ಆ್ಯಪ್ನಗರ

ತಿಂಗಳಾದರೂ ತಪ್ಪದ ನೀರಿನ ತಾಪತ್ರೆ

ಗುಳೇದಗುಡ್ಡ : ಪಟ್ಟಣ ಸಮೀಪದ ಗುಳೇದಗುಡ್ಡ ರೈಲ್ವೆ ಗ್ರಾಮದಲ್ಲಿ 200 ಮನೆಗಳಿರುವ ಪ್ರದೇಶದಲ್ಲಿ ಒಂದೂವರೆ ತಿಂಗಳಿಂದ ನೀರಿನ ತಾಪತ್ರೆ ಹೆಚ್ಚಿದೆ.ಇದಕ್ಕೆ ತಹಸೀಲ್ದಾರ್‌ ಭೇಟ್ಟಿ ನೀಡಿ ವಾರ ಕಳೆದರೂ ಈವರಿಗೆ ಕುಡಿಯುವ ನೀರು ಮಾತ್ರ ಬಂದಿಲ್ಲ.

Vijaya Karnataka 5 May 2019, 5:00 am
ಗುಳೇದಗುಡ್ಡ : ಪಟ್ಟಣ ಸಮೀಪದ ಗುಳೇದಗುಡ್ಡ ರೈಲ್ವೆ ಗ್ರಾಮದಲ್ಲಿ 200 ಮನೆಗಳಿರುವ ಪ್ರದೇಶದಲ್ಲಿ ಒಂದೂವರೆ ತಿಂಗಳಿಂದ ನೀರಿನ ತಾಪತ್ರೆ ಹೆಚ್ಚಿದೆ.ಇದಕ್ಕೆ ತಹಸೀಲ್ದಾರ್‌ ಭೇಟ್ಟಿ ನೀಡಿ ವಾರ ಕಳೆದರೂ ಈವರಿಗೆ ಕುಡಿಯುವ ನೀರು ಮಾತ್ರ ಬಂದಿಲ್ಲ.
Vijaya Karnataka Web the snakebite in the guledgudd railway village
ತಿಂಗಳಾದರೂ ತಪ್ಪದ ನೀರಿನ ತಾಪತ್ರೆ


ಟ್ಯಾಂಕರ್‌ ನೀರು: ಈ ಗ್ರಾಮದಲ್ಲಿ ತಮ್ಮ ತಮ್ಮ ಮನೆಗೆ ಕುಡಿಯುವ ನೀರಿಗಾಗಿ ಒಂದು ಟ್ಯಾಂಕರ್‌ಗೆ ಸುಮಾರು 500ರೂ.ಹಣ ಕೊಟ್ಟು ಹಾಕಿಸಿಕೊಳ್ಳುತ್ತಿದ್ದಾರೆ. ಇದು ಬಡ ಜನರಿಗೆ ಸಾಧ್ಯವಾಗುತ್ತಿಲ್ಲ ಅಧಿಕಾರಿಗಳು ಕೇವಲ ಎರಡು ಟ್ಯಾಂಕರ್‌ ನೀರು ಹಾಕಿಸುವುದಾಗಿ ಹೇಳುತ್ತಾರೆ. ಇದು ಸಾಕಾಗದ ಕಾರಣ ಈ ಊರಲ್ಲಿ ನಿತ್ಯ ಜಗಳಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ನೀರಿನ ಸಹವಾಸ ಬೇಡವೇ ಬೇಡ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಹಸೀಲ್ದಾರ್‌ ಭೇಟ್ಟಿ:

ಗ್ರಾಮದಲ್ಲಿ ನೀರಿನ ಸಮಸ್ಯೆಯಿಂದಾಗಿ ಬಾದಾಮಿ ತಾಲೂಕು ತಹಸೀಲ್ದಾರ್‌ ಎಸ್‌.ಎಸ್‌.ಇಂಗಳೆ ಅವರು ಭೇಟ್ಟಿ ನೀಡಿ ಅಧಿಕಾರಿಗಳಿಗೆ ಸೂಚಿಸಿದ್ದರೂ ಈವರೆಗೆ ಸಮಸ್ಯೆ ಮಾತ್ರ ಬಗೆ ಹರಿದಿಲ್ಲ ಎನ್ನುವುದು ನಾಗರಿಕರ ದೂರು.

ಖಾಜಿ ಬೂದಿಹಾಳ ಹತ್ತಿರ ನೀರಿನ ಪಾಯಿಂಟ ಇದ್ದರೂ ಅಲ್ಲಿ 5-6 ಲಕ್ಷ ರೂ ಖರ್ಚಾಗುತ್ತದೆ ಎಂದು ಬೋರ್‌ವೆಲ್‌ ಹಾಕಿಸಿಲ್ಲ ಇದರಿಂದ ಮತ್ತಷ್ಟು ತೊಂದರೆಯಾಗಿದೆ. ಪ್ರತಿವರ್ಷ ಇಲ್ಲಿ ಗೋಳು ಕೇಳುವವರು ಯಾರು ಎಂದು ಜನ ತಮ್ಮ ಅಳಲು ತೋಡಿಕೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ