ಆ್ಯಪ್ನಗರ

ಅಂತೂ ಬಂತು ಕೃಷ್ಣೆಗೆ ನೀರು

ರಬಕವಿ/ಬನಹಟ್ಟಿ: ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಬಿಟ್ಟ ನೀರು ಮಂಗಳವಾರ ಸಂಜೆ ತಮದಡ್ಡಿ ಗ್ರಾಮದತ್ತ ಪ್ರವೇಶಿಸಿದೆ.

Vijaya Karnataka 26 Jun 2019, 5:00 am
ರಬಕವಿ/ಬನಹಟ್ಟಿ: ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಬಿಟ್ಟ ನೀರು ಮಂಗಳವಾರ ಸಂಜೆ ತಮದಡ್ಡಿ ಗ್ರಾಮದತ್ತ ಪ್ರವೇಶಿಸಿದೆ.
Vijaya Karnataka Web water come for krishna dam
ಅಂತೂ ಬಂತು ಕೃಷ್ಣೆಗೆ ನೀರು


ನೀರು ಬರುತ್ತಿರುವುದರಿಂದ 4 ತಿಂಗಳಿಂದ ನೀರಿನ ಬವಣೆಯಿಂದ ಸಂಪೂರ್ಣ ತತ್ತರಿಸಿ ಹೋಗಿದ್ದ ತೇರದಾಳ ವಿಧಾನಸಭೆ ಕ್ಷೇತ್ರದ ರಬಕವಿ-ಬನಹಟ್ಟಿ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತ ಹಾಗೂ ನೇಕಾರ ಮೊಗದಲ್ಲಿ ಮಂದಹಾಸ ಮೂಡಿದೆ.

ತೇರದಾಳ ಶಾಸಕ ಸಿದ್ದು ಸವದಿ ನದಿ ಸ್ಥಳಕ್ಕೆ ಭೇಟಿ ನೀಡಿ, ನೀರಿನ ವೇಗ ಹೆಚ್ಚಾಗಿದ್ದು, ಬುಧವಾರ ರಾತ್ರಿ ಹೊತ್ತಿಗೆ ಮಹಿಷವಾಡಗಿ ಬ್ಯಾರೇಜ್‌ ತಲುವ ಸಾಧ್ಯತೆಯಿದೆ. ಗುರುವಾರ ಹೊತ್ತಿಗೆ ಹಿಪ್ಪರಗಿ ಜಲಾಶಯವನ್ನು ತಲುಪಲಿದೆ. ನೀರಿನ ವೇಗ ಹೆಚ್ಚಿರುವ ಕಾರಣ ನಾಲ್ಕೈದು ದಿನಗಳಲ್ಲಿ ರಬಕವಿ-ಬನಹಟ್ಟಿ-ತೇರದಾಳ ಸೇರಿದಂತೆ ಎಲ್ಲ ಗ್ರಾಮಗಳಲ್ಲಿಯೂ ನೀರು ಪೂರೈಕೆಯಾಗುವ ಸಾಧ್ಯತೆ ಇದೆ ಎಂದು ಶಾಸಕರು ತಿಳಿಸಿದರು.

ಸುರೇಶ ಅಕ್ಕಿವಾಟ, ಮಹಾವೀರ ಬಿಲವಡಿ, ಬಸು ಯಾದವಾಡ, ನ್ಯಾಮಣ್ಣ ಜಮಖಂಡಿ, ಬಾಬುಗೌಡ ಪಾಟೀಲ, ಪಾರೀಶ ಅಕ್ಕಿವಾಟ, ನಂದೆಪ್ಪ ನಂದೆಪ್ಪನವರ, ಬಾಳಪ್ಪ ಮಣೆಪ್ಪನವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ