ಆ್ಯಪ್ನಗರ

ಹಾಡಹಗಲೇ ಮನೆ ಕಳ್ಳತನ: ಕೈ ಚಳಕ ತೋರಿಸಿ ಪರಾರಿ

ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿ ಅಲಮಾರಿ (ಬೀರು) ನಲ್ಲಿದ್ದ ಸುಮಾರು 150 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ, 50 ಸಾವಿರ ನಗದು ಹಣ ದೋಚಿದ್ದಾರೆಂದು ಮನೆಯವರು ತಿಳಿಸಿದ್ದು, ಘಟನೆ ನಡೆದ ಬಗ್ಗೆ ಸುದ್ದಿ ಹರಡಿದಾಕ್ಷಣ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು.

Vijaya Karnataka 13 Mar 2019, 10:58 pm
ಹುನಗುಂದ: ನಗರದ ಆಜಾದ್ ನಗರ ಸಮೀಪ ಮಹಡಿ ಮನೆಯೊಂದು ಹಾಡು ಹಗಲೆ ದರೋಡೆಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಕಳ್ಳರು ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿದ್ದಾರೆ .
Vijaya Karnataka Web theft


ಮಧ್ಯಾಹ್ನ ಸಮಯದಲ್ಲಿ ಕಳ್ಳತನವಾಗಿದೆ ಎಂದು ಮನೆ ಮಾಲೀಕ ಡಾ.ವಿಜಯಕುಮಾರ ಪತ್ತಾರ ತಿಳಿಸಿದ್ದಾರೆ. ಇವರು ಲಿಂಗಸೂರ ತಾಲೂಕಿನ ಸಜ್ಜಲಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪತ್ನಿ ಮಕ್ಕಳಿಗೆ ಊಟದ ಡಬ್ಬಿ ಕೊಡಲು ಮಧ್ಯಾಹ್ನ ಮನೆಗೆ ಬೀಗ ಹಾಕಿ ಶಾಲೆಗೆ ಹೋದಾಗ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿ ಅಲಮಾರಿ (ಬೀರು) ನಲ್ಲಿದ್ದ ಸುಮಾರು 150 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ, 50 ಸಾವಿರ ನಗದು ಹಣ ದೋಚಿದ್ದಾರೆಂದು ಮನೆಯವರು ತಿಳಿಸಿದ್ದು, ಘಟನೆ ನಡೆದ ಬಗ್ಗೆ ಸುದ್ದಿ ಹರಡಿದಾಕ್ಷಣ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು.

ಘಟನಾ ಸ್ಥಳಕ್ಕೆ ಸ್ಥಳಕ್ಕೆ ಪಿಎಸ್‌ಐ ಪುಂಡಲಿಕ ಪಟಾತ್ತರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆಗಾಗಿ ಬಾಗಲಕೋಟದಿಂದ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಶುರುಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ