ಆ್ಯಪ್ನಗರ

ಯುಥ್‌ ಕಾಂಗ್ರೆಸ್‌ ಪ್ರತಿಭಟನೆ

ಬಾಗಲಕೋಟೆ: ನೆರೆ ಪ್ರವಾಹದಲ್ಲಿಸಂತ್ರಸ್ತರಿಗೆ ದೊರಕಿಸಿದ ಸೌಲಭ್ಯಗಳ ಕುರಿತು ಸರಕಾರ ಸೂಕ್ತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಯುಥ್‌ ಕಾಂಗ್ರೆಸ್‌ ಘಟಕದಿಂದ ಶನಿವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.

Vijaya Karnataka 20 Oct 2019, 5:00 am
ಬಾಗಲಕೋಟೆ: ನೆರೆ ಪ್ರವಾಹದಲ್ಲಿಸಂತ್ರಸ್ತರಿಗೆ ದೊರಕಿಸಿದ ಸೌಲಭ್ಯಗಳ ಕುರಿತು ಸರಕಾರ ಸೂಕ್ತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಯುಥ್‌ ಕಾಂಗ್ರೆಸ್‌ ಘಟಕದಿಂದ ಶನಿವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.
Vijaya Karnataka Web youth congress protest
ಯುಥ್‌ ಕಾಂಗ್ರೆಸ್‌ ಪ್ರತಿಭಟನೆ


ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನಾ ರಾರ‍ಯಲಿ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರವಾಹ ಸಂತ್ರಸ್ತರಿಗೆ ಬೇಕಿರುವ ಸರಿಯಾದ ಪರಿಹಾರ ನೀಡುತ್ತಿಲ್ಲಎಂದು ಆರೋಪಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯುವ ಘಟಕದ ಜಿಲ್ಲಾಧ್ಯಕ್ಷ ವಿನಯ ತಿಮ್ಮಾಪೂರ ಮಾತನಾಡಿ, ಜಿಲ್ಲೆಯಲ್ಲಿಉಂಟಾದ ಪ್ರವಾಹದಿಂದ ನಿರಾಶ್ರಿತರಾದವರಿಗೆ ಸರಕಾರ 4.80 ಕೋಟಿ ರೂ. ವೆಚ್ಚದಲ್ಲಿ303 ಶೆಡ್‌ ನಿರ್ಮಿಸಿದೆ ಎಂದು ಹೇಳಿದೆ. ಯಾವ ತಾಲೂಕಿನಲ್ಲಿಎಷ್ಟು ವೆಚ್ಚದಲ್ಲಿಶೆಡ್‌ ನಿರ್ಮಿಸಿದೆ ಎಂಬ ಮಾಹಿತಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸರಕಾರ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿದ್ದು, ಈ ಪರಿಹಾರದಿಂದ ಮನೆ ನಿರ್ಮಾಣ ಅಸಾಧ್ಯವಾಗಿದ್ದರಿಂದ ಕನಿಷ್ಠ 10 ಲಕ್ಷ ರೂ.ಪರಿಹಾರ ನೀಡಬೇಕು. ಪ್ರವಾಹದಿಂದ ಆಗಿರುವ ನಷ್ಟದ ಬಗ್ಗೆ ಸರಕಾರ ಕೇಂದ್ರಕ್ಕೆ ಸರಿಯಾದ ವರದಿ ನೀಡಿಲ್ಲ. ಪ್ರವಾಹದಿಂದ ಇಲ್ಲಿನ ಜನ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿ ತತ್‌ಕ್ಷಣ ರಾಜ್ಯಕ್ಕೆ ಪರಿಹಾರ ಬೇಕು ಎಂದು ಕೇಳದೆ, ಜನರನ್ನು ಮತ್ತಷ್ಟು ಸಂಕಷ್ಟದಲ್ಲಿತೊಡಗಿಸಿದೆ ಎಂದು ಆರೋಪಿಸಿದರು. ಹಾನಿಗೊಳಗಾದ ಮನೆಗಳನ್ನು ಎ,ಬಿ,ಸಿ ವಿಂಗಡಿಸದೆ ಪ್ರವಾಹಕ್ಕೆ ಸಿಲುಕಿದ ಎಲ್ಲಮನೆಗಳಿಗೆ ಒಂದೇ ರೀತಿಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮಹಾರಾಷ್ಟ್ರದಲ್ಲಿಪ್ರವಾಹ ಉಂಟಾಗಿ ಅಲ್ಲಿನ ಜನರು ಅನೇಕ ತೊಂದರೆ ಅನುಭವಿಸುತ್ತಿದ್ದ ಸಂದರ್ಭದಲ್ಲಿಅಲ್ಲಿನ ಮುಖ್ಯಮಂತ್ರಿ ಕೇಂದ್ರಕ್ಕೆ ಪತ್ರ ಬರೆದು ತುರ್ತಾಗಿ 6,813ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ನಮ್ಮ ಮುಖ್ಯಮಂತ್ರಿ ಮಾತ್ರ ಇಲ್ಲಿಯವರೆಗೆ ಕೇಂದ್ರಕ್ಕೆ ಪರಿಹಾರ ನೀಡಿ ಎಂದು ಮನವಿ ಮಾಡಿಲ್ಲ. ಬರೆದಿದ್ದರೆ ಕೇಳಿದ ಮೊತ್ತವೆಷ್ಟು ಎಂದು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಯುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಮಪ್ಪ ಮಾಂಗ, ಪ್ರವೀಣ ಪಾಟೀಲ, ಜಿಲ್ಲಾಪ್ರಧಾನ ಕಾರ್ಯದರ್ಶಿ ಚಿನ್ನು ಅಂಬಿ, ಆರೀಫ್‌ ಮೋಮೀನ್‌, ಪ್ರಕಾಶ ಮಾಂಗ, ಸಚಿನ ಕನಕರಡ್ಡಿ, ರಮೇಶ ತೇಲಿ, ಸೂರಜ ಅವಟಿ, ನಿಸಾರ ಪಟ್ಟೆವಾಲ್‌, ಬಸು ಕಲಕುಟಿ, ರಂಗು ಮಲಕನ್ನವರ, ಆನಂದ ಕೊಡಗ, ಬಸು ಪಾಟೀಲ, ಸದು ಪಾಟೀ, ಆಕಾಶ ದೊಡಮನಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ