ಆ್ಯಪ್ನಗರ

ಮೂರು ಕೊಲೆ, ಬೆಚ್ಚಿಬಿದ್ದ ಜಿಲ್ಲೆ

ಬಾಗಲಕೋಟೆ : ಜಿಲ್ಲೆಯಲ್ಲಿಗುರುವಾರ ಒಂದೇ ದಿನ ಮೂರು ಕೊಲೆಯಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

Vijaya Karnataka 20 Dec 2019, 5:00 am
ಬಾಗಲಕೋಟೆ : ಜಿಲ್ಲೆಯಲ್ಲಿಗುರುವಾರ ಒಂದೇ ದಿನ ಮೂರು ಕೊಲೆಯಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
Vijaya Karnataka Web three murdered startled district
ಮೂರು ಕೊಲೆ, ಬೆಚ್ಚಿಬಿದ್ದ ಜಿಲ್ಲೆ


ಬಾಗಲಕೋಟೆ ನಗರ ಪೊಲೀಸ್‌ ಠಾಣೆ ವ್ಯಾಪ್ತಿ, ಕಲಾದಗಿ ಠಾಣೆ ಹಾಗೂ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿಮೂವರು ಪುರುಷರು ಕೊಲೆಗೀಡಾಗಿದ್ದಾರೆ. ಎರಡು ಪ್ರಕರಣಗಳಲ್ಲಿಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಇನ್ನೊಂದು ಪ್ರಕರಣದಲ್ಲಿಕ್ಷುಲ್ಲಕ ಜಗಳ ಕೊಲೆಯಲ್ಲಿಅಂತ್ಯವಾಗಿದೆ.

ಬಾಗಲಕೋಟೆ ನಗರದ ಬುರ್ಲಿ ಲೇಔಟ್‌ನಲ್ಲಿಗುರುವಾರ ಬೆಳಗಿನ ಜಾವ ನಾಗಪ್ಪ ಅಂಬಿಗೇರ (65) ಕೊಲೆಗೀಡಾಗಿದ್ದಾರೆ. ಕಟ್ಟಿಗೆ ಅಡ್ಡೆಯ ವಾಚ್‌ಮನ್‌ ಆಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಬೆಳಗಿನ ಜಾವ ಮಲ್ಲಪ್ಪರೊಂದಿಗೆ ಜಗಳ ತೆಗೆದಿದ್ದ ಮತ್ತೊಂದು ಕಟ್ಟಿಗೆ ಅಡ್ಡೆಯ ಮಾಲೀಕ ಶಂಕರ ಮೋರೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆ ಮಾಡಿದ ನಂತರ ಶವವನ್ನು 150 ಮೀ. ದೂರದವರೆಗೆ ಎಳೆದು ಎಸೆಯಲಾಗಿದೆ. ಶಂಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಪಿಎಸ್‌ಐ ದಿನೇಶ ಜವಳಕರ ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ಸಿಪಿಐ ಐ.ಆರ್‌.ಪಟ್ಟಣಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಸಂಗಾಪುರದಲ್ಲಿಮಂಜಪ್ಪ ವಡ್ಡರ (37) ಗುರುವಾರ ಬೆಳಗಿನ ಜಾವ ಕೊಲೆಯಾಗಿದ್ದಾರೆ. ಈತನ ಪತ್ನಿ ಯಲ್ಲವ್ವ (30), ಪ್ರಿಯಕರ ಎನ್ನಲಾದ ಮಲ್ಲಪ್ಪ ಹೊದ್ಲೂರ (39) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಜಪ್ಪನಿಗೆ ಮದ್ಯ ಕುಡಿಸಿ ನಂತರ ಆತನ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರಾಮನಗೌಡ ಸಂಕನಾಳ ತನಿಖೆ ನಡೆಸಿದ್ದಾರೆ.

ತಾಲೂಕಿನ ಸೀಮಿಕೇರಿಯಲ್ಲಿಬುಧವಾರ ತಡ ರಾತ್ರಿ ಚಂದ್ರಕಾಂತ ಹೊರಕೇರಿ (27) ಕೊಲೆಗೀಡಾಗಿದ್ದಾರೆ. ಈತನನ್ನು ಮಲ್ಲಪ್ಪ (42), ಹಣಮಂತ (25) ಎನ್ನುವವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೊಡಲಿಯಿಂದ ಬಲವಾಗಿ ಹೊಡೆದ ಪರಿಣಾಮ ಚಂದ್ರಕಾಂತ ಮೃತಪಟ್ಟಿದ್ದಾರೆ. ಹಣಮಂತನ ಪತ್ನಿಗೆ ಚಂದ್ರಕಾಂತ ಕಿರಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧನೆ ಕೈಗೊಂಡಿದ್ದಾರೆ. ಕಲಾದಗಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರವಿ ಪವಾರ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ