ಆ್ಯಪ್ನಗರ

ಲ್ಯಾಪಟಾಪ್‌ ಮರಳಿಸಿ ಮಾನವೀಯತೆ ಮೆರೆದ ಸಾರಿಗೆ ನೌಕರ

ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ವಿದ್ಯಾರ್ಥಿನಿ ಬಸ್‌ ನಿಲ್ದಾಣದಲ್ಲೇ ಮರೆತು ಹೋದ ಲ್ಯಾಪಟಾಪ್‌ನ್ನು ಮರಳಿ ವಿದ್ಯಾರ್ಥಿನಿಗೆ ನೀಡುವ ಮೂಲಕ ನಗರದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ ನಿಲ್ದಾಣದ ಸಹಾಯಕ ಮಾನವೀಯತೆ ಮರೆದಿದ್ದಾರೆ.

Vijaya Karnataka Web 15 Mar 2020, 5:00 am
ಮುಧೋಳ: ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ವಿದ್ಯಾರ್ಥಿನಿ ಬಸ್‌ ನಿಲ್ದಾಣದಲ್ಲೇ ಮರೆತು ಹೋದ ಲ್ಯಾಪಟಾಪ್‌ನ್ನು ಮರಳಿ ವಿದ್ಯಾರ್ಥಿನಿಗೆ ನೀಡುವ ಮೂಲಕ ನಗರದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ ನಿಲ್ದಾಣದ ಸಹಾಯಕ ಮಾನವೀಯತೆ ಮರೆದಿದ್ದಾರೆ.
Vijaya Karnataka Web 14MDL4 KSRTC_41
ಮುಧೋಳ ಬಸ್‌ ನಿಲ್ದಾಣದಲ್ಲಿಲ್ಯಾಪಟಾಪ್‌ವನ್ನು ಕಳೆದುಕೊಂಡ ವಿದ್ಯಾರ್ಥಿನಿಗೆ ಘಟಕ ವ್ಯವಸ್ಥಾಪಕ ಪ್ರಶಾಂತ ಸುರುಪುರ ನೇತೃತ್ವದಲ್ಲಿಮರಳಿಸಿ ಮಾನವೀಯತೆ ಮೆರೆಯಲಾಯಿತು.


ವಿದ್ಯಾರ್ಥಿನಿ ಸುಪೀಯಾ ಜೀರಗಾಳ ಬಸ್‌ ನಿಲ್ದಾಣದಲ್ಲೇ ಮರೆತು ಹೋದ 'ಲ್ಯಾಪಟಾಪ್‌'ನ್ನು ಕಿರಿಯ ಸಹಾಯಕ ಶಂಕರ ಸೂರ್ಯವಂಶಿ ಅವರು ಘಟಕ ವ್ಯವಸ್ಥಾಪಕ ಪ್ರಶಾಂತ ಸುರುಪರ ಸಲಹೆ ಮೆರೆಗೆ ವಿದ್ಯಾರ್ಥಿನಿಗೆ ಮರಳಿಸಿದ್ದಾರೆ.

ಫೆ.19ರಂದು ಗಲಗಲಿಗೆ ತೆರಳುತ್ತಿದ್ದ ಸುಪೀಯಾ ಜೀರಗಾಳ ಬಸ್‌ ಹತ್ತುವುದಕ್ಕೂ ಮುನ್ನ ಲ್ಯಾಪಟಾಪ್‌ ಬ್ಯಾಗ್‌ನ್ನು ಅಲ್ಲೇ ಮರೆತು ಹೋಗಿದ್ದಳು. ನಂತರ ಬಸ್‌ ಹಾಗೂ ಬಸ್‌ ನಿಲ್ದಾಣದಲ್ಲಿಎಷ್ಟೇ ಹುಡುಕಾಡಿದರೂ ಲ್ಯಾಪಟಾಪ್‌ ಸಿಕ್ಕಿರಲಿಲ್ಲ. ಆದರೆ, ಲ್ಯಾಪಟಾಪ್‌ ಸಿಕ್ಕಿರುವ ಕುರಿತು ಶಂಕರ ಕಾಲೇಜ್‌ ಉಪನ್ಯಾಸಕರಿಗೆ ಮಾಹಿತಿ ನೀಡಿದ್ದರು. ನಂತರ ಬಸ್‌ ನಿಲ್ದಾಣಕ್ಕೆ ಬಂದ ಸುಪೀಯಾಗೆ ಲ್ಯಾಪಟಾಪ್‌ ಹಸ್ತಾಂತರಿಸಲಾಗಿದೆ. ಘಟಕ ವ್ಯವಸ್ಥಾಪಕ ಪ್ರಶಾಂತ ಸುರುಪುರ, ಡಾ.ವಿ.ಕೆ.ಕಕರಡ್ಡಿ, ಬಸ್‌ ನಿಲ್ದಾಣಾಧಿಕಾರಿಗಳು ಇತರರು ಇದ್ದರು.


ಕಾಲೇಜ್‌ನಲ್ಲಿನೀಡಿದ್ದ ಲ್ಯಾಪಟಾಪ್‌ ಕಳೆದುಕೊಂಡು ಆತಂಕದಲ್ಲಿದ್ದೆ. ಆದರೆ, ಬಸ್‌ ನಿಲ್ದಾಣದಲ್ಲೇ ಮರೆತ ಲ್ಯಾಪಟಾಪ್‌ನ್ನು ಶಂಕ್ರಣ್ಣ ಅವರು ತೆಗೆದಿಟ್ಟು ಮರಳಿಸಿದ್ದಾರೆ. ಲ್ಯಾಪಟಾಪ್‌ ಅಂದಾಜು 30 ಸಾವಿರ ರೂ.ಮೌಲ್ಯ ಬೆಲೆ ಬಾಳುವುದಾಗಿದ್ದು, ನನ್ನ ಪ್ರಾಕ್ಟಿಕಲ್‌ ಏಕ್ಸಾಮ್‌ಗೆ ಉಪಯುಕ್ತವಾಗಿದೆ.
-ಸುಪೀಯಾ ಜೀರಗಾಳ, ವಿದ್ಯಾರ್ಥಿನಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ