ಆ್ಯಪ್ನಗರ

ಇಳಿ ವಯಸ್ಸಿನಲ್ಲಿ ಕಾರಜೋಳ ಮಾತಿನಲ್ಲಿ ಏರುಪೇರು : ಕಾರಜೋಳ ಹೇಳಿಕೆಗೆ ತಿಮ್ಮಾಪೂರ ವ್ಯಂಗ್ಯ

ಬಾಗಲಕೋಟ : ಹಿರಿಯರು ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಆದರೆ ಕಾರಜೋಳರಿಗೆ ಮಾತಿನಲ್ಲಿ ಏರುಪೇರಾಗುತ್ತಿದ್ದು ತಪ್ಪು ಮಾಡದ ನಾನು ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಚಿವ ತಿಮ್ಮಾಪೂರ ತಿಳಿಸಿದರು.

Vijaya Karnataka 3 Jul 2019, 5:00 am
ಬಾಗಲಕೋಟ : ಹಿರಿಯರು ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಆದರೆ ಕಾರಜೋಳರಿಗೆ ಮಾತಿನಲ್ಲಿ ಏರುಪೇರಾಗುತ್ತಿದ್ದು ತಪ್ಪು ಮಾಡದ ನಾನು ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಚಿವ ತಿಮ್ಮಾಪೂರ ತಿಳಿಸಿದರು.
Vijaya Karnataka Web there is no need for intelligence timmapur
ಇಳಿ ವಯಸ್ಸಿನಲ್ಲಿ ಕಾರಜೋಳ ಮಾತಿನಲ್ಲಿ ಏರುಪೇರು : ಕಾರಜೋಳ ಹೇಳಿಕೆಗೆ ತಿಮ್ಮಾಪೂರ ವ್ಯಂಗ್ಯ


ಇತ್ತೀಚೆಗೆ ಶಾಸಕ ಗೋವಿಂದ ಕಾರಜೋಳ, ತಿಮ್ಮಾಪೂರ ಒಬ್ಬ ಅಪ್ರಭುದ್ಧ ರಾಜಕಾರಣಿ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಯೋವೃದ್ಧತೆಯಿಂದಾಗಿ ಕಾರಜೋಳರಿಗೆ ಮಾತಿನಲ್ಲಿ ಏರುಪೇರಾಗುತ್ತಿದೆ ಎಂದು ತಿಮ್ಮಾಪೂರ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳ ಕ್ಷೇತ್ರದ ಅಭಿವೃದ್ಧಿಗಾಗಿ ಬಹಿರಂಗ ಚರ್ಚೆಗೆ ನಾನು ಯಾವಾಗಲೂ ಸಿದ್ಧನಿದ್ದೇನೆ. ಇಲ್ಲಿನ ಅಭಿವೃದ್ಧಿ ಕುರಿತು ವಿಜಯಪುರದವರ ಅನುಮತಿ ಬೇಕಿಲ್ಲ. ಬಹಿರಂಗ ಚರ್ಚೆ ಎನ್ನುವುದು ಹಳೆ ವಿಚಾರ. ಇದು ಮುಧೋಳದಲ್ಲಿ ಜನಜನಿತವಾಗಿದೆ. ಈ ಹಿಂದೆ ಬಹಿರಂಗ ಚರ್ಚೆಗೆ ಕರೆದವರು ತಾವೇ ಬಾರದೆ ನುಣುಚಿಕೊಂಡಿದ್ದಾರೆ. ಕಾರಜೋಳ ಅವರು ಅಭಿವೃದ್ಧಿಯಿಂದ ಕ್ಷೇತ್ರ ಗೆದ್ದಿಲ್ಲ. ಕುತಂತ್ರ ರಾಜಕಾರಣದಿಂದ ಚುನಾವಣೆ ಗೆದ್ದಿದ್ದಾರೆ. ಮುಧೋಳದಲ್ಲಿ ಅಭಿವೃದ್ಧಿ ಮಾಡಿದವನು ನಾನು ಎಂದು ಹೇಳಿದರು.

ಈ ಹಿಂದೆ ಕೃಷ್ಣಾ ನದಿ ನೀರನ್ನು ವಿಜಯಪುರಕ್ಕೆ ಹರಿಬಿಟ್ಟಾಗ ಅಲ್ಲಿನ ಶೇ.5ರಷ್ಟಾದರೂ ನೀರನ್ನು ಮುಧೋಳಕ್ಕೆ ತಂದಿದ್ದರೆ ಇಲ್ಲಿನ ಜನ ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ಬೈಪಾಸ್‌ ರಸ್ತೆಗೆ ಅರ್ಜಿ ನೀಡಿದರೆ ಸಾಧ್ಯವಾಗುವುದಿಲ್ಲ. ಇಂತಹ ಸಾವಿರಾರು ಅರ್ಜಿಗಳು ಸರಕಾರಕ್ಕೆ ಸಲ್ಲಿಕೆ ಆಗುತ್ತವೆ. ಆದರೆ ಮಂತ್ರಿಯಾಗಿ ಅದನ್ನು ಕ್ಯಾಬಿನೆಟ್‌ ಮೂಲಕ ಅನುಮತಿ ಪಡೆದುಕೊಂಡಿದ್ದೇನೆ. ಅರ್ಜಿ ಕೊಡುವುದು ಮುಖ್ಯವಲ್ಲ. ಕೆಲಸ ಮಾಡುವುದು ಮುಖ್ಯ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡರು.

ಕಾರಜೋಳರಿಗೆ ಕೆಲ ಕಾಂಗ್ರೆಸ್ಸಿಗರ ಮೇಲೆ ಪ್ರೀತಿ ಹೆಚ್ಚಾಗಿ ಅವರನ್ನು ಹೊಗಳುತ್ತಿದ್ದಾರೆ. ವಿಧಾನ ಪರಿಷತ್‌ ಸದಸ್ಯನಾದ ನನಗೆ ಶಿಷ್ಟಾಚಾರದಂತೆ ಅಧಿಕಾರಿಗಳು ಆಹ್ವಾನಿಸುತ್ತಾರೆ. ಅದನ್ನು ಕೇಳಲು ಇವರಾರು? ಎಂದು ಪ್ರಶ್ನಿಸಿ ಕೆರೆಗಳ ಒತ್ತುವರಿ ಮಾಡಿರುವ ಶಾಸಕರ ಆಪ್ತರೊಬ್ಬರು ಅಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಅದನ್ನು ಮೊದಲು ತೆರವುಗೊಳಿಸಲಿ ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ