ಆ್ಯಪ್ನಗರ

ಕತ್ತು ಹಿಚುಕಿ ಯುವಕನ ಕೊಲೆ

ಬಾದಾಮಿ: ತಾಲೂಕಿನ ಹಿರೇನಸಬಿ ಗ್ರಾಮದಲ್ಲಿ ಬುಧವಾರ ಕ್ಷ ುಲ್ಲಕ ಕಾರಣಕ್ಕೆ ಯುವಕನ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ.

Vijaya Karnataka 27 Jun 2019, 5:00 am
ಬಾದಾಮಿ: ತಾಲೂಕಿನ ಹಿರೇನಸಬಿ ಗ್ರಾಮದಲ್ಲಿ ಬುಧವಾರ ಕ್ಷ ುಲ್ಲಕ ಕಾರಣಕ್ಕೆ ಯುವಕನ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ.
Vijaya Karnataka Web the murder of a young boy
ಕತ್ತು ಹಿಚುಕಿ ಯುವಕನ ಕೊಲೆ


ರೆಹಮಾನಸಾಬ್‌ ದಾವಲಸಾಬ್‌ ಜಗಾಪುರ(24)ಕೊಲೆಯಾದವ. ಹಿರೇನಸಬಿ ಗ್ರಾಮದ ನಿವಾಸಿಗಳಾದ ಜಗಾಪುರ ಮತ್ತು ವಡ್ಡರ ಕುಟುಂಬಸ್ಥರ ನಡುವೆ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.

ಮಕ್ಕಳು ಆಟವಾಡುತ್ತಿದ್ದ ಸಮಯದಲ್ಲಿ ಕೊಲೆಯಾದ ರೆಹಮಾನ ಜಗಾಪುರ ಗೋಲಿಗುಂಡಾ ಕಸಿದುಕೊಂಡಿದ್ದಾನೆ. ಮಕ್ಕಳು ಪಾಲಕರಿಗೆ ತಿಳಿಸಿದ್ದಾರೆ. ಮಕ್ಕಳು ಆಟವಾಡುವ ಗುಂಡುಗಳನ್ನು ಕೊಡಲು ವಿನಂತಿಸಿದ್ದಾರೆ. ಕೊಡದೇ ಇದ್ದಾಗ ಮುಂದೆ ಜಗಳ ವಿಕೋಪಕ್ಕೆ ತಿರುಗಿ ರೆಹಮಾನನ ಕೊಲೆಯಾಗಿದೆ. ಈ ಕುರಿತು ಬಾದಾಮಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ ಅಲ್ಲಪ್ಪ ವಡ್ಡರ, ರೇಣವ್ವ ಕೋಣಪ್ಪ ವಡ್ಡರ, ಶಂಕ್ರವ್ವ ಯಮನಪ್ಪ ವಡ್ಡರ, ಹನಮಂತ ವಡ್ಡರ ಕೂಡಿಕೊಂಡು ರೆಹಮಾನನ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.

ರೇಣವ್ವ ವಡ್ಡರ, ಶಂಕ್ರವ್ವ ವಡ್ಡರ ಅವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಎಸೈ ಪ್ರಕಾಶ ಬಣಕಾರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ