ಆ್ಯಪ್ನಗರ

ಪಾಕ್‌ ಪರ ಪೋಸ್ಟ್‌ ಮಾಡುವವರಿಗೆ ಗುಂಡು ಹೊಡಿಬೇಕು: ಈಶ್ವರಪ್ಪ

42 ಯೋಧರು ಹುತಾತ್ಮರಾದಾಗ ಇಡೀ ದೇಶ ಶೋಕದಲ್ಲಿ ಮುಳುಗಿದೆ. ಯೋಧರ ಹತ್ಯೆಗೆ ಕಾರಣವಾದ ಉಗ್ರನನ್ನು ಸದೆಬಡಿಸಲಾಗಿದೆ. ಇಡೀ ದೇಶ ಸಂತೋಷ ಪಟ್ಟಿದೆ. ದೇಶಭಕ್ತರು, ದೇಶದ್ರೋಹಿಗಳಿಗೆ ಯಾರು ಬೆಂಬಲ ಕೊಡ್ತಾರೋ ಅವರನ್ನು ದೇಶದ ಜನ ಕ್ಷಮಿಸೋಲ್ಲ.

Vijaya Karnataka Web 19 Feb 2019, 4:07 pm
ಬಾಗಲಕೋಟೆ: ಸಾಮಾಜಿಕ ತಾಣಗಳಲ್ಲಿ ಪಾಕಿಸ್ತಾನದ ಪರ ಪೋಸ್ಟ್ ಮಾಡುತ್ತಿರುವವರಿಗೆ ಗುಂಡು ಹೊಡಿಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
Vijaya Karnataka Web ಕೆಎಸ್‌ ಈಶ್ವರಪ್ಪ
ಕೆಎಸ್‌ ಈಶ್ವರಪ್ಪ


ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ದ್ರೋಹಿ ರಾಷ್ಟ್ರ. ಉಗ್ರರಿಗೆ ಬೆಂಬಲ ನೀಡುವ ದೇಶವಾಗಿದೆ. ಹುತಾತ್ಮ ಯೋಧರೊಂದಿಗೆ ನಾವಿದ್ದೇವೆ. ಇದರಲ್ಲಿ ರಾಜಕಾರಣ ಬಳಸಕ್ಕೆ ಇಷ್ಟ ಪಡೋಲ್ಲ. ಕೆಲವು ದೇಶದ್ರೋಹಿಗಳು ಈ ರೀತಿ ಮಾಡ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ದೇಶದ ರಾಷ್ಟ್ರಭಕ್ತ ಕ್ಷಮಿಸೋಲ್ಲ ಎಂದರು.

42 ಯೋಧರು ಹುತಾತ್ಮರಾದಾಗ ಇಡೀ ದೇಶ ಶೋಕದಲ್ಲಿ ಮುಳುಗಿದೆ. ಯೋಧರ ಹತ್ಯೆಗೆ ಕಾರಣವಾದ ಉಗ್ರನನ್ನು ಸದೆಬಡಿಸಲಾಗಿದೆ. ಇಡೀ ದೇಶ ಸಂತೋಷ ಪಟ್ಟಿದೆ. ದೇಶಭಕ್ತರು, ದೇಶದ್ರೋಹಿಗಳು ಯಾವ ಪಕ್ಷದವರೆಂದು ಇಲ್ಲಿ ತರೋದಕ್ಕೆ ಇಷ್ಟ ಪಡೋಲ್ಲ. ದೇಶದ್ರೋಹಿಗಳಿಗೆ ಯಾರು ಬೆಂಬಲ ಕೊಡ್ತಾರೋ ಅವರನ್ನು ದೇಶದ ಜನ ಕ್ಷಮಿಸೋಲ್ಲ ಎಂದರು.

ಸಿ ಟಿ ರವಿ ಕಾರು ಡಿಕ್ಕಿ ಯುವಕರಿಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯಿಲ್ಲ, ಇನ್ನು ಮಾಹಿತಿ ಪಡೆಯುತ್ತೇನೆ‌ ಎಂದರು.

ದಿನೇಶ್ ಗುಂಡೂರಾವ್ ಅವರಿಗೆ ಏನ್ ಮಾತನಾಡಬೇಕು ಅನ್ನೋ ಕಲ್ಪನೆ ಅವರಿಗಿಲ್ಲ. ಪ್ರತಿಯೊಂದರಲ್ಲಿ ರಾಜಕೀಯ ಬೆರಿಸೋದು ಸರಿಯಲ್ಲ. ಹಿಂದೆ ಈ ದೇಶದ ಮೇಲೆ ಪಾಕಿಸ್ತಾನ ಯುದ್ದ ಮಾಡಿದಾಗ ವಿರೋಧ ಪಕ್ಷದಲ್ಲಿ ವಾಜಪೇಯಿ ಇದ್ದರು. ಇಂದಿರಾಗಾಂಧಿ ಪ್ರಧಾನಿಯಾಗಿದ್ದರೂ ಅವರನ್ನು ದುರ್ಗಿ ಎಂದು ಶ್ಲಾಘಿಸಿದ್ದರು ಎಂದು ಈಶ್ವರಪ್ಪ ತಿಳಿಸಿದರು.

ಶತ್ರು ಸಂಹಾರ ಮಾಡಿ ಇಡೀ ದೇಶ, ಬಿಜೆಪಿ ನಿಮ್ಮ ಜೊತೆ ಇದೆ ಎಂದು ಆಗ ವಿಪಕ್ಷ ನಾಯಕ ವಾಜಪೇಯಿ ಹೇಳಿದ್ದರು. ದೇಶ ಅಂತಾ ಬಂದಾಗ ಬಿಜೆಪಿ ರಾಜಕೀಯ ಮಾಡಲ್ಲ. ಆಗ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಹುಡಕಲಿಲ್ಲ. ಇದು ಬಿಜೆಪಿಯ ದೇಶಭಕ್ತಿ ಎಂದು ಅವರು ಸಮರ್ಥಿಸಿಕೊಂಡರು.

ಏನ್ ಮಾಡ್ತೀರಿ ದಿನೇಶ್ ಗುಂಡೂರಾವ್ ಎಳಸು, ಏನು ಮಾಡ್ಬೇಕು ಏನ್ ಬಿಡ್ಬೇಕೆನ್ನೋದು ಕಲ್ಪನೆ ಇಲ್ಲ. ಎಲ್ಲದರಲ್ಲೂ ರಾಜಕೀಯ ಹುಡುಕಿಕೊಂಡು ಹೋಗ್ತಿದ್ದಾರೆ. ಇದು ಒಳ್ಳೆಯದಲ್ಲ. ಇದನ್ನು ದೇಶದ ಜನ ಗಮನಿಸುತ್ತಿದ್ದಾರೆ ಈಶ್ವರಪ್ಪ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ