ಆ್ಯಪ್ನಗರ

ಉಗ್ರರ ಮೇಲೆ ದಾಳಿ ಮಾಡಬಾರದಿತ್ತು ಎಂದ ಸಚಿವ ಮನಗೂಳಿ

'ಇದು ಆಗಬಾರದಿತ್ತು, ಆಗಿದೆ. ಯಾರ ಮೇಲೂ ಬಾಂಬ್ ಹಾಕಬಾರದಿತ್ತು. ಮಾನವೀಯ ದೃಷ್ಟಿಯಿಂದ ಉಗ್ರರೇ ಇರಲಿ, ಯೋಧರೇ ಆಗಲಿ ಬಾಂಬ್ ದಾಳಿ ನಡೆಸಬಾರದಿತ್ತು' ಎಂದು ಸಚಿವ ಮನಗೂಳಿ ಹೇಳಿಕೆ ನೀಡಿದ್ದಾರೆ.

Vijaya Karnataka Web 27 Feb 2019, 12:44 pm
ಬಾಗಲಕೋಟ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಉಗ್ರರ ಪರ ಮೃದು ಧೋರಣೆ ತಾಳುವ ಮೂಲಕ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

'ಇದು ಆಗಬಾರದಿತ್ತು, ಆಗಿದೆ. ಯಾರ ಮೇಲೂ ಬಾಂಬ್ ಹಾಕಬಾರದಿತ್ತು. ಮಾನವೀಯ ದೃಷ್ಟಿಯಿಂದ ಉಗ್ರರೇ ಇರಲಿ, ಯೋಧರೇ ಆಗಲಿ ಬಾಂಬ್ ದಾಳಿ ನಡೆಸಬಾರದಿತ್ತು' ಎಂದು ಸಚಿವ ಮನಗೂಳಿ ಹೇಳಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರನ್ನು ಪಾಕ್ ಬೆಂಬಲಿತ ಜೈಷೆ ಮೊಹಮ್ಮದ್ ಉಗ್ರಗಾಮಿಗಳು ಹತ್ಯೆ ಮಾಡಿರುವುದರ ವಿರುದ್ಧ ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಮಂಗಳವಾರ ನಸುಕಿನ ವೇಳೆ ಪಾಕಿಸ್ತಾನದ ಜೈಷೆ ಮೊಹಮ್ಮದ್ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿ ಅವುಗಳನ್ನು ಧ್ವಂಸಗೊಳಿಸಿದೆ. ಈ ದಿಟ್ಟ ಕಾರ್ಯಾಚರಣೆಯನ್ನು ದೇಶವಿಡೀ ಕೊಂಡಾಡುತ್ತಿದ್ದರೆ ರಾಜ್ಯದ ಸಚಿವರ ಹೇಳಿಕೆ ಅಚ್ಚರಿ ಮೂಡಿಸಿದೆ.

ವೀಡಿಯೋ: ಉಗ್ರರ ಮೇಲೆ ದಾಳಿ ಮಾಡಬಾರದಿತ್ತು ಎಂದ ಸಚಿವ ಮನಗೂಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ