ಆ್ಯಪ್ನಗರ

ಯೋಧನಿಗೆ ಶುಭಕೋರಿ ಬೀಳ್ಕೊಟ್ಟ ಕೈ ಪಡೆ

ಗುಳೇದಗುಡ್ಡ: ರಜೆ ಮೇಲೆ ಬಂದಿದ್ದ ಗುಳೇದಗುಡ್ಡದ ಯೋಧ ಅಂಬರೀಶ ವೀರಭದ್ರಪ್ಪ ಬಾಗಲಕೋಟ ಅವರಿಗೆ ಪಟ್ಟಣದ ಕಾಂಗ್ರೇಸ್‌ ಪಕ್ಷ ದ ಮುಖಂಡರು, ಕಾರ್ಯಕರ್ತರು ಸನ್ಮಾನಿಸಿ, ಯುದ್ಧದಲ್ಲಿ ವಿಜಯಿಯಾಗಿ ಬರುವಂತೆ ಶುಭ ಕೋರಿ ಬೀಳ್ಕೊಟ್ಟರು.

Vijaya Karnataka 3 Mar 2019, 5:00 am
ಗುಳೇದಗುಡ್ಡ: ರಜೆ ಮೇಲೆ ಬಂದಿದ್ದ ಗುಳೇದಗುಡ್ಡದ ಯೋಧ ಅಂಬರೀಶ ವೀರಭದ್ರಪ್ಪ ಬಾಗಲಕೋಟ ಅವರಿಗೆ ಪಟ್ಟಣದ ಕಾಂಗ್ರೇಸ್‌ ಪಕ್ಷ ದ ಮುಖಂಡರು, ಕಾರ್ಯಕರ್ತರು ಸನ್ಮಾನಿಸಿ, ಯುದ್ಧದಲ್ಲಿ ವಿಜಯಿಯಾಗಿ ಬರುವಂತೆ ಶುಭ ಕೋರಿ ಬೀಳ್ಕೊಟ್ಟರು.
Vijaya Karnataka Web the warrior had a handful of hands
ಯೋಧನಿಗೆ ಶುಭಕೋರಿ ಬೀಳ್ಕೊಟ್ಟ ಕೈ ಪಡೆ


ಮುಖಂಡ ಸಂಜಯ ಬರಗುಂಡಿ ಮಾತನಾಡಿ, ನಮ್ಮ ಸೈನಿಕರ ಬಲಿ ಪಡೆದ ಉಗ್ರರಿಗೆ ತಕ್ಕ ಉತ್ತರ ನೀಡಬೇಕು. ಈಗಾಗಲೇ ನಮ್ಮ ಸೈನ್ಯ ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಠ ಕಲಿಸಿದೆ. ಲಖನೌ ಮೂಲಕ ಜಮ್ಮುವಿಗೆ ತೆರಳಲು ಸಿದ್ಧನಾದ ನಮ್ಮ ಊರಿನ ಯೋಧ ಸೇನೆಗೆ ತೆರಳಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವಂತಾಗಲಿ. ನಿಜಕ್ಕೂ ಗುಳೇದಗುಡ್ಡ ಪಟ್ಟಣ ಹೆಮ್ಮೆ ಪಡುವಂತಹ ವಿಷಯವಿದು ಎಂದು ಹೇಳಿದರು.

ಯೋಧ ಅಂಬರೀಶ ವೀರಭದ್ರಪ್ಪ ಬಾಗಲಕೋಟ ಮಾತನಾಡಿ, ನನಗೆ 5ನೇ ತಾರೀಖಿನವರೆಗೆ ರಜೆಯಿದೆ. ಆದರೆ ಈಗಿನ ಪರಿಸ್ಥಿತಿ ನೋಡಿ ಇಲ್ಲಿ ಕೂರಲು ಆಗುತ್ತಿಲ್ಲ. ಹೀಗಾಗಿ ಬೇಗನೆ ಹೋಗುತ್ತಿದ್ದೇನೆ. ಲಖನೌಗೆ ಹೋಗುತ್ತೇನೆ ಅಲ್ಲಿಂದ ಅಧಿಕಾರಿಗಳು ಜಮ್ಮುವಿಗೆ ಕರೆದೊಯ್ಯುತ್ತಾರೆಂದು ಹೇಳಿದರು.

ಜುಗಲಕಿಶೋರ ಭಟ್ಟಡ, ಶಿವನಯ್ಯ ಮಳ್ಳಿಮಠ, ಗೋಪಾಲ ಭಟ್ಟಡ, ನೀಲಕಂಠಯ್ಯ ಸಿಂದಗಿಮಠ, ಪುರಸಭೆ ಸದಸ್ಯರಾದ ಅಂಬರೀಶ ಕವಡಿಮಟ್ಟಿ, ರಮೇಶ ಅಗಸಿಮನಿ, ಬಾಬು ಬೊಂಬಲೇಕರ, ರಾಜು ಸಂಗಮ, ಹನಮಂತ ಗೌಡರ, ವಿನೋದ ಗಾಜಿ, ವಿನಾಯಕ ಕಂಠಿ, ಪ್ರಕಾಶ ರೋಜಿ, ಸಾಗರ ಕೊಣ್ಣೂರ ಸೇರಿದಂತೆ ಇತರರು ಇದ್ದರು.

ಸನ್ಮಾನ : ಪಟ್ಟಣದ ಪರವಾಗಿ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಅದರಂತೆ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಚೇರಮನ್‌ ಅಶೋಕ ಹೆಗಡಿ, ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ತಾಲೂಕು ಅಧ್ಯಕ್ಷ ಸಿ.ಎಂ.ಜೋಶಿ, ಸುರೇಶ ಸಾರಂಗಿ, ಬರಗುಂಡಿ ಸನ್ಮಾನಿಸಿ, ಯುದ್ಧದಲ್ಲಿ ವಿಜಯಿಯಾಗಿ ಬರುವಂತೆ ಶುಭ ಕೋರಿ ಬಿಳ್ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ