ಆ್ಯಪ್ನಗರ

ಪ್ರವಾಹ ಮಟ್ಟ ನೋಡಲು ಹೋದವ ವಿದ್ಯುತ್ ಕಂಬ ಏರಿ ಜೀವ ಉಳಿಸಿಕೊಂಡ

ತೇರದಾಳ: ಸ್ನೇಹಿತರ ಜೊತೆ ನೀರಿನ ಮಟ್ಟ ನೋಡಲು ಹೋಗಿ ವಾಪಸ್‌ ಬರುವ ವೇಳೆ ಕಾಲು ಜಾರಿ ನೀರಲ್ಲಿ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್‌ ವಿದ್ಯುತ್‌ ಕಂಬದ ಸಹಾಯದಿಂದ ಯುವಕ ಬದುಕುಳಿದಿದ್ದಾನೆ.

Vijaya Karnataka 17 Aug 2019, 8:21 am
ತೇರದಾಳ: ಸ್ನೇಹಿತರ ಜೊತೆ ನೀರಿನ ಮಟ್ಟ ನೋಡಲು ಹೋಗಿ ವಾಪಸ್‌ ಬರುವ ವೇಳೆ ಕಾಲು ಜಾರಿ ನೀರಲ್ಲಿ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್‌ ವಿದ್ಯುತ್‌ ಕಂಬದ ಸಹಾಯದಿಂದ ಯುವಕ ಬದುಕುಳಿದಿದ್ದಾನೆ.
Vijaya Karnataka Web the power pole that saved the young mans life
ಪ್ರವಾಹ ಮಟ್ಟ ನೋಡಲು ಹೋದವ ವಿದ್ಯುತ್ ಕಂಬ ಏರಿ ಜೀವ ಉಳಿಸಿಕೊಂಡ


ಘಟನೆ ವಿವರ:

ತಮದಡ್ಡಿ ಗ್ರಾಮದ ಸುರೇಶ ಪೂಜಾರಿ ಹಾಗೂ ಇತರೇ ನಾಲ್ಕೈದು ಸ್ನೇಹಿತರು ಸೇರಿ ಗುರುವಾರ ಗ್ರಾಮದಲ್ಲಿನ ಪ್ರವಾಹದ ನೀರಿನಮಟ್ಟ ನೋಡಲು ಹೋಗಿದ್ದಾರೆ. ಚೆಲ್ಲಾಟ ಆಡಿಕೊಂಡು ವಾಪಸ್‌ ಬರುವಾಗ ಸುರೇಶ ಕಾಲು ರಸ್ತೆ ಬದಿಯಿಂದ ಕೆಳಗೆ ಜಾರಿ ನೀರಲ್ಲಿ ಹರಿದುಕೊಂಡು ಹೋಗುತ್ತಿದ್ದಂತೆ ಮುಂದೆ ವಿದ್ಯುತ್‌ ಕಂಬ ಬಂದಿದೆ. ಅದನ್ನು ನೋಡಿದ ಸ್ನೇಹಿತರು ವಿದ್ಯುತ್‌ ಕಂಬ ಹಿಡಿದುಕೊಳ್ಳಲು ಕೂಗಿ ಹೇಳಿದ್ದಾರೆ. ಕಂಬ ಬರುತ್ತಿದ್ದಂತೆ ಸುರೇಶ ವಿದ್ಯುತ್‌ ಕಂಬವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಗ್ರಾಮದಲ್ಲಿ ನೀರು ಬಂದಿದ್ದರಿಂದ ಹೆಸ್ಕಾಂನವರು ವಿದ್ಯುತ್‌ ಕಡಿತಗೊಳಿಸಿದ್ದರು. ಆದರೆ ನೀರಿನ ಸೆಳೆತ ಜೋರಾಗಿದ್ದರಿಂದ ಮತ್ತಷ್ಟು ಆತಂಕಗೊಂಡ ಸುರೇಶ ಸರಸರನೇ ಕಂಬವನ್ನು ಹತ್ತಿ ಮೇಲೆ ಕುಳಿತಿದ್ದಾನೆ.

ಅಧಿಕಾರಿಗಳಿಗೆ ಮಾಹಿತಿ:

ಸುರೇಶ ಕಂಬ ಹತ್ತಿದ ಬಳಿಕ ಆತನ ಸ್ನೇಹಿತರು ದೂರವಾಣಿ ಮೂಲಕ ನೋಡಲ್‌ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷ ಣವೇ ಸ್ಪಂದಿಸಿದ ಅಧಿಕಾರಿಗಳು ಬೋಟ್‌ ತೆಗೆದುಕೊಂಡು ಹೋಗಿ ಸುರೇಶನನ್ನು ಕರೆದುಕೊಂಡು ಬಂದಿದ್ದಾರೆ. ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಯವಕರ ಚಲ್ಲಾಟವನ್ನು ತರಾಟೆಗೆ ತೆಗೆದುಕೊಂಡರು.

ವಿಡಿಯೋ ವೈರಲ್‌:


ಇನ್ನು ಸುರೇಶ ವಿದ್ಯುತ್‌ ಕಂಬದ ಮೇಲೆ ಹತ್ತಿ ಕುಳಿತ ಮತ್ತು ಆತನನ್ನು ಬೋಟ್‌ನಲ್ಲಿ ಕರೆದುಕೊಂಡು ಬರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಿದ ಪ್ರತಿಯೊಬ್ಬರು ನೀರಿನ ಜೊತೆಗೆ ಚೆಲ್ಲಾಟ ಆಡಿ ಅಧಿಕಾರಿಗಳಿಗೆ ಕಿರಿಕಿರಿ ಮಾಡಿರುವುದಕ್ಕೆ ಛೀಮಾರಿ ಹಾಕುತ್ತಿದ್ದಾರೆ.

ಮೊನ್ನೆಯಷ್ಟೇ ಅಧಿಕಾರಿಗಳ ಕಣ್ಣು ತಪ್ಪಿಸಿ ಇದೇ ತಮದಡ್ಡಿ ಗ್ರಾಮಸ್ಥರು ರಾತ್ರಿ ಗ್ರಾಮದೊಳಗೆ ಹೋಗಿದ್ದ 24 ಜನರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ರಕ್ಷ ಣೆ ಮಾಡಲಾಗಿತ್ತು. ಈಗ ಮತ್ತೆ ಹೋಗಿ ಅನಾಹುತಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ