ಆ್ಯಪ್ನಗರ

ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ಕಷ್ಟ: ಸಿದ್ದರಾಮಯ್ಯ

ಜಾಧವ್ ಅವರನ್ನು ಅನರ್ಹಗೊಳಿಸುವಂತೆ ನಾವು ಸ್ಪೀಕರ್‌ಗೆ ಮನವಿ ಕೊಟ್ಟಿದ್ದೇವೆ, ಜಾಧವ್ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ್ದಾರೆ. ಹೀಗಾಗಿ ರಾಜೀನಾಮೆ ಅಂಗೀಕಾರ ವಾಗುವುದು ಕಷ್ಟಕರ. ಈ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

Vijaya Karnataka Web 5 Mar 2019, 2:47 pm
ಬಾಗಲಕೋಟ: ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಸ್ವೀಕಾರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ಧರಾಮಯ್ಯ ಹೇಳಿದ್ದಾರೆ.
Vijaya Karnataka Web siddaramaia2


ಬಾದಾಮಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಧವ್ ಅವರನ್ನು ಅನರ್ಹಗೊಳಿಸುವಂತೆ ನಾವು ಸ್ಪೀಕರ್‌ಗೆ ಮನವಿ ಕೊಟ್ಟಿದ್ದೇವೆ, ಜಾಧವ್ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ್ದಾರೆ. ಹೀಗಾಗಿ ರಾಜೀನಾಮೆ ಅಂಗೀಕಾರ ವಾಗುವುದು ಕಷ್ಟಕರ. ಈ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಜಾಧವ್ ನಿನ್ನೆ ಸ್ಪೀಕರ್ ಗೆ ರಾಜೀನಾಮೆ ಕೊಟ್ಟಿದ್ದಾರೆ. ಸ್ಪೀಕರ್ ಅದನ್ನ ಪರಿಶೀಲನೆ ಮಾಡ್ತಿನಿ ಅಂತ ಹೇಳಿದ್ದಾರೆ. ಜಾಧವ್ ಮೇಲೆ ಪಿಟಿಷನ್ ಇದೆ. ನಾನೇ ಸ್ಪೀಕರ್‌ಗೆ ಪಿಟಿಷನ್ ಕೊಟ್ಟಿದ್ದೀನಿ. ಇವನು ಆಂಟಿ ಪಾರ್ಟಿ ಆಕ್ಟಿವಿಟಿಸ್‌‌ನಲ್ಲಿ ಇನ್ವಾಲ್ವ ಅಗಿದಾನೆ ಅಂತ ಕೊಟ್ಟಿದ್ದೇನೆ‌. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ.
ಆದ್ದರಿಂದ ಇವರನ್ನ ಅನರ್ಹನಾಗಿ ಮಾಡಬೇಕು ಅಂತ ಪಿಟಿಷನ್ ಕೊಟ್ಟಿದೆ. ಅದು ಇನ್ನು ಇತ್ಯರ್ಥ ಆಗಿಲ್ಲ. ಅದು ಇತ್ಯರ್ಥ ಅಗೋ ಮುನ್ನ ಇವ್ರು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಸ್ವೀಕಾರ ಮಾಡೋಕೆ ಬರಲ್ಲ ಎಂದರು.

ರಮೇಶ್ ಜಾರಕಿಹೊಳಿ ಟೀಮ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಮೇಲೂ ಪಿಟಿಷಿಯನ್ ಇದೆ. ಅವರೇನು ರಾಜೀನಾಮೆ ಕೊಟ್ಟಿಲ್ವಲ್ಲ. ಕ್ರಮ ಆಗೋದು ಬಿಡೋದು ಸ್ಪೀಕರ್ ಗೆ ಬಿಟ್ಟಿದ್ದು. ಸ್ಪೀಕರ್ ನನ್ನ ಅಭಿಪ್ರಾಯ ಕೇಳಬಹುದು, ಇಂಪ್ಲಿಯನ್ಸ್ ಮಾಡೋಕೆ ಅಗುತ್ತಾ? ಆಸ್ ಎ ಪಿಟಿಷಿಯನರ್ ನಾನು ಒತ್ತಾಯ ಮಾಡಬಹುದು. ಇವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ, ವಿಪ್ ಉಲ್ಲಂಘನೆ ಮಾಡಿದ್ದಾರೆ ಅಂತ ನಾನು ಹೇಳ್ತೀನಿ. ಆದ್ರೆ, ಅಲ್ಟಿಮೆಟ್ಲಿ ತೀರ್ಮಾನ ಮಾಡೋವವರು ಸ್ಪೀಕರ್. ಅವರಿಗೇ ಪರಮಾಧಿಕಾರ ಇರೋದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ