ಆ್ಯಪ್ನಗರ

ಕಷ್ಟಪಟ್ಟರೆ ಇಷ್ಟದ ಬದುಕು: ಸಿದ್ದೇಶ್ವರ ಶ್ರೀ

ಸಾವಳಗಿ: ಭೂಮಿ, ಮಳೆ, ನೀರು ಮತ್ತು ಆಹಾರವನ್ನು ಆ ಭಗವಂತ ನಮಗೆ ನೀಡಿದ್ದಾನೆ. ಪ್ರಕೃತಿಯಿಂದ ಪ್ರತಿ ಸೌಲಭ್ಯ ಪಡೆದ ನಾವು ಭಾಗ್ಯವಂತರು ಎಂದು ಅರಿತು ಪ್ರತಿಕ್ಷಣದಲ್ಲೂಸಂತೋಷ ಜೀವನ ನಡೆಸುವುದನ್ನು ಕಲಿಯಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಹೇಳಿದರು.

Vijaya Karnataka 30 Aug 2019, 5:00 am
ಸಾವಳಗಿ: ಭೂಮಿ, ಮಳೆ, ನೀರು ಮತ್ತು ಆಹಾರವನ್ನು ಆ ಭಗವಂತ ನಮಗೆ ನೀಡಿದ್ದಾನೆ. ಪ್ರಕೃತಿಯಿಂದ ಪ್ರತಿ ಸೌಲಭ್ಯ ಪಡೆದ ನಾವು ಭಾಗ್ಯವಂತರು ಎಂದು ಅರಿತು ಪ್ರತಿಕ್ಷಣದಲ್ಲೂಸಂತೋಷ ಜೀವನ ನಡೆಸುವುದನ್ನು ಕಲಿಯಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಹೇಳಿದರು.
Vijaya Karnataka Web work hard enjoy life siddeshwar shree
ಕಷ್ಟಪಟ್ಟರೆ ಇಷ್ಟದ ಬದುಕು: ಸಿದ್ದೇಶ್ವರ ಶ್ರೀ


ಸಾವಳಗಿ ಭವಾನಿ ಕೋ.ಆಪ್‌.ಕ್ರೆಡಿಟ್‌ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಷ್ಟ ಪಟ್ಟು ಹಣಗಳಿಸಿ ಒಯ್ದು ಬ್ಯಾಂಕ್‌ನಲ್ಲಿಇಟ್ಟು ಡಬಲ್‌ ಆಗ್ಲಿಎಂದರೆ ಹೇಗೆ? ಕಷ್ಟದಲ್ಲಿರುವ ವ್ಯಕ್ತಿಗೆ ಬ್ಯಾಂಕ್‌ನವರು ಸಹಾಯ ಮಾಡಿ ತಾವು ಬೆಳೆದು, ನಿಮ್ಮನ್ನು ಬೆಳೆಸುತ್ತಾರೆ. ಸೊಸೈಟಿಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಹಕಾರಿಗಳು ಮತ್ತು ಗ್ರಾಹಕರು ಪ್ರಗತಿ ಹೊಂದಲು ಸಾಧ್ಯ ಎಂದರು.

ಯಾವ ಸಹಕಾರಿ ಸಂಘಗಳು ರೈತರ ಸೇವೆ ಮಾಡುತ್ತವೆಯೋ ಅವು ಪುಣ್ಯ ಪಡೆದಿವೆ. ರೈತ ಸುಖದಿಂದ ಬದುಕಿದರೆ ಮಾತ್ರ ನಮ್ಮೆಲ್ಲರ ಬದುಕು ಚೆನ್ನಾಗಿರುತ್ತದೆ. ಆತನ ಏಳ್ಗೆಯೇ ನನ್ನ ಏಳ್ಗೆ ಎಂದು ಸಂಘಗಳು ಕೆಲಸ ಮಾಡಬೇಕು. ನಿಸರ್ಗದೊಂದಿಗೆ ಬಾಳಿ ಹೆಚ್ಚಿನ ಆಸೆ ಪಡದೆ ಊರು, ದೇಶವನ್ನು ಸಿರಿವಂತಗೊಳಿಸಬೇಕು ಎಂದರು.

ಶ್ರೀಮಂತ, ಬಡವರು ತಿನ್ನುವುದು ರೊಟ್ಟಿಯನ್ನೇ ವಿನಃ ಶ್ರೀಮಂತ ಹಣ, ಜ್ಞಾನಿ ಪುಸ್ತಕ ತಿನ್ನಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ರೊಟ್ಟಿನೇ ಬೇಕು. ಭೂಮಿಯಲ್ಲಿದುಡಿದು ಮಲಗಿದಾಗ ಬರುವ ನಿದ್ರೆಯೇ ಸಮೃದ್ಧ ಜೀವನ. ಅನ್ನ ನೀರು, ನಿಸರ್ಗ ಸಮೃದ್ದಿ, ಯಾವುದರಿಂದ ಸಂತೋಷವಾಗುತ್ತದೆಯೋ ಅಂತಹ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕೊಣ್ಣುರ ಹೊರಗಿನ ಮಠ ಡಾ.ವಿಶ್ವಪ್ರಭು ಶಿವಾಚಾರ್ಯರು, ಶಿವಲಿಂಗ ಶ್ರೀ ಗಳು ಮಾತನಾಡಿದರು. ಬಸವರಾಜ ನ್ಯಾಮಗೌಡ, ಅಜಯಕುಮಾರ ಸರನಾಯಕ, ಶಿವಾನಂದ ಉದಪುಡಿ, ಮೋಹನ ಜಾಧವ, ಡಾ.ಸಿದ್ದು ದಿವಾಣ, ಇರ್ಷಾದ ಮುಲ್ಲಾ, ಉಮೇಶ ದಳವಾಯಿ, ಭೀಮಸಿ ಕದಮ ಇದ್ದರು.

ನನಗೂ ಒಳ್ಳೆಯದಾಗಲಿ, ಮತ್ತೊಬ್ಬರಿಗೂ ಒಳ್ಳೆಯದಾಗಲಿ, ನನ್ನ ಸುತ್ತ ಇರುವ ಜನರಿಗೆ ಯಾವುದಕ್ಕೂ ಕೊರತೆ ಇರದ ಸಮೃದ್ಧ ಜೀವನ ಕೊಡು. ಎಲ್ಲಪ್ರಾಣಿಗಳಿಗೂ ತಿನ್ನಲು ಆಹಾರವಿರಲಿ. ಶಾಂತಿಯುತ ಜೀವನ ಕರುಣಿಸು ಎನ್ನುವುದು ನಮ್ಮೆಲ್ಲರ ಪಾರ್ಥನೆಯಾಗಬೇಕು.
ಸಿದ್ದೇಶ್ವರ ಶ್ರೀಗಳು ವಿಜಯಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ