ಆ್ಯಪ್ನಗರ

ಕನಕರಾಯನ ಜಾತ್ರೆಯಲ್ಲಿ ಮದ್ಯವೇ ತೀರ್ಥ

ಬಸವರಾಜ ಯಂಡಿಗೇರಿ ಗುಳೇದಗುಡ್ಡ ಒಳ್ಳೆ ದೇವರಿಗೆ ಹಾಲು ತುಪ್ಪದ ನೈವೇದ್ಯವಂತೆ, ಚಂಡಿ ದೇವರಿಗೆ ರಕ್ತ ಮಾಂಸದ ನೈವೇದ್ಯವಂತೆ ಆದರೆ ಇಲ್ಲಿನ ದೇವರಿಗೆ ಮದ್ಯದ ತೀರ್ಥವೇ ನೈವೇದ್ಯ! ಮಂಗಳವಾರ ಕನಕರಾಯರ ಜಾತ್ರೆ ನಿಮಿತ್ತ ಭಕ್ತರು ದೇವರಿಗೆ ಮದ್ಯ ಸಮರ್ಪಣೆ ಮಾಡಿದರು.

Vijaya Karnataka 27 Mar 2019, 5:00 am
ಬಸವರಾಜ ಯಂಡಿಗೇರಿ ಗುಳೇದಗುಡ್ಡ
Vijaya Karnataka Web the liquor is a drink at kanakarayana jatra
ಕನಕರಾಯನ ಜಾತ್ರೆಯಲ್ಲಿ ಮದ್ಯವೇ ತೀರ್ಥ


ಒಳ್ಳೆ ದೇವರಿಗೆ ಹಾಲು ತುಪ್ಪದ ನೈವೇದ್ಯವಂತೆ, ಚಂಡಿ ದೇವರಿಗೆ ರಕ್ತ ಮಾಂಸದ ನೈವೇದ್ಯವಂತೆ ಆದರೆ ಇಲ್ಲಿನ ದೇವರಿಗೆ ಮದ್ಯದ ತೀರ್ಥವೇ ನೈವೇದ್ಯ! ಮಂಗಳವಾರ ಕನಕರಾಯರ ಜಾತ್ರೆ ನಿಮಿತ್ತ ಭಕ್ತರು ದೇವರಿಗೆ ಮದ್ಯ ಸಮರ್ಪಣೆ ಮಾಡಿದರು.

ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ಸಮೀಪದ ಕೆಲವಡಿ ರಂಗನಾಥ ಹಾಗೂ ಕನಕರಾಯರ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರು, ತಮಗಿರುವ ಕಷ್ಟಗಳು ಪರಿಹಾರವಾದರೆ ಅಥವಾ ದೇವಸ್ಥಾನದಲ್ಲಿ ನಿಂತು ತಾವು ಬೇಡಿಕೊಂಡ ಇಷ್ಟಾರ್ಥ ನೆರವೇರಿದರೆ ಇಂತಿಷ್ಟು ಮಧ್ಯದ ಬಾಟಲಿಗಳು ಸಮರ್ಪಿಸುವುದಾಗಿ ಬೇಡಿಕೊಳ್ಳುತ್ತಾರೆ. ಅದರಂತೆ ಭಕ್ತರು ತಮ್ಮ ಇಧಿಷ್ಟಾರ್ಥ ಈಡೇರಿದಾಗ ಇಲ್ಲಿಗೆ ಬಂದು ಮದ್ಯದ ಬಾಟಲಿಗಳನ್ನು ತಂದು ಪ್ರತಿವರ್ಷ ದೇವರಿಗೆ ನೈವೇದ್ಯ ಅರ್ಪಿಸಿ ಹೋಗುತ್ತಾರೆ.

ಭಧಿಕ್ತರ ನಂಬಿಧಿಕೆ:

ಗ್ರಾಮದ ರಂಗನಾಥ ಹಾಗೂ ಕನಕರಾಯ ದೇವರು ಅಣ್ಣ ತಮ್ಮಂದಿರು. ಲಿಂಗಾಪೂರ-ಶಿರೂರ ಮಾರ್ಗದ ಮಧ್ಯದಲ್ಲಿ ಕನಕರಾಯರ ದೇವಸ್ಥಾನವಿದೆ. ಈ ಇಬ್ಬರು ದೇವರು ತೀರ್ಥ ಪ್ರೀಯರು ಎಂಬುದು ಇಲ್ಲಿನ ಭಕ್ತರ ನಂಬಿಕೆ.

ಇಲ್ಲಿಗೆ ಬೇರೆ ಊರಿನಿಂದ ಬರುವ ಭಕ್ತರು ಕ್ವಾಲಿಟಿ ಮದ್ಯದಿಂದ ಹಿಡಿದು ಬೀಯರ್‌, ವಿಸ್ಕಿ, ರಂ ಹೀಗೆ ತಮ್ಮ ಭಕ್ತಿ , ಶಕ್ತಿ ಹಾಗೂ ತಾವು ಸೇವಿಸುವ ಇಷ್ಟದ ಮದ್ಯ ತೆಗೆದುಕೊಂಡು ದೇವಸ್ಥಾನಕ್ಕೆ ತೆರಳುತ್ತಾರೆ. ಅಲ್ಲಿ ಮದ್ಯದ ಬಾಟಲಿನ ಸ್ವಲ್ಪ ಮದ್ಯವನ್ನು ಗುಡಿಯ ಪೂಜಾರಿಯವರು ದೇವರಿಗೆ ಅರ್ಪಿಸುವರು. ನಂತರ ತಾವು ಅರ್ಪಿಸಿ ತಂದ ಮದ್ಯವನ್ನು ಭಕ್ತರು ಸೇವಿಸಿ ಅಲ್ಲೇ ನಡೆಯುವ ಅನ್ನ ಸಂತರ್ಪಣೆಯಲ್ಲಿ ಊಟ ಮಾಡಿ ಸಂತೃಪ್ತರಾದರು.

ರಂಗನಾಥನ ಜಾತ್ರೆ ಎರಡು ದಿವಸ ಇರುವಾಗ ಹಂಸನೂರಿನಿಂದ ಅಮ್ಮನವರು ಬರುತ್ತಾರೆ. ರಂಗನಾಥಸ್ವಾಮಿ ಜಾತ್ರೆಯ ಮುನ್ನಾ ದಿನ ರಂಗನಾಥ ಸ್ವಾಮಿಯು ತನ್ನ ಅಣ್ಣನಾದ ಕನಕರಾಯರನ್ನು ಭೇಟಿ ಮಾಡಿ, ಜಾತ್ರೆಗೆ ಆಹ್ವಾನಿಸಲು ಲಿಂಗಾಪೂರ-ಶಿರೂರ ಮಾರ್ಗದಲ್ಲಿನ ಕನಕರಾಯಸ್ವಾಮಿ ಗುಡಿಗೆ ತೆರಳುತ್ತಾನೆ. ಆಗ ಕನಕರಾಯನ ಜಾತ್ರೆ ನಡೆಯುತ್ತದೆ ಎಂಬುದು ಇಲ್ಲಿಯ ಗ್ರಾಮಸ್ಥರ ನಂಬಿಕೆ.

ಉಡುಪಿ,ಮಂಗಳೂರ, ಗೋವಾ, ಬೆಂಗಳೂರ ಮತ್ತಿತರರ ಪ್ರದೇಶಗಳಲ್ಲಿ ದುಡಿಯಲು ತೆರಳಿದ ಕೆಲವಡಿ ಗ್ರಾಮದ ಹಲವಾರು ಜನರು ತಮ್ಮ ನೆಚ್ಚಿನ ದೇವರಾದ ಕನಕರಾಯ ಹಾಗೂ ರಂಗನಾಥಸ್ವಾಮಿ ಜಾತ್ರೆಗೆ ಬರುತ್ತಾರೆ. ಅಷ್ಟೇ ಅಲ್ಲದೇ ತಾವು ಕೆಲಸ ಮಾಡುವ ಸ್ಥಳದಿಂದಲೇ ಮದ್ಯವನ್ನು ತಂದು ಕನಕರಾಯ ಹಾಗೂ ಶ್ರೀ ರಂಗನಾಥ ದೇವರಿಗೆ ಅರ್ಪಿಸುತ್ತಾರೆ.

ಕನಕರಾಯರ ಸಹೋದರನಾದ ಶ್ರೀಲಕ್ಷ್ಮೀ ರಂಗನಾಥ ರಥೋತ್ಸವ ಮಾ.27ರಂದು ಸಂಜೆ 5ಗಂಟೆಗೆ ಜರುಗಲಿದೆ. ಓಕಳಿ, ಅಶ್ವವಾಹನೋತ್ಸವ, ವಾದಿ ಪದಗಳು ಹಾಗೂ ಕಡುಬಿನ ಕಾಳಗ, ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ