ಆ್ಯಪ್ನಗರ

ಅವ್ಯವಸ್ಥೆಗೆ ಗರಂ, ಮುಖ್ಯಗುರು, ವಾರ್ಡನ್‌ಗೆ ಎಚ್ಚರಿಕೆ

ಲೋಕಾಪುರ: ಸಮೀಪದ ಹೆಬ್ಬಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ದಿಢೀರ್‌ ಭೇಟಿ ವಸತಿ ಶಾಲೆ ಅವ್ಯವಸ್ಥೆ ಕಂಡು ಗರಂ ಆಗಿದ್ದು 1 ತಿಂಗಳೊಳಗೆ ವಾಪಸ್‌ ಬರುತ್ತೇನೆ ಅಷ್ಟರಲ್ಲಿ ಸರಿಪಡಿಸುವಂತೆ ಮುಖ್ಯಗುರು ಹಾಗೂ ಹಾಸ್ಟೆಲ್‌ ವಾರ್ಡನ್‌ಗೆ ಎಚ್ಚರಿಕೆ ನೀಡಿದರು.

Vijaya Karnataka 21 Jul 2019, 5:00 am
ಲೋಕಾಪುರ: ಸಮೀಪದ ಹೆಬ್ಬಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ದಿಢೀರ್‌ ಭೇಟಿ ವಸತಿ ಶಾಲೆ ಅವ್ಯವಸ್ಥೆ ಕಂಡು ಗರಂ ಆಗಿದ್ದು 1 ತಿಂಗಳೊಳಗೆ ವಾಪಸ್‌ ಬರುತ್ತೇನೆ ಅಷ್ಟರಲ್ಲಿ ಸರಿಪಡಿಸುವಂತೆ ಮುಖ್ಯಗುರು ಹಾಗೂ ಹಾಸ್ಟೆಲ್‌ ವಾರ್ಡನ್‌ಗೆ ಎಚ್ಚರಿಕೆ ನೀಡಿದರು.
Vijaya Karnataka Web warning to garam headmaster and warden of chaos
ಅವ್ಯವಸ್ಥೆಗೆ ಗರಂ, ಮುಖ್ಯಗುರು, ವಾರ್ಡನ್‌ಗೆ ಎಚ್ಚರಿಕೆ


ಶಾಲೆಯ ಸಮಸ್ಯೆಗಳ ಬಗ್ಗೆ ಪಾಲಕರಿಂದ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರು, 7ನೇ ಕ್ಲಾಸ್‌ಗೆ ಭೇಟಿ ನೀಡಿ ಶಿಕ್ಷ ಕರನ್ನು ಹಾಗೂ ಹಾಸ್ಟೆಲ್‌ ವಾರ್ಡನರನ್ನು ಹೊರಗಡೆ ಕಳುಹಿಸಿ ವಸತಿ ಶಾಲೆಯಲ್ಲಿನ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಮಾತನಾಡಿ, ನಿಮ್ಮ ಸಮಸ್ಯೆಯನ್ನು ಹೇಳಿ ಎಂದರು.

''ವಸತಿ ಶಾಲೆಯಲ್ಲಿ ಮೂಲ ಸೌಲಭ್ಯಗಳೇ ಇಲ್ಲವಾಗಿದೆ. ನಮಗೆ ಕೊಡುತ್ತಿರುವ ಆಹಾರ ಸಂಪೂರ್ಣ ಕಳಪೆಯಾಗಿದೆ. ಸಾಂಬರ್‌ ಸೇರಿದಂತೆ ಯಾವುದೇ ಆಹಾರ ಪದಾರ್ಥ ಸತ್ವ ರಹಿತ ಹಾಗೂ ರುಚಿ ರಹಿತವಾಗಿದೆ. ಅನಾರೋಗ್ಯಕ್ಕೆ ಒಳಗಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತಹ ವ್ಯವಸ್ಥೆ ಇಲ್ಲ. ಲ್ಯಾಬ್‌ ವ್ಯವಸ್ಥೆ ಸಂಪೂರ್ಣ ಆಯೋಮಯವಾಗಿದೆ'' ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡರು.

ವಸತಿ ನಿಲಯದ ಅಡುಗೆ ಕೋಣೆ, ವಸತಿ ನಿಲಯದಲ್ಲಿ ಸ್ವಚ್ಛತೆ ಇಲ್ಲ, ಅನುಪಯುಕ್ತ ಉಪಕರಣಗಳನ್ನು ಬೇಕಾಬಿಟ್ಟಿಯಾಗಿ ಎಸೆಯಲಾಗಿದೆ. ಬೇಳೆ ಕಾಳು ಉಗ್ರಾಣ ಸ್ವಚ್ಛವಾಗಿ ಇಟ್ಟುಕೊಂಡಿಲ್ಲ, ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಒಟ್ಟಾರೆಯಾಗಿ ಈ ವಸತಿ ನಿಲಯ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷ ್ಯತೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಜಿಪಂ ಸದಸ್ಯೆ ಶೋಭಾ ಬಿರಾದಾರ, ಮುಖ್ಯಗುರು ಮಹಾಂತೇಶ ಮೈದರಗಿ, ಹಾಸ್ಟೆಲ್‌ ವಾರ್ಡನ್‌ ವಿ.ಆರ್‌.ಕುಲಕರ್ಣಿ, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ