ಮಹಾಲಿಂಗಪುರ : ನದಿ ನೀರು, ಹಳ್ಳದ ನೀರು ಖಾಲಿಯಾಗುತ್ತಿದ್ದಂತೆ ಜಲಚರಗಳು ನೆಲದಲ್ಲಿ ಪ್ರತ್ಯಕ್ಷ ವಾಗುತ್ತಿವೆ. ಗಿಡಮರಗಳು ಹಾಳಗುತ್ತಿದ್ದಂತೆ ಕಾಡು ಪ್ರಾಣಿಗಳು ನಾಡಿಗೆ ಕಾಲಿಡುತ್ತಿವೆ. ಇದು ಜನರಲ್ಲಿ ಆತಂಕ ಉಂಟು ಮಾಡುತ್ತಿದೆ. ಇತ್ತೀಚೆಗೆ ಪಟ್ಟಣದ ಚರಂಡಿ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ ವಾಗಿ ಭೀತಿಯುಂಟು ಮಾಡಿದ ಬೆನ್ನಲ್ಲೇ ತೋಳವನ್ನು ಹೋಲುವ ಅಪರೂಪದ ಕಾಡು ಪ್ರಾಣಿಯೊಂದು ಕಾಣಿಸಿಕೊಂಡು ಮತ್ತಷ್ಟು ಆತಂಕವುಂಟು ಮಾಡಿದೆ.
ಬೆಳಗಿನ ಜಾವ ಇಲ್ಲಿನ ವಿದ್ಯಾನಗರದಲ್ಲಿ ನಿಪ್ಪಾಣಿ-ಮುಧೋಳ ಹೆದ್ದಾರಿ ಪಕ್ಕದ ಹೋಟೇಲ್ನ ಶೆಡ್ವೊಂದರ ಸಂದಿಯಲ್ಲಿ ಕಪ್ಪು ಬಣ್ಣದ ಅಪರೂಪದ ಪ್ರಾಣಿ ಮಲಗಿದ್ದು ಕಂಡು ಬಂದಿದೆ. ಏನೋ ಸದ್ದು ಕೇಳಿಬಂದಾಗ ಹೆಗ್ಗಣ ಇರಬಹುದು ಎಂದು ಭಾವಿಸಿ ಸುಮ್ಮನಿದ್ದಾರೆ. ಪದೇ ಪದೇ ಗುರ್ರಾಯಿಸುವ ಶಬ್ದ ಕೇಳಿಬಂದಾಗ ಹತ್ತಿರ ಹೋಗಿ ನೋಡಲಾಗಿ ಅದು ಕೆಲವೊಮ್ಮೆ ಕಾಡು ಬೆಕ್ಕಿನಂತೆ, ನಾಯಿಯಂತೆ, ನರಿಯಂತೆ ಕಂಡಿದೆ, ಕೋರೆ ಹಲ್ಲುಗಳ ದರ್ಶನವಾದಾಗ ತೋಳದಂಥ ಮಾಂಸಾಹಾರಿ ಪ್ರಾಣಿ ಎಂಬುದು ಖಾತ್ರಿಯಾಗಿ ಎಲ್ಲರೂ ಭಯದಿಂದ ದೂರವೇ ಉಳಿದಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿ, ಅವರು ಬಂದ ನಂತರವೇ ಸ್ಥಳೀಯ ಯುವಕರು ಅದನ್ನು ಹಿಡಿಯುವ ಸಾಹಸ ಮಾಡಿದ್ದಾರೆ.
ಪಟ್ಟಣದ ಈಶಾನ್ಯ ದಿಕ್ಕಿಗೆ ಕೋಡಿಹಾಳದ ಕಡೆ ನಾವಲಗಿ ರಸ್ತೆಯಲ್ಲಿ ಅರಣ್ಯ ಪ್ರದೇಶವಿದ್ದು, ಆ ಕಡೆಯಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಇಂಥ ಪ್ರಾಣಿಗಳು ಕಾಡಿನಲ್ಲಿ ಗುಡ್ಡದ ಹೊಲದಲ್ಲಿ ಕಂಡು ಬರುತ್ತವಾದರೂ ಕಾಂಕ್ರೀಟ್ ಕಾಡಿನಂಥ ಪಟ್ಟಣದ ಮಕ್ಕಳು, ಮರಿ ವಾಸಿಸುವ, ಶಾಲೆ, ಆಸ್ಪತ್ರೆಗಳಿರುವ, ಜನವಸತಿ ಪ್ರದೇಶದಲ್ಲಿ ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಅಂತೂ ಮಧ್ಯಾಹ್ನ 12ಕ್ಕೆ ಅರಣ್ಯ ಸಿಬ್ಬಂದಿ ಬಂದು ಸ್ಥಳೀಯರ ಸಹಾಯದಿಂದ ಆ ಪ್ರಾಣಿಯನ್ನು ವಶಕ್ಕೆ ಪಡೆದ ನಂತರ ನಿರಾಳ ವಾತಾವರಣ ಕಂಡು ಬಂದಿತು. ಅರಣ್ಯ ಸಿಬ್ಬಂದಿ ಮುರಿಗೆಪ್ಪ ಹೊಸಟ್ಟಿ, ಸ್ಥಳೀಯರಾದ ವೀರಭದ್ರಪ್ಪ ಮುಗಳ್ಯಾಳ, ಕಿರಣ ದಲಾಲಕರ, ಸಂತೋಷ ತರಗೋಲ, ಶಿವಶಂಕರ ಕಡಬಲ್ಲವರ, ರಾಜು ಅಂಗಡಿ, ಮಹಾಂತೇಶ ಕಾಂಬ್ಳೆಕರ ಸೇರಿದಂತೆ ಹಲವರು ತೋಳವನ್ನು ಹಿಡಿಯುವಲ್ಲಿ ಸಹಾಯ ಮಾಡಿದರು.
ಬೆಳಗಿನ ಜಾವ ಇಲ್ಲಿನ ವಿದ್ಯಾನಗರದಲ್ಲಿ ನಿಪ್ಪಾಣಿ-ಮುಧೋಳ ಹೆದ್ದಾರಿ ಪಕ್ಕದ ಹೋಟೇಲ್ನ ಶೆಡ್ವೊಂದರ ಸಂದಿಯಲ್ಲಿ ಕಪ್ಪು ಬಣ್ಣದ ಅಪರೂಪದ ಪ್ರಾಣಿ ಮಲಗಿದ್ದು ಕಂಡು ಬಂದಿದೆ. ಏನೋ ಸದ್ದು ಕೇಳಿಬಂದಾಗ ಹೆಗ್ಗಣ ಇರಬಹುದು ಎಂದು ಭಾವಿಸಿ ಸುಮ್ಮನಿದ್ದಾರೆ. ಪದೇ ಪದೇ ಗುರ್ರಾಯಿಸುವ ಶಬ್ದ ಕೇಳಿಬಂದಾಗ ಹತ್ತಿರ ಹೋಗಿ ನೋಡಲಾಗಿ ಅದು ಕೆಲವೊಮ್ಮೆ ಕಾಡು ಬೆಕ್ಕಿನಂತೆ, ನಾಯಿಯಂತೆ, ನರಿಯಂತೆ ಕಂಡಿದೆ, ಕೋರೆ ಹಲ್ಲುಗಳ ದರ್ಶನವಾದಾಗ ತೋಳದಂಥ ಮಾಂಸಾಹಾರಿ ಪ್ರಾಣಿ ಎಂಬುದು ಖಾತ್ರಿಯಾಗಿ ಎಲ್ಲರೂ ಭಯದಿಂದ ದೂರವೇ ಉಳಿದಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿ, ಅವರು ಬಂದ ನಂತರವೇ ಸ್ಥಳೀಯ ಯುವಕರು ಅದನ್ನು ಹಿಡಿಯುವ ಸಾಹಸ ಮಾಡಿದ್ದಾರೆ.
ಪಟ್ಟಣದ ಈಶಾನ್ಯ ದಿಕ್ಕಿಗೆ ಕೋಡಿಹಾಳದ ಕಡೆ ನಾವಲಗಿ ರಸ್ತೆಯಲ್ಲಿ ಅರಣ್ಯ ಪ್ರದೇಶವಿದ್ದು, ಆ ಕಡೆಯಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಇಂಥ ಪ್ರಾಣಿಗಳು ಕಾಡಿನಲ್ಲಿ ಗುಡ್ಡದ ಹೊಲದಲ್ಲಿ ಕಂಡು ಬರುತ್ತವಾದರೂ ಕಾಂಕ್ರೀಟ್ ಕಾಡಿನಂಥ ಪಟ್ಟಣದ ಮಕ್ಕಳು, ಮರಿ ವಾಸಿಸುವ, ಶಾಲೆ, ಆಸ್ಪತ್ರೆಗಳಿರುವ, ಜನವಸತಿ ಪ್ರದೇಶದಲ್ಲಿ ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಅಂತೂ ಮಧ್ಯಾಹ್ನ 12ಕ್ಕೆ ಅರಣ್ಯ ಸಿಬ್ಬಂದಿ ಬಂದು ಸ್ಥಳೀಯರ ಸಹಾಯದಿಂದ ಆ ಪ್ರಾಣಿಯನ್ನು ವಶಕ್ಕೆ ಪಡೆದ ನಂತರ ನಿರಾಳ ವಾತಾವರಣ ಕಂಡು ಬಂದಿತು. ಅರಣ್ಯ ಸಿಬ್ಬಂದಿ ಮುರಿಗೆಪ್ಪ ಹೊಸಟ್ಟಿ, ಸ್ಥಳೀಯರಾದ ವೀರಭದ್ರಪ್ಪ ಮುಗಳ್ಯಾಳ, ಕಿರಣ ದಲಾಲಕರ, ಸಂತೋಷ ತರಗೋಲ, ಶಿವಶಂಕರ ಕಡಬಲ್ಲವರ, ರಾಜು ಅಂಗಡಿ, ಮಹಾಂತೇಶ ಕಾಂಬ್ಳೆಕರ ಸೇರಿದಂತೆ ಹಲವರು ತೋಳವನ್ನು ಹಿಡಿಯುವಲ್ಲಿ ಸಹಾಯ ಮಾಡಿದರು.