ಆ್ಯಪ್ನಗರ

ಮಜೂರಿ ಹೆಚ್ಚಳ: ನಾಳೆ ಪ್ರತಿಭಟನೆ

ರಬಕವಿ/ಬನಹಟ್ಟಿ : ನೇಕಾರರ ಜೋಡಣೆದಾರರಿಗೆ ಸಮರ್ಪಕವಾದ ಮಜೂರಿ ಹೆಚ್ಚಳಗೊಳಿಸಬೇಕೆಂಬ ಒತ್ತಾಯಿಸಿ ಮೇ 25 ರಂದು ಪ್ರತಿಭಟನಾ ರಾರ‍ಯಲಿ ನಡೆಸಲಾಗುವುದೆಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವನಿಂಗ ಟಿರಕಿ ತಿಳಿಸಿದರು.

Vijaya Karnataka 24 May 2018, 5:00 am
ರಬಕವಿ/ಬನಹಟ್ಟಿ : ನೇಕಾರರ ಜೋಡಣೆದಾರರಿಗೆ ಸಮರ್ಪಕವಾದ ಮಜೂರಿ ಹೆಚ್ಚಳಗೊಳಿಸಬೇಕೆಂಬ ಒತ್ತಾಯಿಸಿ ಮೇ 25 ರಂದು ಪ್ರತಿಭಟನಾ ರಾರ‍ಯಲಿ ನಡೆಸಲಾಗುವುದೆಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವನಿಂಗ ಟಿರಕಿ ತಿಳಿಸಿದರು.
Vijaya Karnataka Web tomorrows protest
ಮಜೂರಿ ಹೆಚ್ಚಳ: ನಾಳೆ ಪ್ರತಿಭಟನೆ


ಬನಹಟ್ಟಿ ನಗರದ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆದ ಜೋಡಣೆದಾರರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೇಕಾರರು ಅಸಂಘಟಿತರಾಗಿದ್ದು, ಮೊದಲು ಸಂಘಟನಾತ್ಮಕ ಶಕ್ತಿ ಅಳವಡಿಸಿಕೊಳ್ಳಬೇಕಿದೆ ಎಂದರು. ಎಲ್ಲ ವರ್ಗದ ನೇಕಾರರು ಮೊದಲು ಕಾರ್ಮಿಕರೆಂದು ಗುರ್ತಿಸುವಲ್ಲಿ ಸರಕಾರ ಮಟ್ಟದಲ್ಲಿ ಹೋರಾಟ ನಡೆಸಬೇಕಿದೆ ಎಂದು ನೇಕಾರರಲ್ಲಿ ಮನವರಿಕೆ ಮಾಡಿದರು.

ಮಾಲೀಕರ-ಜೋಡಣೆದಾರರ ವಿರುದ್ಧ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬದಲಾಗಿ ದುಡಿಯುವ ಕೈಗಳಿಗೆ ಸಮರ್ಪಕವಾದ ಸಂಬಳ ದೊರಕದ ಕಾರಣ ಮಜೂರಿ ಹೆಚ್ಚಳಗೊಳಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ಸಧ್ಯದ ಪರಿಸ್ಥಿತಿಯಲ್ಲಿ ಒಂದು ಸೀರೆ ಉತ್ಪಾದನೆಯಲ್ಲಿ ರೂ.15 ರೂ.ಗಳಷ್ಟು ಹೆಚ್ಚಳಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಆದರೆ ಇದಕ್ಕೆ ನೇಕಾರ ಮಾಲೀಕರು ಸಮಂಜಸವಾದ ಉತ್ತರ ನೀಡದೆ ಜೋಡಣೆದಾರರಲ್ಲಿ ಬೇಸರ ಮೂಡುವಲ್ಲಿ ಕಾರಣವಾಗಿದೆ. ಇದಕ್ಕೆ ಸಂಬಂಧ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬನಹಟ್ಟಿ ನಗರದ ಕಾಡಸಿದ್ಧೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವದೆಂದು ತಿಳಿಸಿದರು.

ಪರಮಾನಂದ ಬಾವಿಕಟ್ಟಿ, ಮಹಾದೇವ ಕೋಪರ್ಡೆ, ಸುರೇಶ ಮಠದ, ಬಸವರಾಜ ಮುರಗೋಡ, ಮಹಾಂತೇಶ ನಾಗರಾಳ, ದೇವೇಂದ್ರ ಶೀಲವಂತ, ಕುಬೇರ ಸಾರವಾಡ, ಮಹಾದೇವ ನುಚ್ಚಿ, ಹನಮಂತ ನೇಸೂರ, ಮೆಹಬೂಬ ನದಾಫ್‌ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ