೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬಿಟ್ಟ ನೀರಿನಿಂದ ಅವಳಿ ನದಿಗಳ ತೀರದ ಈ ಭಾಗದ ವಾಣಿಜ್ಯ ಬೆಳೆ ಕಬ್ಬು ಈರುಳ್ಳಿ ಗೋವಿನ ಜೋಳ ಸೇರಿದಂತೆ ಕೋಟ್ಯಂತರ ರೂ.ಗಳ ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿವೆ. ಆದರೆ ಮಳೆ ಆಶ್ರಿತ ಪ್ರದೇಶದಲ್ಲಿ ಸದ್ಯ ಮಳೆಯಾಗಿರುವುದರಿಂದ ರೈತರಲ್ಲಿಸಂತಸವನ್ನುಂಟು ಮಾಡಿದೆ. ಪ್ರಸಕ್ತ ವರ್ಷದಲ್ಲಿಮಾತ್ರ ಹರಿದ ಜಿಎಲ್ಬಿಸಿ ನೀರಿನಿಂದ ಬಿಸನಾಳದ ಐತಿಹಾಸಿಕ ಕೆರೆ ಮೈದುಂಬಿ ನಿಂತಿದೆ.
ನಳನಳಿಸುತ್ತಿರುವ ಅರಣ್ಯ:
ಈ ಭಾಗದಲ್ಲಿಧಾರಾಕಾರ ಬಿದ್ದ ಮಳೆಯಿಂದ ಅಂತರ್ಜಲ ಹೆಚ್ಚಾದರೆ ಬೇಸಿಗೆಯಲ್ಲಿಬರಡಾಗಿ ನಿಂತ ಈ ಭಾಗದ ವ್ಯಾಪ್ತಿಯಲ್ಲಿಬರುವ ಸಾವಿರಾರು ಎಕರೆಯ ಅರಣ್ಯ ಪ್ರದೇಶ ಇಂದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪರಿಸರ ಪ್ರಿಯರನ್ನುಕೈ ಬೀಸಿ ಕರೆಯುತ್ತಿದೆ. ಕೆಲ ಗ್ರಾಮಗಳಲ್ಲಿಕೊಯ್ಲಿಗೆ ಬಂದ ಸಜ್ಜಿ ಈರುಳ್ಳಿ ಸೇರಿದಂತೆ ನಾನಾ ಬೆಳೆಗಳ ರಾಶಿ ಮಾಡಲು ಸ್ವಲ್ಪ ತೊಂದರೆಯೂ ಆಗಿದೆ. ಆದರೆ ಈ ಭಾಗದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆ ಕಬ್ಬಿಗೂ ಅನುಕೂಲವಾಗಿ ಹಿಂಗಾರಿನ ಬಿಳಿಜೋಳದ ಬೆಳೆಗಳು ಉತ್ತಮ ಬೆಳೆಯಬಹುದೆಂಬ ಆಶಾ ಭಾವನೆ ರೈತರಲ್ಲಿಮೂಡಿದೆ. ಈಗಾಗಲೇ ಕೆಲ ಕಡೆ ಬಿಳಿಜೋಳ ಬಿತ್ತುವ ಕೃಷಿ ಚಟುವಟಿಕೆ ಚುರುಕುಗೊಂಡರೆ ವಾರಕಾಲ ಬಿಡುವು ಕೊಟ್ಟರೆ ಇನ್ನುಳಿದ ಭೂಮಿಯಲ್ಲಿರೈತರು ಜೋಳ, ಕುಸಿಬೆ ಮತ್ತಿತರ ಬೀಜ ಬಿತ್ತನೆಮಾಡುವ ನಿರೀಕ್ಷೆಯಲ್ಲಿದ್ದಾರೆ.
ರೈತರ ಆತಂಕ
ಹಲವಾರು ವರ್ಷಗಳಿಂದ ಮಳೆಯಾಗದೆ ಬರಡಾಗಿದ್ದ ಬಿಸನಾಳ ಭಾಗದಲ್ಲಿಈಗ ಉತ್ತಮ ಮಳೆಯಾಗಿದೆ. ಸಾರಿಯೂ ಸರಿಯಾಗಿ ಜಿಎಲ್ಬಿಸಿ ಕಾಲುವೆಯ ನೀರು ಸುರಕ್ಷಿತವಾಗಿ ಬಂದಿದೆ. ಆದರೆ ಬಿಸನಾಳ ಗ್ರಾಮದ ಪಕ್ಕದಲ್ಲಿಹಾಯ್ದು ಹೋಗಿರುವ ಜಿಎಲ್ಬಿಸಿ ಕಾಲುವೆಗೆ ಸರಿಯಾಗಿ ಬೆಡ್ ಕಾಂಕ್ರೀಟ್ ಹಾಕದೇ ಇರುವುದರಿಂದ ಕೆಲ ಭೂಮಿಯಲ್ಲಿನೀರು ಬಸಿದು ಜವಳಾಗುತ್ತಿದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.
ಕಳೆದ ಹತ್ತು ವರ್ಷಗಳಿಂದ ಬರಗಾಲದಿಂದ ತತ್ತರಿಸಿದ ಬೀಳಗಿ ತಾಲೂಕಿನ ಬಿಸನಾಳ, ತೆಗ್ಗಿ, ಸಿದ್ದಾಪೂರ, ನಾಗರಾಳ ಸೇರಿದಂತೆ ನಾನಾ ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿಈಗ ಮುಂಗಾರು ಮಳೆಗಳು ಉತ್ತಮವಾಗಿದ್ದರಿಂದ ಹಳ್ಳ ಕೊಳ್ಳಗಳಲ್ಲಿನೀರು ಹರಿದಿದೆ. ಬಾವಿ ಬೋರ್ವೆಲ್ಗಳಲ್ಲಿನೀರಿನ ಸಂಗ್ರಹ ಹೆಚ್ಚಾಗಿದೆ. ಈ ಸಾರಿ ಹರಿದ ಜಿಎಲ್ಬಿ ಸಿ ನೀರಿನಿಂದ ಬಿಸನಾಳದ ಐತಿಹಾಸಿಕ ಕೆರೆ ಸಂಪೂರ್ಣ ಭರ್ತಿಯಾಗಿದ್ದರಿಂದ ರೈತರಲ್ಲಿಹರ್ಷದ ಹೊನಲು ಹರಿದಿದೆ.
ಮೈದುಂಬಿದ ಕೆರೆ:
ಕೃಷ್ಣಾ ಹಾಗೂ ಘಟಪ್ರಭಾ ಜಲಾನಯನದ ಪ್ರದೇಶದಲ್ಲಿಬಿದ್ದ ಮಳೆಯಿಂದ ಹಾಗೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬಿಟ್ಟ ನೀರಿನಿಂದ ಅವಳಿ ನದಿಗಳ ತೀರದ ಈ ಭಾಗದ ವಾಣಿಜ್ಯ ಬೆಳೆ ಕಬ್ಬು ಈರುಳ್ಳಿ ಗೋವಿನ ಜೋಳ ಸೇರಿದಂತೆ ಕೋಟ್ಯಂತರ ರೂ.ಗಳ ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿವೆ. ಆದರೆ ಮಳೆ ಆಶ್ರಿತ ಪ್ರದೇಶದಲ್ಲಿ ಸದ್ಯ ಮಳೆಯಾಗಿರುವುದರಿಂದ ರೈತರಲ್ಲಿಸಂತಸವನ್ನುಂಟು ಮಾಡಿದೆ. ಪ್ರಸಕ್ತ ವರ್ಷದಲ್ಲಿಮಾತ್ರ ಹರಿದ ಜಿಎಲ್ಬಿಸಿ ನೀರಿನಿಂದ ಬಿಸನಾಳದ ಐತಿಹಾಸಿಕ ಕೆರೆ ಮೈದುಂಬಿ ನಿಂತಿದೆ.
ನಳನಳಿಸುತ್ತಿರುವ ಅರಣ್ಯ:
ಈ ಭಾಗದಲ್ಲಿಧಾರಾಕಾರ ಬಿದ್ದ ಮಳೆಯಿಂದ ಅಂತರ್ಜಲ ಹೆಚ್ಚಾದರೆ ಬೇಸಿಗೆಯಲ್ಲಿಬರಡಾಗಿ ನಿಂತ ಈ ಭಾಗದ ವ್ಯಾಪ್ತಿಯಲ್ಲಿಬರುವ ಸಾವಿರಾರು ಎಕರೆಯ ಅರಣ್ಯ ಪ್ರದೇಶ ಇಂದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಪರಿಸರ ಪ್ರಿಯರನ್ನುಕೈ ಬೀಸಿ ಕರೆಯುತ್ತಿದೆ. ಕೆಲ ಗ್ರಾಮಗಳಲ್ಲಿಕೊಯ್ಲಿಗೆ ಬಂದ ಸಜ್ಜಿ ಈರುಳ್ಳಿ ಸೇರಿದಂತೆ ನಾನಾ ಬೆಳೆಗಳ ರಾಶಿ ಮಾಡಲು ಸ್ವಲ್ಪ ತೊಂದರೆಯೂ ಆಗಿದೆ. ಆದರೆ ಈ ಭಾಗದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆ ಕಬ್ಬಿಗೂ ಅನುಕೂಲವಾಗಿ ಹಿಂಗಾರಿನ ಬಿಳಿಜೋಳದ ಬೆಳೆಗಳು ಉತ್ತಮ ಬೆಳೆಯಬಹುದೆಂಬ ಆಶಾ ಭಾವನೆ ರೈತರಲ್ಲಿಮೂಡಿದೆ. ಈಗಾಗಲೇ ಕೆಲ ಕಡೆ ಬಿಳಿಜೋಳ ಬಿತ್ತುವ ಕೃಷಿ ಚಟುವಟಿಕೆ ಚುರುಕುಗೊಂಡರೆ ವಾರಕಾಲ ಬಿಡುವು ಕೊಟ್ಟರೆ ಇನ್ನುಳಿದ ಭೂಮಿಯಲ್ಲಿರೈತರು ಜೋಳ, ಕುಸಿಬೆ ಮತ್ತಿತರ ಬೀಜ ಬಿತ್ತನೆಮಾಡುವ ನಿರೀಕ್ಷೆಯಲ್ಲಿದ್ದಾರೆ.
ರೈತರ ಆತಂಕ
ಹಲವಾರು ವರ್ಷಗಳಿಂದ ಮಳೆಯಾಗದೆ ಬರಡಾಗಿದ್ದ ಬಿಸನಾಳ ಭಾಗದಲ್ಲಿಈಗ ಉತ್ತಮ ಮಳೆಯಾಗಿದೆ. ಸಾರಿಯೂ ಸರಿಯಾಗಿ ಜಿಎಲ್ಬಿಸಿ ಕಾಲುವೆಯ ನೀರು ಸುರಕ್ಷಿತವಾಗಿ ಬಂದಿದೆ. ಆದರೆ ಬಿಸನಾಳ ಗ್ರಾಮದ ಪಕ್ಕದಲ್ಲಿಹಾಯ್ದು ಹೋಗಿರುವ ಜಿಎಲ್ಬಿಸಿ ಕಾಲುವೆಗೆ ಸರಿಯಾಗಿ ಬೆಡ್ ಕಾಂಕ್ರೀಟ್ ಹಾಕದೇ ಇರುವುದರಿಂದ ಕೆಲ ಭೂಮಿಯಲ್ಲಿನೀರು ಬಸಿದು ಜವಳಾಗುತ್ತಿದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.