ಆ್ಯಪ್ನಗರ

ಸಾರಿಗೆ ಸಂಸ್ಥೆ ಉದ್ಯೋಗಿ ಆತ್ಮಹತ್ಯೆಗೆ ಯತ್ನ

ಶಾರದಾ ವಿರುದ್ಧ ಚಾಲಕ ದೂರು ನೀಡಿದ ಹಿನ್ನೆಲೆಯಲ್ಲಿ ಭದ್ರತಾ ಅಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಈ ಬಗ್ಗೆ ಶಾರದಾ ಅವರನ್ನು ಅಮಾನತುಗೊಳಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದರು.

Vijaya Karnataka Web 5 Feb 2019, 10:05 pm
ಬಾಗಲಕೋಟೆ: ಅಮಾನತು ಆದೇಶದಿಂದ ಮನನೊಂದು ವಾಕರಸಾ ಸಂಸ್ಥೆಯ ಮಹಿಳಾ ಉದ್ಯೋಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web ಆತ್ಮತಹ್ಯೆಗೆ ಯತ್ನಿಸಿದ ಶಾರದಾ
ಆತ್ಮತಹ್ಯೆಗೆ ಯತ್ನಿಸಿದ ಶಾರದಾ


ನಗರದ ವಾಕರಸಾ ಸಂಸ್ಥೆಯ ಡಿಪೋದ ಭದ್ರತಾ ನಿರೀಕ್ಷಕಿ ಶಾರದಾ ಅಂಬಲಿ (28) ಆತ್ಮಹತ್ಯೆಗೆ ಯತ್ನಿಸಿದವರು. ಡಿಪೋದಲ್ಲಿ ಬಳಸಲಾಗುವ ಕ್ರೀಂ ನುಂಗಿ ಅಸ್ವಸ್ಥಗೊಂಡ ಶಾರದಾ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಭದ್ರತಾ ನಿರೀಕ್ಷಕಿಯಾಗಿ ಕಾರ್ಯನಿರ್ವಹಿಸುವ ಶಾರದಾ ಮೂರು ತಿಂಗಳ ಹಿಂದೆ ನಡೆದಿದ್ದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಚಾಲಕರೊಬ್ಬರನ್ನು ಮದ್ಯ ಸೇವನೆಯ ಯಂತ್ರದ ಮೂಲಕ ಪರೀಕ್ಷಿಸಿದಾಗ ಮದ್ಯ ಸೇವಿಸಿದ ಬಗ್ಗೆ ಮಾಹಿತಿ ದೊರೆಯಿತು. ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಮದ್ಯ ಸೇವನೆ ಮಾಡಿಲ್ಲ ಎಂಬುದು ತಿಳಿಯಿತು.

ಆಗ ಶಾರದಾ ವಿರುದ್ಧ ಚಾಲಕ ದೂರು ನೀಡಿದ ಹಿನ್ನೆಲೆಯಲ್ಲಿ ಭದ್ರತಾ ಅಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಈ ಬಗ್ಗೆ ಶಾರದಾ ಅವರನ್ನು ಅಮಾನತುಗೊಳಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದರು.

'ಶಾರದಾ ಅವರ ತಪ್ಪು ಇಲ್ಲದಿದ್ದರೂ ಆರೋಪ ಹೊರಿಸಲಾಗಿದೆ, ಅಧಿಕಾರಿಗಳು ವಿನಾಕಾರಣ ಕಿರಕುಳ ನೀಡಿದ್ದಾರೆ. ಈ ಕಾರಣದಿಂದ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಧಿಕಾರಿಗಳೇ ಆತ್ಮಹತ್ಯೆಗೆ ಕಾರಣರಾಗಿದ್ದಾರೆ' ಎಂದು ಕುಟುಂಬ ವರ್ಗದವರು ಆರೋಪಿಸಿದ್ದಾರೆ. ಈ ಕುರಿತು ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ