ಆ್ಯಪ್ನಗರ

ಬಾಗಲಕೋಟೆಯಲ್ಲಿ ಮಳೆಯ ರೌದ್ರತೆ : ಸಾವಿರಾರು ಕೋಳಿಗಳು ಜಲಸಮಾಧಿ

ಭಾನುವಾರ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಹೊರವಲಯದ ಮಂಟೂರ ರಸ್ತೆ ಬಳಿ ಪೌಲ್ಟ್ರಿ ಫಾರಂಗೆ ಪ್ರವಾಹದ ನೀರು ನುಗ್ಗಿ ಸಾವಿರಾರು ಕೋಳಿಗಳ ಮಾರಣಹೋಮ ನಡೆದಿದೆ.

Vijaya Karnataka Web 21 Oct 2019, 2:19 pm
ಬಾಗಲಕೋಟೆ: ಭಾನುವಾರ ಉತ್ತರ ಕರ್ನಾಟಕದ ಬಹುತೇಕ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಪೌಲ್ಟ್ರಿ ಫಾರಂಗೆ ಪ್ರವಾಹದ ನೀರು ನುಗ್ಗಿ ಸಾವಿರಾರು ಕೋಳಿಗಳ ಮಾರಣಹೋಮ ನಡೆದಿದೆ.
Vijaya Karnataka Web chicken dead in flood


ಜಿಲ್ಲೆಯ ಮುಧೋಳ ಪಟ್ಟಣದ ಹೊರವಲಯದ ಮಂಟೂರ ರಸ್ತೆ ಬಳಿ ಇರುವ ಪೌಲ್ಟ್ರಿ ಫಾರಂನಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಮಳೆಯಿಂದ ಉಂಟಾದ ಪ್ರವಾಹದ ನೀರು ಕೋಳಿ ಫಾರಂಗೆ ನುಗ್ಗಿ ಸಾವಿರಾರು ಕೋಲಿಗಳು ಜಲಸಮಾಧಿಯಾಗಿವೆ.

ಮಳೆ ಆರ್ಭಟಕ್ಕೆ ಮತ್ತೆ ಮುಳುಗಿದ ಬೆಳಗಾವಿ : ಊರಿಂದೂರಿಗೆ ಗುಳೆ ಹೊರಟ ಜನ

ಕೋಳೀ ಫಾರಂ ಅನ್ನು ಮಳೆ ನೀರು ಹರಿಯು ಹಳ್ಳಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿತ್ತು. ಭಾನುವಾರ ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಹಳ್ಳದ ನೀರಿನ ಮಟ್ಟ ವಿಪರೀತ ಹೆಚ್ಚಾಗಿತ್ತು. ತಡರಾತ್ರಿ ಕೋಳಿಫಾರಂಗೆ ನೀರು ನುಗ್ಗಿದೆ. ಅಲ್ಲಿದ್ದ ಸಾವಿರಕ್ಕೂ ಅಧಿಕ ಕೋಳಿಗಳ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿವೆ. ನೀರಿನ ಮಟ್ಟ ಇಳಿದ ನಂತರ ಫಾರಂ ನಲ್ಲಿ ಎಲ್ಲ ಕೋಳಿಗಳೂ ಸತ್ತು ಬಿದ್ದಿವೆ.

ಮತ್ತೆ ಮಳೆಯ ರುದ್ರನರ್ತನಕ್ಕೆ ನಲುಗಿದ ಕರ್ನಾಟಕ, ನೆರೆ ಭೀತಿಯಲ್ಲಿ ಜನತೆ

ಮತ್ತೊಂದೆಡೆ ಕೋಳಿಗಳ ಆಹಾರಕ್ಕಾಗಿ ತಂದಿಟ್ಟಿದ್ದ 22 ಟನ್ ಆಹಾರವೂ (ಪೌಲ್ಟ್ರಿ ಫೀಡ್ಸ್‌ ) ಕೂಡ ನೀರುಪಾಲಾಗಿದೆ. ಹನುಮಂತ ಅಂಬಿಗೇರ ಎಂಬುವವರಿಗೆ ಸೇರಿದ ಕೋಳಿಫಾರಂ ಇದಾಗಿದ್ದು, ಅಪಾರ ನಷ್ಟದಿಂದ ಆತಂಕದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ