ಆ್ಯಪ್ನಗರ

ಮಲಪ್ರಭೆಗೆ ನೀರು: ಆಯುಕ್ತರ ಆದೇಶ

ಬಾಗಲಕೋಟೆ: ಕ್ಷೇತ್ರದ ಜನ ಹಾಗೂ ಜಾನುವಾರು ನೀರಿನ ಅಭಾವದಿಂದ ಬಳಲುತ್ತಿದ್ದು ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಮನವಿಗೆ ಸ್ಪಂದಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರು 1 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಿದ್ದಾರೆ.

Vijaya Karnataka 2 Apr 2020, 5:00 am
ಬಾಗಲಕೋಟೆ: ಕ್ಷೇತ್ರದ ಜನ ಹಾಗೂ ಜಾನುವಾರು ನೀರಿನ ಅಭಾವದಿಂದ ಬಳಲುತ್ತಿದ್ದು ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಮನವಿಗೆ ಸ್ಪಂದಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರು 1 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಿದ್ದಾರೆ.
Vijaya Karnataka Web water to malaprabha commissioners order
ಮಲಪ್ರಭೆಗೆ ನೀರು: ಆಯುಕ್ತರ ಆದೇಶ


ನವಿಲುತೀರ್ಥ ಜಲಾಶಯದಿಂದ ಮಲಪ್ರಭೆ ನದಿಗೆ ನೀರು ಹರಿಸುವದನ್ನು ಬಹುತೇಕ ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿಮಲಪ್ರಭೆಯನ್ನೇ ಅವಲಂಬಿಸಿದ ಬಾದಾಮಿ ಕ್ಷೇತ್ರದ ಜನ ಹಾಗೂ ಜಾನುವಾರು ಕುಡಿಯುವ ನೀರಿನ ಸಮಸ್ಯೆ ಎದುರಿಸವಂತಾಗಿತ್ತು. ಇದನ್ನು ಮನಗಂಡ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮಾ.30ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ನೀರು ಬಿಡುಗಡೆಗೆ ಮನವಿ ಮಾಡಿದ್ದರು. ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್‌ ಮಾ.31ರಂದು ಆದೇಶ ಹೊರಡಿಸಿ ಏ.2ರ ಸಂಜೆ 6 ರಿಂದ 1 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ತಿಳಿಸಿದ್ದಾರೆ. ಏ.12ರ ವರೆಗೆ 1 ಟಿಎಂಸಿ ನೀರು ಮಲಪ್ರಭೆಗೆ ಹರಿಯಲಿದೆ. ಸರಾಸರಿ ನಿತ್ಯ ಒಂದು ಸಾವಿರ ಕ್ಯೂಸೆಕ್ಸ ನೀರು ಮಲಪ್ರಭೆ ನದಿ ಸೇರಲಿದೆ. ಸದ್ಯ ಬಿಡುಗಡೆಯಾಗುವ ನೀರನ್ನು ಬಾದಾಮಿ ತಾಲೂಕಿನ ಪಟ್ಟಣ ಮತ್ತು ಹಳ್ಳಿ ಜನತೆಯ ಮತ್ತು ಜಾನುವಾರಗಳ ಕುಡಿಯುವ ನೀರಿಗಾಗಿ ಮಾತ್ರ ಬಳಸತಕ್ಕದ್ದು. ನದಿ ಪಾತ್ರದಲ್ಲಿರುವ ಜಮೀನುಗಳ ಮಾಲಿಕರು ಈ ನೀರನ್ನು ಕೃಷಿಗಾಗಿ ಬಳಸದಂತೆ ನೋಡಿಕೊಳ್ಳಬೇಕೆಂದು ಪ್ರಾದೇಶಿಕ ಆಯುಕ್ತರು ಆದೇಶದಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ