ಆ್ಯಪ್ನಗರ

ಎಕೆ47 ಗನ್ ಇದ್ದಿದ್ರೆ ಕನ್ಹಯ್ಯನ ಗುಂಡಿಟ್ಟು ಕೊಲ್ತಿದ್ದೆ: ನಾರಾಣಸಾ ಭಾಂಡಗೆ ಕಿಡಿ

ಜೆಎನ್‌ಯುನಲ್ಲಿ ಕನ್ಹಯ್ಯ ದೇಶ ತುಕಡಿ ಮಾಡ್ತಿವಿ ಅಂತ ಹೇಳ್ತಾನೆ. ಯಾವನೋ ಅವ ಕನ್ಹಯ್ಯಾ. ನನ್ನ ಕೈಯಲ್ಲಿ ಎಕೆ47 ಗನ್ ಇದ್ದಿದ್ರೆ,,, ಅವನನ್ನು ಅಲ್ಲೆ ಗುಂಡಿಟ್ಟು ಕೊಲ್ತಿದ್ದೆ ಎಂದು ಮಾಜಿ ಶಾಸಕ ನಾರಾಣಸಾ ಭಾಂಡಗೆ ಅವರು ಕಿಡಿ ಕಾರಿದ್ದಾರೆ.

Vijaya Karnataka Web 25 Feb 2020, 4:00 pm
ಬಾಗಲಕೋಟೆ: ಜೆಎನ್‌ಯುನಲ್ಲಿ ಕನ್ಹಯ್ಯ ದೇಶ ತುಕಡಿ ಮಾಡ್ತಿವಿ ಅಂತ ಹೇಳ್ತಾನೆ. ಯಾವನೋ ಅವ ಕನ್ಹಯ್ಯಾ. ನನ್ನ ಕೈಯಲ್ಲಿ ಎಕೆ47 ಗನ್ ಇದ್ದಿದ್ರೆ,,, ಅವನನ್ನು ಅಲ್ಲೆ ಗುಂಡಿಟ್ಟು ಕೊಲ್ತಿದ್ದೆ ಎಂದು ಮಾಜಿ ಶಾಸಕ ನಾರಾಣಸಾ ಭಾಂಡಗೆ ಅವರು ಕಿಡಿ ಕಾರಿದ್ದಾರೆ.
Vijaya Karnataka Web amulya leona


ಅಮೂಲ್ಯ ಲಿಯೋನಾಳ ದೇಶದ್ರೋಹಿ ಹೇಳಿಕೆಯನ್ನು ಖಂಡಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಹಿಂದೂಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜೆಎನ್ ಯು ನಲ್ಲಿ ದೇಶದ್ರೋಹಿ ಘೋಷಣೆ ಕೂಗುವಾಗ ಅಕಸ್ಮಾತ್ ನಾನಿದಿದ್ರೆ. ಅದರ ಅದರ ಕಥೆಯೇ ಬೇರೆ ಇರುತ್ತಿತ್ತು. ದೇಶದ್ರೋಹಿಗಳನ್ನು ಪೋಷಿಸುವ ಕೆಲಸವಾಗುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಶಾಂತರೀತಿಯಲ್ಲಿ ಕುಳಿತಿರುವುದರಿಂದ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ. ಸಿಎಎ ಇವರಿಗೆ ನೆಪ ಮಾತ್ರ. ಸಿಎಎ ಯಾವುದೇ ಮುಸ್ಲಿಂ ವಿರೋಧಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧಿಕಾರ ದುರುಪಯೋಗ ಭಾಂಡಗೆ ವಿರುದ್ಧ ನ್ಯಾಯಾಲಯಕ್ಕೆ ದೂರು

ವಿಶ್ವ ಹಿಂದೂ ಪರಿಷತ್, ವಿದ್ಯಾಗಿರಿ ಗೆಳೆಯರ ಬಳಗದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ದೇಶ ದ್ರೋಹಿ ಅಮೂಲ್ಯ ಲಿಯೋನಾಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಅಮೂಲ್ಯ ಲಿಯೋನಾ ಹಾಗೂ ಹುಬ್ಬಳಿಯಲ್ಲಿ ದೇಶದ್ರೋಹಿ ಕೃತ್ಯ ನಡೆಸಿದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದರು.

ಗದ್ದಿಗೌಡರನ್ನು ಮತ್ತೊಮ್ಮೆ ಗೆಲ್ಲಿಸಿ: ಈಶ್ವರಪ್ಪ ಮನವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ