ಆ್ಯಪ್ನಗರ

ನರೇಗಾ ಕೂಲಿಗೆ ಕಾರ್ಮಿಕರ ಆಗ್ರಹ: ಜಿಪಂ ಸಿಇಒ ಎದುರು ಅಳಲು

ನರೇಗಾ ನಮ್ಮ ಖಾತೆಗೆ ಸರಿಯಾಗಿ ಜಮೆ ಆಗುತ್ತಿಲ್ಲ. ಹನ್ನೊಂದು ತಿಂಗಳ ಹಿಂದಿನ ಪಗಾರವೇ ಈ ವರೆಗೆ 30 ಜನರಿಗೆ ಬಂದಿಲ್ಲ. ದುಡಿದು ತಿನ್ನುವವರಿಗೆ ಹೀಗಾದರೆ ಏನು ಮಾಡುವುದು ಎಂದು ನರೇಗಾ ಕೂಲಿ ಕಾರ್ಮಿಕರು ಜಿಪಂ ಸಿಇಒ ಎದುರು ಅಳಲು ತೋಡಿಕೊಂಡರು.

Vijaya Karnataka Web 18 Dec 2020, 11:28 pm
ಗುಳೇದಗುಡ್ಡ: ಕಷ್ಟ ಕಾಲದಲ್ಲಿ ನರೇಗಾದಿಂದ ಕೂಲಿ ಕೆಲಸ ಸಿಕ್ಕಿದೆ. ಆದರೆ ನಾವು ದುಡಿದ ಪಗಾರ ನಮ್ಮ ಖಾತೆಗೆ ಸರಿಯಾಗಿ ಜಮೆ ಆಗುತ್ತಿಲ್ಲ. ಹನ್ನೊಂದು ತಿಂಗಳ ಹಿಂದಿನ ಪಗಾರವೇ ಈ ವರೆಗೆ 30 ಜನರಿಗೆ ಬಂದಿಲ್ಲ. ದುಡಿದು ತಿನ್ನುವವರಿಗೆ ಹೀಗಾದರೆ ಏನು ಮಾಡುವುದು ಎಂದು ನರೇಗಾ ಕೂಲಿ ಕಾರ್ಮಿಕರು ಜಿಪಂ ಸಿಇಒ ಎದುರು ಅಳಲು ತೋಡಿಕೊಂಡರು.
Vijaya Karnataka Web Mgnrega---BCCL


ಸಮೀಪದ ಕೋಟೆಕಲ್ಲಗಾಪಂ ವ್ಯಾಪ್ತಿಯ ತೋಗುಣಸಿ ಗ್ರಾಮದಲ್ಲಿನರೇಗಾದಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿಪಂ ಸಿಇಒ ಟಿ.ಭೂಬಾಲನ್‌ ಭೇಟಿ ನೀಡಿದ ವೇಳೆ ಕಾರ್ಮಿಕರು ಅಳಲು ತೋಡಿಕೊಂಡರು.

ಪಿಡಿಒಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಪ್ರತಿ ಕುಟುಂಬದಿಂದ 3-4 ಜನರು ಕೆಲಸಕ್ಕೆ ಬರುತ್ತೇವೆ. ಅವರಲ್ಲಿಇಬ್ಬರ ಪಗಾರ ಬಂದರೆ, ಉಳಿದವರಿಗೆ ಬರುವುದಿಲ್ಲ. ಅಲ್ಲದೆ, ಪಗಾರವನ್ನು ಹೆಚ್ಚಳ ಮಾಡಬೇಕು. ಕಾರ್ಮಿಕರು ಕೆರೆ ಕೆಲಸಕ್ಕೆ ಹೋಗಲು ಸರಿಯಾದ ದಾರಿಯಿಲ್ಲ. ಮುಳ್ಳು ಕಂಟಿ ತುಳಿದುಕೊಂಡು ಕೆಲಸಕ್ಕೆ ಬರಬೇಕು ಎಂದರು.

ಬಾದಾಮಿಯಿಂದ ಕಟ್ಟ ಕಡೆಯ ಸ್ಪರ್ಧೆ ? ನಿವೃತ್ತಿಯಾಗ್ತಾರಾ ಸಿದ್ದರಾಮಯ್ಯ ?

ಕೂಲಿ ಪಾವತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಸಿಇಒ, ಜಮ್ಮನಕಟ್ಟಿ, ಕಟಿಗೇರಿ, ಹಂಗರಗಿ, ಕೋಟೆಕಲ್ಲಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಎಲ್ಲಕಡೆ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ತಾಪಂ ಅಧಿಕಾರಿ ಸಿದ್ದಪ್ಪ ನಕ್ಕರಗುಂದಿ,ಅಭಿಯಂತರ ಗುರಗುನ್ನಿ, ಯಮನವ್ವ ಪೂಜಾರ, ರವಿ ಕೋಟಿ, ಮಂಜುನಾಥ ಬೆಳ್ಳಿ, ಮಂಜುನಾಥ ಬಡಿಗೇರ, ಬಸವರಾಜ ಬೇವಿನಮಟ್ಟಿ , ಪಿಡಿಒ ಲಕ್ಷ್ಮಣ ಶಾಂತಗೇರಿ ಇತರರಿದ್ದರು.

ಕಲಾದಗಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು!

ದಾರಿ ಏಕೆ ಮಾಡಿಲ್ಲ
ಕೆರೆಯ ಕೆಲಸಕ್ಕೆ ಬರುವ ಕಾರ್ಮಿಕರಿಗೆ ದಾರಿ ಏಕೆ ಮಾಡಿಲ್ಲ ಎಂದು ಸ್ಥಳದಲ್ಲಿದ್ದ ಕೋಟೆಕಲ್ಲಗ್ರಾಪಂ ಪಿಡಿಒ ಅವರನ್ನು ಜಿಪಂ ಸಿಇಒ ಎದುರೇ ಕಾರ್ಮಿಕರು ತರಾಟೆಗೆ ತೆಗೆದುಕೊಂಡರು. ಈ ವೇಳೆ ''ಪಗಾರ ಬಾರದಿರುವವರ ಪಟ್ಟಿ ಕಳುಹಿಸಿಕೊಡಿ. ಕಾರ್ಮಿಕರಿಂದ ದೂರು ಬಾರದಂತೆ ಕೆಲಸ ನಡೆಯಬೇಕು. ಕೆರೆ ಕೆಲಸಕ್ಕೆ ಪುರುಷರಗಿಂತ ಮಹಿಳೆಯರು ಹೆಚ್ಚು ಬರುವಂತಾಗಬೇಕು. ಸಂಚರಿಸಲು ದಾರಿ ಮಾಡಬೇಕು'' ಎಂದು ಪಿಡಿಒಗೆ ಸಿಇಒ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ