ಬಾಗಲಕೋಟೆ: 'ಕೋವಿಡ್ ಸುರಕ್ಷತಾ ಕ್ರಮಗಳ ಮಧ್ಯೆ ಸರಳವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡಬೇಕು, ಅವಕಾಶ ಕೊಡದಿದ್ದರೂ ನಾವು ಮೂರ್ತಿ ಪ್ರತಿಷ್ಠಾಪಿಸುತ್ತೇವೆ' ಎಂದು ಭಜರಂಗ ದಳದ ಜಿಲ್ಲಾಧ್ಯಕ್ಷ ಪುಂಡಲೀಕ ದಳವಾಯಿ ಸವಾಲೆಸೆದಿದ್ದಾರೆ. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ದಳವಾಯಿ, 'ಜಿಲ್ಲಾಧಿಕಾರಿ ಏಕಾಏಕಿ ಆದೇಶ ಹೊರಡಿಸಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಷೇಧಿಸಿದ್ದಾರೆ. ಪೂಜೆ ಸಮಯದಲ್ಲಿ ಮಾತ್ರ ಧ್ವನಿವರ್ಧಕ ಬಳಸಿ, ಸೀಮಿತ ಸಂಖ್ಯೆಯ ಜನರೊಂದಿಗೆ ನಾವು ಉತ್ಸವ ಆಚರಿಸುತ್ತೇವೆ. ಸರಕಾರ ಸೂಚಿಸುವ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ನಿಯಮ ಹಾಗೂ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ. ಅನ್ಯ ಕೋಮಿನವರಿಗೆ ಸರ್ಕಾರ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದೆ. ಹೀಗಿದ್ದರೂ ನಮಗೆ ಮಾತ್ರ ನಿಷೇಧ ಮುಂದುವರಿಸಿದರೆ ನಾವು ಬಂಧನಕ್ಕೊಳಗಾಗಲೂ ಸಿದ್ಧ. ತಾಕತ್ತಿದ್ದರೆ ಆಡಳಿತ ಕೇಸ್ ಹಾಕಲಿ' ಎಂದು ಅವರು ಸವಾಲು ಹಾಕಿದರು.
ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಿ, ರಾಮಮಂದಿರ ವಿರೋಧಿಗಳನ್ನು ಪಾಕ್ಗೆ ಕಳಹಿಸಿ: ಮುತಾಲಿಕ್
ವಿಶ್ವ ಹಿಂದು ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೇಲ್ನಾಡ ಮಾತನಾಡಿ, 'ಜಿಲ್ಲಾಡಳಿತ ಗಣೇಶೋತ್ಸವ ಮಂಡಳಿಗಳು, ಸಾರ್ವಜನಿಕರನ್ನು ಕರೆದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿತ್ತು. ತಲತಲಾಂತರದಿಂದ ಬಂದಿರುವ ಮೂರ್ತಿ ಪ್ರತಿಷ್ಠಾಪನೆ ಕೈಬಿಡಲು ಆಗುವುದಿಲ್ಲ. ರಾಜ್ಯ ಸರಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದಾಗ ಜಿಲ್ಲಾಡಳಿತ ಆಗಸ್ಟ್ 22 ರಿಂದ ನಿಷೇಧಾಜ್ಞೆ ಜಾರಿಗೊಳಿಸಿದೆ.'
ಅನುಮತಿ ಕೊಡದಿದ್ರೂ ಗಣೇಶ ಕೂರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಸರಕಾರಕ್ಕೆ ಮುತಾಲಿಕ್ ಸವಾಲು
'ನಾವು ದೇವಸ್ಥಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸರಳವಾಗಿ ಉತ್ಸವ ಆಚರಿಸಲು ನಿರ್ಧರಿಸಿದ್ದೇವೆ. ಪುಟ್ಟ ಮೂರ್ತಿ ಸ್ಥಾಪಿಸಿ ಉತ್ಸವ ನಡೆಸುತ್ತೇವೆ. ಜಿಲ್ಲಾಡಳಿತ ತಕ್ಷಣ ಸಭೆ ಕರೆದು ನಿರ್ಧಾರ ಪ್ರಕಟಿಸಬೇಕು' ಎಂದು ಶಿವು ಮೇಲ್ನಾಡ ಆಗ್ರಹಿಸಿದರು. ವಿಜಯ್ ಕಾಂಬಳೆ, ರಾಜು ನಾಯಕ್, ಮುತ್ತು ಹಲಗಲಿ, ಮನೋಜ್ ಈ ವೇಳೆ ಹಾಜರಿದ್ದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ-ಸರಳ ಗಣೇಶೋತ್ಸವ ಆಚರಣೆಗೆ ನಿರ್ಧಾರ
ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಿ, ರಾಮಮಂದಿರ ವಿರೋಧಿಗಳನ್ನು ಪಾಕ್ಗೆ ಕಳಹಿಸಿ: ಮುತಾಲಿಕ್
ವಿಶ್ವ ಹಿಂದು ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೇಲ್ನಾಡ ಮಾತನಾಡಿ, 'ಜಿಲ್ಲಾಡಳಿತ ಗಣೇಶೋತ್ಸವ ಮಂಡಳಿಗಳು, ಸಾರ್ವಜನಿಕರನ್ನು ಕರೆದು ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿತ್ತು. ತಲತಲಾಂತರದಿಂದ ಬಂದಿರುವ ಮೂರ್ತಿ ಪ್ರತಿಷ್ಠಾಪನೆ ಕೈಬಿಡಲು ಆಗುವುದಿಲ್ಲ. ರಾಜ್ಯ ಸರಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದಾಗ ಜಿಲ್ಲಾಡಳಿತ ಆಗಸ್ಟ್ 22 ರಿಂದ ನಿಷೇಧಾಜ್ಞೆ ಜಾರಿಗೊಳಿಸಿದೆ.'
ಅನುಮತಿ ಕೊಡದಿದ್ರೂ ಗಣೇಶ ಕೂರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಸರಕಾರಕ್ಕೆ ಮುತಾಲಿಕ್ ಸವಾಲು
'ನಾವು ದೇವಸ್ಥಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸರಳವಾಗಿ ಉತ್ಸವ ಆಚರಿಸಲು ನಿರ್ಧರಿಸಿದ್ದೇವೆ. ಪುಟ್ಟ ಮೂರ್ತಿ ಸ್ಥಾಪಿಸಿ ಉತ್ಸವ ನಡೆಸುತ್ತೇವೆ. ಜಿಲ್ಲಾಡಳಿತ ತಕ್ಷಣ ಸಭೆ ಕರೆದು ನಿರ್ಧಾರ ಪ್ರಕಟಿಸಬೇಕು' ಎಂದು ಶಿವು ಮೇಲ್ನಾಡ ಆಗ್ರಹಿಸಿದರು. ವಿಜಯ್ ಕಾಂಬಳೆ, ರಾಜು ನಾಯಕ್, ಮುತ್ತು ಹಲಗಲಿ, ಮನೋಜ್ ಈ ವೇಳೆ ಹಾಜರಿದ್ದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ-ಸರಳ ಗಣೇಶೋತ್ಸವ ಆಚರಣೆಗೆ ನಿರ್ಧಾರ