ಆ್ಯಪ್ನಗರ

ಬಸವಳಿದ ಜನರಿಗೆ ಕಳ್ಳರ ಕಾಟ

ಡೋಮನಾಳ, ಬೋಡನಾಯಕದಿನ್ನಿ ಮಂಕಣಿ, ಜಡ್ರಾಮಕುಂಟಿ, ಅಚನೂರ, ಹಿರೇಮ್ಯಾಗೇರಿ, ದೇವಲಾಪೂರ ಗ್ರಾಮಗಳಲ್ಲಿ ಪ್ರಯತ್ನ ನಡೆಸಿದ್ದು ಅಲ್ಲದೇ ಕೆಲ ಮನೆಗಳಲ್ಲಿನ ಹಣ ದೋಚಿದ ಘಟನೆಗಳು ನಡೆದಿವೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Vijaya Karnataka 3 May 2019, 11:04 pm
ಬೇವೂರ: ತಾಪಮಾನ ಏರಿಕೆಯಿಂದ ಬಸವಳಿದ ಜನ ವಿಪರೀತ ಸೆಕೆಯಿಂದ ಮನೆಯಲ್ಲಿ ನಿದ್ರಿಸಲೂ ಆಗದೇ ಬೀಗ ಹಾಕಿ ಮನೆ ಮೇಲೆ ತಂಗಾಳಿಗೆ ನಿದ್ರೆಗೆ ಹೋದರೆ ಕಳ್ಳರು ಮನೆ ಕೀಲಿ ಮುರಿದು ಕಳ್ಳತನ ಮಾಡುತ್ತಿರುವ ಘಟನೆಗಳು ಬೇವೂರ ಭಾಗದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿರುವುದು ಆತಂಕ ಮೂಡಿಸಿವೆ.
Vijaya Karnataka Web theft


ಹೌದು ..! ಸಮೀಪದ ಡೋಮನಾಳ, ಬೋಡನಾಯಕದಿನ್ನಿ ಮಂಕಣಿ, ಜಡ್ರಾಮಕುಂಟಿ, ಅಚನೂರ, ಹಿರೇಮ್ಯಾಗೇರಿ, ದೇವಲಾಪೂರ ಗ್ರಾಮಗಳಲ್ಲಿ ಪ್ರಯತ್ನ ನಡೆಸಿದ್ದು ಅಲ್ಲದೇ ಕೆಲ ಮನೆಗಳಲ್ಲಿನ ಹಣ ದೋಚಿದ ಘಟನೆಗಳು ನಡೆದಿವೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ ಕಳ್ಳರ ಹಾವಳಿಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಡೋಮನಾಳ ಗ್ರಾಮದಲ್ಲಿ ಶಿವಪ್ಪ ಅವರ ಮನೆ ಸದಸ್ಯರು ಮನೆಗೆ ಬೀಗ ಹಾಕಿ ಮನೆ ಟೆರೆಸ್‌ ಮೇಲೆ ಮಲಗಿದ್ದಾರೆ. ಸುಮಾರು 3 ಗಂಟೆ ಸುಮಾರಿಗೆ ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮನೆಯನ್ನು ತಡಕಾಡಿದ್ದಾನೆ. ಪ್ಯಾಂಟ್‌ನಲ್ಲಿದ್ದ 6,500 ರೂ.ದೋಚಿದ್ದಾನೆ. ತಿಜೋರಿ ಬೀಗ ಹುಡುಕಿದ್ದಾರೆ. ಈ ಸಂದರ್ಭಧಲ್ಲಿ ಸಂಶಯದಿಂದ ಮನೆ ಮಾಲೀಕರು ಎದ್ದು ಕೆಳಗೆ ಇಳಿದು ಬರುತ್ತಿದ್ದಂತೆ ಬಟ್ಟೆಯ ಬ್ಯಾಗ ಹಿಡಿದುಕೊಂಡು ಓಡಿ ಹೋದ ಕಳ್ಳನನ್ನು ಬೆನ್ನಟ್ಟಿದ್ದಾರೆ. ಬ್ಯಾಗ್‌ ಎಸೆದು ಹೋಗಿದ್ದಾನೆ ಎಂದು ಮನೆ ಮಾಲೀಕ ಶಿವಪ್ಪ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಕೆಲ ಗ್ರಾಮಗಳಲ್ಲಿ ಕಳ್ಳರು ತಮ್ಮ ಚಾಣಾಕ್ಷತೆ ಮೆರಿದಿದ್ದು ಇಂತಹ ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಹೆಚ್ಚುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ