ಆ್ಯಪ್ನಗರ

ಮೂವರು ಅಂತಾರಾಜ್ಯ ಕಳ್ಳರ ಬಂಧನ

ಮುಧೋಳ(ಬಾಗಲಕೋಟ) : ರಾಜ್ಯ ಹಾಗೂ ಅಂತಾರಾಜ್ಯದಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Vijaya Karnataka 15 Jun 2019, 5:00 am
ಮುಧೋಳ(ಬಾಗಲಕೋಟ) : ರಾಜ್ಯ ಹಾಗೂ ಅಂತಾರಾಜ್ಯದಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
Vijaya Karnataka Web three detained by interstate thieves
ಮೂವರು ಅಂತಾರಾಜ್ಯ ಕಳ್ಳರ ಬಂಧನ


ಆರೋಪಿಗಳಿಂದ 4 ಲಕ್ಷ ಕ್ಕೂ ಅಧಿಕ ಮೌಲ್ಯದ ಚಿನ್ನ, ಬೈಕ್‌, ಮೊಬೈಲ್‌ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರಾಮಾಪುರ ತಾಂಡಾದ ಮಂಜುನಾಥ ಸೋಮಲೆಪ್ಪ ಲಮಾಣಿ, ಸುನೀಲ ಮಲ್ಲೇಶ ರಜಪೂತ(ಲಮಾಣಿ),(ಹಾಲಿ ವಸತಿ ಮುಧೋಳದ ಜಯನಗರ), ತುಕಾರಾಮ, ಶಂಕರ ರಜಪೂತ(ಲಮಾಣಿ) ಬಂಧಿತ ಕಳ್ಳರು.

ಆರೋಪಿಗಳಿಂದ 1ಲಕ್ಷ ರೂ. ಮೌಲ್ಯದ ಚಿನ್ನ, ಒಂದು ಲಕ್ಷ ಮೌಲ್ಯದ ಎರಡು ಬೈಕ್‌, 1.5ಲಕ್ಷ ರೂ. ಮೌಲ್ಯದ 12 ಮೊಬೈಲ್‌ಗಳು ಹಾಗೂ 67,700 ರೂ. ನಗದು ಸಹಿತ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋವಾ, ಬಾಗಲಕೋಟ ಜಿಲ್ಲೆಯ ಮಳಲಿ ಹಾಗೂ ಮುಧೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಳ್ಳತನ ಮಾಡಿರುವದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಡಿವೈಎಸ್ಪಿ ಆರ್‌.ಕೆ.ಪಾಟೀಲ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಬಿ.ಬನ್ನೆ ಹಾಗೂ ಮುಧೋಳ ಪಿಎಸೈ ನಾಗನಗೌಡ ಕಟ್ಟಿಮನಿಗೌಡ್ರ ಹಾಗೂ ಸಿಬ್ಬಂದಿ ಆರ್‌.ಬಿ.ಕಟಗೇರಿ, ಎಸ್‌.ಬಿ.ಹನಗಂಡಿ, ಎಂ.ಎನ್‌.ಮಾಂಗ, ಎಸ್‌.ಎಂ.ಬಡಿಗೇರ, ಎಚ್‌.ಕೆ.ಇಂಡಿಕರ, ಎಂ.ಎಂ.ಸಾಳಗುಂದಿ, ಎ.ಡಿ.ಮಾದರ, ಎಂ.ಆರ್‌.ಹೂಗಾರ, ಎಂ.ಎನ್‌.ಪೋಳಿ, ಡಿ.ಎಂ.ಅತ್ರಾವತ, ಕಾಡು ಸನಹಟ್ಟಿ, ಐ.ಎಂ.ಪೆಂಡಾರಿ, ಟಿ.ಎಸ್‌.ಹಿರಲಕ್ಕಿ, ಪಿ.ಎಂ.ಅಗಸರ ಕಳ್ಳರನ್ನು ಬಂಧಿಸಿದ್ದಾರೆ.

ಎಸ್ಪಿ ಅವರು, ಅಧಿಕಾರಿ ಹಾಗೂ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ