ಆ್ಯಪ್ನಗರ

ತನಿಖೆಗೆ ಶಾಸಕ ಸಿದ್ದುಗೆ ಗ್ರಾಮಸ್ಥರ ಮನವಿ

ಕೆರೂರ: ಬಿಸಿಊಟದಲ್ಲಿ ಪ್ಲಾಸ್ಟಿಕ್‌ ಮಿಶ್ರಿತ ಅಕ್ಕಿ ಪತ್ತೆಯಾದ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಎಂದು ಹಳಗೇರಿ ಗ್ರಾಮಸ್ಥರು ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

Vijaya Karnataka 5 Nov 2018, 5:00 am
ಕೆರೂರ: ಬಿಸಿಊಟದಲ್ಲಿ ಪ್ಲಾಸ್ಟಿಕ್‌ ಮಿಶ್ರಿತ ಅಕ್ಕಿ ಪತ್ತೆಯಾದ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು ಎಂದು ಹಳಗೇರಿ ಗ್ರಾಮಸ್ಥರು ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web the villagers appeal to the mla siddu to probe the matter
ತನಿಖೆಗೆ ಶಾಸಕ ಸಿದ್ದುಗೆ ಗ್ರಾಮಸ್ಥರ ಮನವಿ


ಸಮೀಪದ ಹಳಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಹಿಂದೆ ಬಿಸಿಊಟದ ಕೆಲ ಅಕ್ಕಿಚೀಲಗಳಲ್ಲಿ ಕಾಣಿಸಿಕೊಂಡಿದ್ದ ಪ್ಲಾಸ್ಟಿಕ್‌ ತುಕಡಿಗಳ ಮಿಶ್ರಣವು ಗ್ರಾಮದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.

ಶಿಕ್ಷಣ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಬೇರೆ ಅಕ್ಕಿ ಪೂರೈಕೆ

ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೃಷ್ಣ ಸಿಮಿಕೇರಿ ಸಮ್ಮುಖದಲ್ಲಿ ಅಕ್ಷ ರ ದಾಸೋಹ ಅಧಿಕಾರಿ ಆರ್‌.ಎಸ್‌.ಆದಾಪೂರ, ಆಹಾರ ಗುಣಮಟ್ಟ ಹಾಗೂ ಸುರಕ್ಷಿತ ಅಧಿಕಾರಿ ಎಸ್‌.ಎ.ಕೊತ್ವಾಲ ಶಾಲೆಗೆ ಭೇಟಿ ನೀಡಿ ಆಹಾರ ಸಾಮುಗ್ರಿಗಳನ್ನು ಪರಿಸೀಲಿಸಿ ಸಂಗ್ರಹವಾಗಿದ್ದ ನಾಲ್ಕಾರು ಕಿಂಟ್ವಾಲ್‌ ಅಕ್ಕಿಯನ್ನು ಬದಲಿಸಿ ಬೇರೆ ಅಕ್ಕಿಯನ್ನು ನೀಡಿದ್ದಾರೆ.

ಕಳೆದ ಒಂದೆರಡು ತಿಂಗಳ ಹಿಂದೆ ಪಕ್ಕದ ಉಗಲವಾಟ ಗ್ರಾಮದ ಹೇಮ-ವೇಮ ಪ್ರೌಢಶಾಲೆಯಲ್ಲಿ ಪ್ಲಾಸ್ಟಿಕ್‌ ಮಿಶ್ರಿತ ಅಕ್ಕಿ ಕಾಣಿಸಿಕೊಂಡಿತ್ತು, ತಾಲೂಕುಮಟ್ಟದ ಅಧಿಕಾರಿಗಳು ಇದನ್ನು ಒತ್ತಡ ಹೇರಿ ಇಲ್ಲಿಯೇ ಮರೆ ಮಾಡಿದ್ದರು, ಈಗ ಹಳಗೇರಿ ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡಾಗ ಈ ಭಾಗದಲ್ಲಿ ಮತ್ತಷ್ಟು ಭಯದ ವಾತಾವರಣಕ್ಕೆ ಇಮ್ಮಡಿ ಸಿಕ್ಕಂತಾಗಿದೆ.

ಆಯುಕ್ತರ ಎಚ್ಚರಿಕೆ ಪತ್ರ

ಧಾರವಾಡದ ಸಾರ್ವಜನಿಕ ಶಿಕ್ಷ ಣ ಇಲಾಖೆಯ ಆಯುಕ್ತರ ಕಚೇರಿಯು ಹಳಗೇರಿ ಗ್ರಾಮದ ಪ್ಲಾಸ್ಟಿಕ್‌ ಮಿಶ್ರಿತ ಅಕ್ಕಿ ಪ್ರಕರಣದಿಂದ ಎಚ್ಚೆತ್ತುಕೊಂಡು ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆ ಮತ್ತು ತಾಲೂಕು ಕಚೇರಿಗಳಿಗೆ ಎಚ್ಚರಿಕೆ ಮತ್ತು ನಿರ್ವಹಣೆ ಬಳಕೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಆಯುಕ್ತ ಸಿದ್ದಲಿಂಗಯ್ಯ ಎಸ್‌.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಮಕ್ಕಳ ಆರೋಗ್ಯ ತಪಾಸಣೆ ಮಾಡಿ

ಉಗಲವಾಟ, ಹಳಗೇರಿ ಗ್ರಾಮದಲ್ಲಿ ಕಾಣಿಸಿಕೊಂಡ ಪ್ಲಾಸ್ಟಿಕ್‌ ಅಂಶವುಳ್ಳ ಅಕ್ಕಿಯಿಂದ ಭಯ ಭೀತರಾಗಿರುವ ಎಲ್ಲ ಮಕ್ಕಳ ಆರೋಗ್ಯವನ್ನು ತುರ್ತಾಗಿ ತಪಾಸಣೆ ಮಾಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಸಿಮಿಕೇರಿ ಶಿಕ್ಷ ಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಬಿಇ ಹಿಂದೇಟು

ಪಕ್ಕದ ಉಗಲವಾಟ ಗ್ರಾಮದಲ್ಲಿ ಕಳೆದ ಒಂದೆರಡು ತಿಂಗಳ ಹಿಂದೆ ಕಾಣಿಸಿಕೊಂಡ ಪ್ಲಾಸ್ಟಿಕ್‌ ಮಿಶ್ರಿತ ಅಕ್ಕಿ ಅಂಶವನ್ನು ಬಿಇಒ ಎ.ಎಸ್‌ ಹತ್ತಳ್ಳಿ ಗಂಭೀರವಾಗಿ ಪರಿಗಣಿಸದ ಕಾರಣ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ