ಆ್ಯಪ್ನಗರ

ಬಾಗಲಕೋಟೆಯಲ್ಲಿಮತ್ತಿಬ್ಬರಿಗೆ ಸೋಂಕು

ಬಾಗಲಕೋಟೆ: ಕೊರೊನಾ ಸೋಂಕಿತರಾದವರ ಸಂಖ್ಯೆ ಜಿಲ್ಲೆಯಲ್ಲಿಮೂರಕ್ಕೇರಿದ್ದು, ಸೋಂಕಿನಿಂದ ಮೃತಪಟ್ಟ ವೃದ್ಧನ ಕುಟುಂಬದ ಇಬ್ಬರಿಗೆ ಕೋವಿಡ್‌ ತಗುಲಿರುವುದು ಖಚಿತವಾಗಿದೆ.

Vijaya Karnataka 7 Apr 2020, 5:00 am
ಬಾಗಲಕೋಟೆ: ಕೊರೊನಾ ಸೋಂಕಿತರಾದವರ ಸಂಖ್ಯೆ ಜಿಲ್ಲೆಯಲ್ಲಿಮೂರಕ್ಕೇರಿದ್ದು, ಸೋಂಕಿನಿಂದ ಮೃತಪಟ್ಟ ವೃದ್ಧನ ಕುಟುಂಬದ ಇಬ್ಬರಿಗೆ ಕೋವಿಡ್‌ ತಗುಲಿರುವುದು ಖಚಿತವಾಗಿದೆ.
Vijaya Karnataka Web two other infections in bagalkot
ಬಾಗಲಕೋಟೆಯಲ್ಲಿಮತ್ತಿಬ್ಬರಿಗೆ ಸೋಂಕು


ಜಿಲ್ಲೆಯಲ್ಲಿ10 ದಿನಗಳಿಂದ ಭೀತಿ, ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‌ ತನ್ನ ದಾಳಿಯ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ರಾಜ್ಯ ಸರಕಾರ ಸೋಮವಾರ ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿಬಾಗಲಕೋಟೆಯ ಇಬ್ಬರು ವ್ಯಕ್ತಿಗಳು ಪಾಸಿಟಿವ್‌ ಆಗಿರುವುದನ್ನು ದೃಢಪಡಿಸಿದೆ.

ನಗರದ ಇನ್ನಿಬ್ಬರು ವ್ಯಕ್ತಿಗಳಿಗೆ ಕೋವಿಡ್‌ ಇರುವುದು ಪತ್ತೆಯಾಗುತ್ತಿದ್ದಂತೆ ಆಡಳಿತದಿಂದ ಕಂಟೈನ್‌ಮೆಂಟ್‌ ಪ್ರದೇಶದಲ್ಲಿಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಪ್ರದೇಶದಲ್ಲಿಜನರು ಸಂಚರಿಸದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಕಂಟೈನ್‌ಮೆಂಟ್‌ ಪ್ರದೇಶ, ರೆಡ್‌ ಝೋನ್‌ನಲ್ಲಿಹೊರಗಿನಿಂದ ತೆರಳಲು ಯಾರಿಗೂ ಅವಕಾಶವಿಲ್ಲ.

ತೀವ್ರ ಶೋಧನೆ

ಬಾಗಲಕೋಟೆ ನಗರದಲ್ಲಿಕೊರೊನಾ ವೃದ್ಧನೊಬ್ಬನನ್ನು ಬಲಿ ಪಡೆದಿದೆ, ಸೋಂಕಿಗೊಳಗಾಗಿದ್ದ 75 ವರ್ಷದ ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದರು. ಇದೀಗ ವೃದ್ಧನ 54 ವರ್ಷದ ಪತ್ನಿ, 58 ವರ್ಷದ ಸಹೋದರನಿಗೆ ಕೋವಿಡ್‌ ಖಚಿತವಾಗಿದೆ. ವೃದ್ಧನ ಕುಟುಂಬದ 8 ಜನರನ್ನು ಜಿಲ್ಲಾಸ್ಪತ್ರೆ ಐಸೋಲೇಶನ್‌ ವಾರ್ಡ್‌ನಲ್ಲಿದಾಖಲಿಸಲಾಗಿದೆ. ಈ ಪೈಕಿ ಉಳಿದ ಐವರ ವರದಿ ನೆಗೆಟಿವ್‌ ಆಗಿದ್ದು ಇಬ್ಬರಿಗೆ ಸೋಂಕಿರುವುದು ಖಚಿತವಾಗಿದೆ. ವೃದ್ಧನ ಸಹೋದರ ವ್ಯಾಪಾರಿಯಾಗಿದ್ದು ಮಾ.16 ರಂದು ಕಲಬುರ್ಗಿಗೆ ಪ್ರಯಾಣಿಸಿದ್ದರು. ಅಲ್ಲಿಸೋಂಕು ಪಸರಿಸಿದ್ದ ಮೋಮಿನ್‌ಪಾರ್‌ ಗಂಜ್‌ ಪ್ರದೇಶದ ಹೊಟೇಲ್‌ನಲ್ಲಿವಾಸ್ತವ್ಯ ಮಾಡಿದ್ದರು. ಅಲ್ಲಿನ ಹೊಟೇಲ್‌ನಲ್ಲಿಊಟ, ತಿಂಡಿ ಸೇವಿಸಿದ್ದರು. ನಂತರ ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರೊಂದಿಗೆ ಸಂಚರಿಸಿದ್ದರು. ಅವರು ಅಂದು ಸಂಜೆ ಬಾಗಲಕೋಟೆಗೆ ವಾಪಸ್ಸಾಗಿದ್ದಾರೆ. ಸೋಂಕಿತ ವ್ಯಕ್ತಿ ರೈಲು, ಬಸ್‌ನಲ್ಲಿಪ್ರಯಾಣಿಸಿರುವುದೂ ಪತ್ತೆಯಾಗಿದೆ. ಇದರೊಂದಿಗೆ ಬಾಗಲಕೋಟೆಯಲ್ಲಿಕಾಣಿಸಿಕೊಂಡಿರುವ ಸೋಂಕು ಕಲಬುರಗಿಯಿಂದ ಪಸರಿಸಿದೆ ಎಂಬುದು ಬಹುತೇಕ ಖಚಿತವಾಗಿದೆ. ಸದ್ಯ ಬಾಗಲಕೋಟೆಯ ಸೋಂಕಿತ ವ್ಯಕ್ತಿಯೊಂದಿಗೆ ಕಲಬುರಗಿಯಲ್ಲಿಸಂಚರಿಸಿದ್ದ ಇಬ್ಬರನ್ನೂ ಕಲಬುರಗಿಯಲ್ಲಿಯೇ ಕ್ವಾರಂಟೈನ್‌ನಲ್ಲಿಇರಿಸಲಾಗಿದೆ.

23 ಜನ ದಾಖಲು

ಜಿಲ್ಲಾಡಳಿತದಿಂದಲೂ ಎಣ್ಣೆ ಅಂಗಡಿಗಳಿಗೆ ಭೇಟಿ ನೀಡಿದವರು ಸ್ವಯಂ ಪ್ರೇರಣೆಯಿಂದ ತಪಾಸಣೆಗಾಗಿ ಮುಂದೆ ಬರಬೇಕು ಎಂದು ಮನವಿ ಮಾಡಲಾಗಿತ್ತು. ಹಲವರು ತಾವೇ ಮುಂದೆ ಬಂದು ತಪಾಸಣೆ ಪ್ರಕ್ರಿಯೆ ಪೂರೈಸಿದ್ದಾರೆ. ವೃದ್ಧನಿಗೆ ಮೊದಲು ಚಿಕಿತ್ಸೆ ನೀಡಿದ್ದ 9 ವೈದ್ಯರಿಂದಲೂ ಮಾಹಿತಿ ಸಂಗ್ರಹಿಸಿ ಮುಂಜಾಗೃತೆ ಕ್ರಮವಾಗಿ ಅವರನ್ನೆಲ್ಲಕ್ವಾರಂಟೈನ್‌ನಲ್ಲಿಡಲಾಗಿದೆ. ಈವರೆಗೆ ಸೋಂಕಿತ ವ್ಯಕ್ತಿಗಳ ಪ್ರದೇಶದಲ್ಲಿರುವ 23 ಜನರನ್ನು ಐಸೋಲೇಶನ್‌ ವಾರ್ಡ್‌ನಲ್ಲಿದಾಖಲಿಸಲಾಗಿದೆ. 60 ವರ್ಷ ಮೇಲ್ಪಟ್ಟ ವ್ಯಕ್ತಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಲಾಗಿದೆ.

ಇದರೊಂದಿಗೆ ಹೊಸದಿಲ್ಲಿಯ ತಬ್ಲಿಘಿಘಿ ಜಮಾತ್‌ನ ಪ್ರಾರ್ಥನೆಯಲ್ಲಿಪಾಲ್ಗೊಂಡಿದ್ದ ವ್ಯಕ್ತಿಗಳೂ ಕ್ವಾರಂಟೈನ್‌ನಲ್ಲಿದ್ದಾರೆ. ಈವರೆಗೆ ಜಿಲ್ಲಾಡಳಿತ 48 ವ್ಯಕ್ತಿಗಳ ರಕ್ತ, ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದೆ. ದಿಲ್ಲಿಗೆ ತೆರಳಿದ್ದ 25 ವ್ಯಕ್ತಿಗಳು, ಮಹಾರಾಷ್ಟ್ರದ ಮಾಲೇಗಾಂವ್‌, ರಾಜಸ್ತಾನದ ಅಜ್ಮೇರ್‌ನಿಂದ ವಾಪಸ್ಸಾದ 18 ಜನರ ವರದಿಗಳು ಬರಬೇಕಿವೆ.

ಜಿಲ್ಲೆಯ ಸೋಂಕಿತ ವ್ಯಕ್ತಿ ಕಲಬುರಗಿಗೆ ಮಾ.16 ರಂದು ತೆರಳಿದ್ದರು, ಅಂದೇ ಸಂಜೆ ಬಾಗಲಕೋಟೆಗೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ. ಕಲಬುರಗಿಯಿಂದಲೇ ಸೋಂಕು ಬಂದಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ಶೋಧನೆ ಕೈಗೊಳ್ಳಬೇಕಿದೆ.

-ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ