ಆ್ಯಪ್ನಗರ

ಇಬ್ಬರು ಅಂಗನವಾಡಿ ಕಾರ್ಯಕರ್ತೆಯರ ಅಮಾನತು

ಆಹಾರ ಸಾಮಗ್ರಿ ದುರುಪಯೋಗ ಮತ್ತು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಬಾದಾಮಿ ತಾಲೂಕಿನ ಮುರಡಿ ಗ್ರಾಮದ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರನ್ನು ಅಮಾನತುಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.

Vijaya Karnataka 3 Jun 2019, 5:00 am
ಬಾಗಲಕೋಟ: ಆಹಾರ ಸಾಮಗ್ರಿ ದುರುಪಯೋಗ ಮತ್ತು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಬಾದಾಮಿ ತಾಲೂಕಿನ ಮುರಡಿ ಗ್ರಾಮದ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರನ್ನು ಅಮಾನತುಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.
Vijaya Karnataka Web two anganwadi workers suspend
ಇಬ್ಬರು ಅಂಗನವಾಡಿ ಕಾರ್ಯಕರ್ತೆಯರ ಅಮಾನತು


ಇತ್ತೀಚೆಗೆ ಅಂಗನವಾಡಿ ಕೇಂದ್ರದ ದವಸ ಧಾನ್ಯಕ್ಕೆ ಕನ್ನ ಎಂಬ ಶೀರ್ಷಿಕೆಯಡಿ ಮುರಡಿ ಗ್ರಾಮದ ಇಬ್ಬರು ಕಾರ್ಯಕರ್ತೆಯರು ಆಹಾರ ಪದಾರ್ಥಗಳನ್ನು ಕೈಚೀಲದಲ್ಲಿ ತುಂಬಿಕೊಂಡು ಮನೆಗೆ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಹಿನ್ನಲೆಯಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ವಲಯ ಮೇಲ್ವಿಚಾರಕರಿಂದ ಸ್ಥಾನಿಕ ಪರಿಶೀಲಿಸಿ ವರದಿ ಪಡೆದಿದ್ದರು. ಆಹಾರ ಸಾಮಗ್ರಿಗಳಲ್ಲಿ ಭೌತಿಕ ಉಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ ಮುರಡಿ ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಾದ ಶಾಂತಾ ಹೊಸಮನಿ ಮತ್ತು ಶೋಭಾ ವಾಲಿಕಾರ ಅವರ ಹುದ್ದೆ ಮಾನ್ಯತೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಆಹಾರ ಸಾಮಗ್ರಿ ದುರುಪಯೊಗ ಮತ್ತು ಕರ್ತವ್ಯ ಲೋಪದ ಕಾರಣಕ್ಕೆ ಮಾ.5ರಂದು ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಭಾರತಿ ದಲಾಲ, ಏ.11ರಂದು ಬಾದಾಮಿ ತಾಲೂಕಿನ ಕಲಬಂದಕೇರಿ ಅಂಗನವಾಡಿ ಕೇಂದ್ರ 1ರ ಕಾರ್ಯಕರ್ತೆ ಲಕ್ಷ್ಮೀಬಾಯಿ ನಾಯಕ ಮತ್ತು ಸಹಾಯಕಿ ಯಮನವ್ವ ತಳವಾರ ಅವರ ಹುದ್ದೆಯ ಮಾನ್ಯತೆಯನ್ನು ಸಹ ತಾತ್ಕಾಲಿಕವಾಗಿ ರದ್ದುಪಡಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ