ಆ್ಯಪ್ನಗರ

ಮಹಿಳೆ ಸಾವು, ಇಬ್ಬರಿಗೆ ಗಾಯ

ಜಮಖಂಡಿ(ಗ್ರಾ): ಕಬ್ಬು ತುಂಬಿಕೊಂಡು ಪ್ಯಾಕ್ಟರಿಗೆ ಸಾಗುತ್ತಿದ್ದ ಮಾರ್ಗ ಮಧ್ಯ ಚಾಲಕನ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್‌ ರಸ್ತೆ ಬದಿಗೆ ಇದ್ದ ಗುಡಿಸಲು ಮೇಲೆ ಬಿದ್ದು ಪರಿಣಾಮ ಒಬ್ಬರು ಸ್ಥಳದಲ್ಲಿ ಮೃತಪಟ್ಟು, ಇಬ್ಬರು ಗಂಭಿರವಾಗಿ ಗಾಯಗೊಂಡ ಘಟನೆ ಸಮೀಪದ ಕಂಕಣವಾಡಿ ಕ್ರಾಸ್‌ ಬಳಿ ನಡೆದಿದೆ.

Vijaya Karnataka 18 Feb 2019, 5:00 am
ಜಮಖಂಡಿ(ಗ್ರಾ): ಕಬ್ಬು ತುಂಬಿಕೊಂಡು ಪ್ಯಾಕ್ಟರಿಗೆ ಸಾಗುತ್ತಿದ್ದ ಮಾರ್ಗ ಮಧ್ಯ ಚಾಲಕನ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್‌ ರಸ್ತೆ ಬದಿಗೆ ಇದ್ದ ಗುಡಿಸಲು ಮೇಲೆ ಬಿದ್ದು ಪರಿಣಾಮ ಒಬ್ಬರು ಸ್ಥಳದಲ್ಲಿ ಮೃತಪಟ್ಟು, ಇಬ್ಬರು ಗಂಭಿರವಾಗಿ ಗಾಯಗೊಂಡ ಘಟನೆ ಸಮೀಪದ ಕಂಕಣವಾಡಿ ಕ್ರಾಸ್‌ ಬಳಿ ನಡೆದಿದೆ.
Vijaya Karnataka Web woman death two injured
ಮಹಿಳೆ ಸಾವು, ಇಬ್ಬರಿಗೆ ಗಾಯ


ಕಲ್ಲವ್ವಾ ಭಿ.ಸೋರಗಾಂವಿ(50) ಮೃತರು. ಭೀಮಪ್ಪ ಸೋರಗಾಂವಿ, ಶಿವಪ್ಪ ಕಿಸ್ತಿ ಗಾಯಗೊಂಡಿದ್ದಾರೆ.

ಜಮಖಂಡಿಯಿಂದ ಮೈಗೂರ-ಹಿಪ್ಪರಗಿಯ ಸಾಯಿಪ್ರಿಯಾ ಶುಗರ್ಸ್‌ ಕಾರ್ಖಾನೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್‌ ಕಂಕಣವಾಡಿ ಕ್ರಾಸ್‌ ಹತ್ತಿರ ರಸ್ತೆ ಬದಿಗೆಬಿದ್ದ ಭೀಮಪ್ಪ ಸೋರಗಾಂವಿಗೆ ಸೇರಿದ ಗುಡಿಸಿಲಿನ ಮೇಲೆ ಟ್ರೇಲರ್‌ ಸಮೇತವಾಗಿ ಉರಳಿದ ಪರಿಣಾಮ ಈ ಘಟನೆ ಸಂಭವಿಸಿದೆ.

ರಾತ್ರಿಯಾದ ಕಾರಣ ಕಲವ್ವಾ ಸೊರಗಾಂವಿ ಮೇಲೆ ಹೆಚ್ಚಿನ ಪ್ರಮಾಣದ ಕಬ್ಬು ಬಿದ್ದಿದ್ದರಿಂದ ತೆರವುಗೊಳಿಸಿಲು ಸಾಧ್ಯವಾಗಲಿಲ್ಲದ್ದರಿಂದ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಗುಡಿಸಲಲ್ಲೆ ಮಲಗಿದ್ದ ಇಬ್ಬರೂ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ